500 ವರ್ಷದ ಪ್ರಜಾಸತ್ತಾತ್ಮಕ ಮಾದರಿ
Team Udayavani, Jan 24, 2021, 2:37 AM IST
ಉಡುಪಿ: ಶ್ರೀಕೃಷ್ಣಮಠದ 500 ವರ್ಷಗಳಿಂದ ನಡೆದು ಬರುತ್ತಿರುವ ಪರ್ಯಾಯ ಪೂಜಾ ಪದ್ಧತಿ ತತ್ತÌಜ್ಞಾನ ಕ್ಷೇತ್ರದಲ್ಲಿರುವ ಪ್ರಜಾ ಸತ್ತಾತ್ಮಕ ವ್ಯವಸ್ಥೆಯ ಮಾದರಿ ಎಂದು ರಾಜಕೀಯ ಮುಂದಾಳು, ಉಡುಪಿಯ ಹಿಂದಿನ ಎಸ್ಪಿ ಅಣ್ಣಾಮಲೈ ಬಣ್ಣಿಸಿದರು.
ಶನಿವಾರ ಶ್ರೀಕೃಷ್ಣಮಠದ ಪರ್ಯಾಯ ಪಂಚ ಶತಮಾನೋ ತ್ಸವದ ಸಮಾರೋಪ ಸಮಾ ರಂ» ದಲ್ಲಿ ಆನ್ಲೈನ್ ಸಂದೇಶ ನೀಡಿದ ಅವರು, ಸಾವಿರಾರು ವರ್ಷಗಳ ಹಿಂದೆಯೂ ಭಾರತದಲ್ಲಿ ಚುನಾ ಯಿತ ಆಡಳಿತ ಮಂಡಳಿಗಳು ರಾಜ ಪ್ರಭುತ್ವ ದಲ್ಲಿ ಇದ್ದಿರುವುದನ್ನು ನೋಡು ತ್ತೇವೆ. ಹೀಗೆ ಭಾರತದಲ್ಲಿ ಪ್ರಜಾ ಪ್ರಭುತ್ವ ರಕ್ತಗತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಮಠದ ಶ್ರೀಈಶ ಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಎಲ್ಲರ ಸಹಕಾರದಿಂದ ಮಾತ್ರ ಒಂದು ವ್ಯವಸ್ಥೆ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಕಟೀಲು ದೇವಸ್ಥಾನದ ಅರ್ಚಕ ಹರಿ ನಾರಾಯಣದಾಸ ಆಸ್ರಣ್ಣ ಅನಿಸಿಕೆ ವ್ಯಕ್ತಪಡಿಸಿದರು. ಆನೆಗುಡ್ಡೆ ದೇವಸ್ಥಾನದ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಅಭ್ಯಾಗತರಾಗಿದ್ದರು.
ಸಾಧಕರಿಗೆ ಸಮ್ಮಾನ :
ವೈದಿಕ ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ, ಕೆಕೆ ಪೈ ಅವರ ಸ್ಮರಣಾರ್ಥ ಮೊಮ್ಮಗ ಅಶ್ವಿನ್ ಪೈ, ವಿಜಯನಾಥ ಶೆಣೈ ಸ್ಮರಣಾರ್ಥ ಪತ್ನಿ ಮಂಜುಳಾ, ಪುತ್ರಿ ಅನುರೂಪಾ, ದೇವರಾಜ್ ಪರವಾಗಿ ರಾಜೇಶ ರಾವ್, ಟಿ.ವಿ.ರಾವ್ ಪರವಾಗಿ ಪುತ್ರ ಡಾ| ಶ್ರೀನಿವಾಸ ರಾವ್, ಮೂಡುಬಿದಿರೆ ಅಮರನಾಥ ಶೆಟ್ಟಿ ಅವರ ಪರವಾಗಿ ಪತ್ನಿ ಜಯಶ್ರೀ, ಕೆ.ವಿ.ಬಿಳಿರಾಯ ಅವರ ಪರವಾಗಿ ಪುತ್ರ ಸುರೇಶ ಬಿಳಿರಾಯ, ಹಿರಿಯರಾದ ಎ.ಜಿ.ಕೊಡ್ಗಿ, ಅಪ್ಪಣ್ಣ ಹೆಗ್ಡೆ, ಎಂ.ಸೋಮಶೇಖರ ಭಟ್, ಗುಜ್ಜಾಡಿ ಪ್ರಭಾಕರ ನಾಯಕ್, ಯು.ಕೆ. ರಾಘವೇಂದ್ರ ರಾವ್, ಪ್ರೊ| ಎಂ.ಎಲ್. ಸಾಮಗರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರ ಪರವಾಗಿ ಪ್ರೊ| ಸಾಮಗ ಮಾತನಾಡಿದರು.
ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿ ವೈ.ಎನ್. ರಾಮಚಂದ್ರ ರಾವ್ ವಂದಿಸಿದರು. ಇದಕ್ಕೂ ಮುನ್ನ ಶ್ರೀಕೃಷ್ಣಮಠದ ಸಾಮಾಜಿಕ ಮತ್ತು ಆರ್ಥಿಕ ಕೊಡುಗೆಗಳ ಕುರಿತು ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜೆ¾ಂಟ್ನ ನಿವೃತ್ತ ನಿರ್ದೇಶಕ ಡಾ|ಎಂ.ಆರ್. ಹೆಗಡೆ ಮಾತನಾಡಿದರು.
ಕೃಷಿ ಕ್ಷೇತ್ರಕ್ಕೆ ಹೊಸ ರಕ್ತ ಅಗತ್ಯ :
ಕೃಷಿ ಕ್ಷೇತ್ರ ಲಾಭದಾಯಕವಾಗಬೇಕಾದರೆ ಹೊಸ ರಕ್ತದ ಅಗತ್ಯವಿದೆ. ಯುವಕರಿಂದಲೇ ಹೊಸ ತಂತ್ರಜ್ಞಾನ, ಹೊಸ ಬೆಳೆ- ನೀರಾವರಿ- ಸಾವಯವ ಪ್ರಯೋಗ, ಹೊಸ ಮಾರುಕಟ್ಟೆ ಹೀಗೆ ನಾನಾ ಮುಖಗಳಲ್ಲಿ ಬದಲಾವಣೆ ಆಗಬೇಕು ಎಂದು ಅಣ್ಣಾಮಲೈ ಹೇಳಿದರು.
ಅಮೆರಿಕದ ಸೇಬು 20 ದಿನಗಳಲ್ಲಿ ಬರುತ್ತದೆ. ಆದರೆ ನಮ್ಮದೇ ಆದ ಕಾಶ್ಮೀರ, ಹಿಮಾಚಲಪ್ರದೇಶದ ಸೇಬುಗಳು ಬರುತ್ತಿಲ್ಲ. ಇದಕ್ಕೆ ಬೇಕಾದ ಮಾರುಕಟ್ಟೆ, ತಂತ್ರಜ್ಞಾನ ರೂಪುಗೊಳ್ಳಬೇಕಾಗಿದೆ ಎಂದರು.
ಈಗ ಪ್ರಸಿದ್ಧವಾದ ಸೇವಾ ಕ್ಷೇತ್ರ ವಿಸ್ತರಣೆಯಾಗುವಾಗ ಮಹಿಳೆಯರಿಗೆ ಉದ್ಯೋಗ ಕೊಡಬೇಕೆ? ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕೆ ಎಂಬ ಪ್ರಶ್ನೆಗಳು ಬಂದಿದ್ದವು. ಈಗ ಅದೇ ರೀತಿ ಕೃಷಿ ಕ್ಷೇತ್ರ ಬದಲಾಗಬೇಕೆನ್ನುವಾಗ ವಿರೋಧ ಬರುತ್ತಿದೆ. ಆದರೆ ಬದಲಾವಣೆಯಾಗದೆ ಕೃಷಿಕರ ಆದಾಯ ಹೆಚ್ಚಲು ಸಾಧ್ಯವಿಲ್ಲ. ನಾವು ಇದುವರೆಗೆ ಕೃಷಿ ಕ್ಷೇತ್ರವನ್ನು ಸಬ್ಸಿಡಿ, ಸಾಲ ಮನ್ನಾದಲ್ಲಿ ನಡೆಸುತ್ತಿದ್ದೇವೆ ಎಂದು ಅಣ್ಣಾಮಲೈ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ