ಪಾಂಗಾಳದಲ್ಲಿ ಪ್ರಯಾಣಿಕರ ಸಂಕಷ್ಟ ;ಹೆದ್ದಾರಿ ಬದಿ ತಂಗುದಾಣಗಳ ಕೊಡುಗೆ
Team Udayavani, Mar 27, 2019, 9:59 PM IST
ಉಡುಪಿ : ಇಲ್ಲಿನ ಪಾಂಗಾಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಎರಡೂರು ಬದಿಗಳಲ್ಲಿ ಆರ್ಯಾಡಿ ಸುಬ್ಬಣ್ಣ ಶೆಟ್ಟಿ ಮನೆ ದಿವಂಗತ ಸಂಜೀವ ಶೆಟ್ಟಿ ಹಾಗೂ ಕೃಷ್ಣಿ ಶೆಡ್ತಿ ಇವರ ಸ್ಮರಣಾರ್ಥ ಅವರ ಮಕ್ಕಳು ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಬಸ್ ನಿಲ್ದಾಣಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.
ಪಿ.ಕೆ ಸಂಜೀವ ಶೆಟ್ಟಿ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು.ಉತ್ತಮ ಕೃಷಿಕರಾಗಿಯೂ ಹೆಸರುವಾಸಿಯಾಗಿದ್ದರು.
ತಂದೆಯವರ ಸವಿನೆನಪಿಗಾಗಿ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಪುತ್ರ ಗೋವಿಂದ ಶೆಟ್ಟಿಯವರು ಹೇಳಿದರು.
ಉದ್ಯಮಿ ಸುರೇಶ್ ಶೆಟ್ಟಿ ತಂಗುದಾಣಗಳನ್ನು ಲೋಕಾರ್ಪಣೆಗೊಳಿಸಿದರು, ಈ ವೇಳೆ ಗಣ್ಯರು ಹಾಜರಿದ್ದರು.
ರಸ್ತೆ ಕಾಮಗಾರಿಯ ವೇಳೆ ಬಸ್ ತಂಗುದಾಣವನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಅಪಘಾತಗಳೂ ಸಂಭವಿಸಿ ಪ್ರಾಣ ಹಾನಿಯಾಗಿತ್ತು. ಎರಡು ಜೀವಗಳು ರಸ್ತೆ ಅವಘಡಕ್ಕೆ ಬಲಿಯಾಗಿದ್ದವು.
ಕಟಪಾಡಿಯಲ್ಲಿರುವ ತಂಗುದಾಣ ಬಳಸಿಕೊಳ್ಳಲು ಮನವಿ
ಕಟಪಾಡಿ ಹೆದ್ದಾರಿ ಬದಿಯಲ್ಲಿ ಮೂರು ಬಸ್ ತಂಗುದಾಣಗಳಿದ್ದು ಪ್ರಯಾಣಿಕರು ಇದನ್ನು ಉಪಯೋಗಿಸುತ್ತಿಲ್ಲ. ನಾಲ್ಕು ಹೆಜ್ಜೆ ನಡೆಯಬೇಕೆಂಬ ಕಾರಣಕ್ಕೆ ಪ್ರಯಾಣಿಕರು ಬಸ್ ನಿಲ್ದಾಣವನ್ನು ಉಪಯೋಗಿಸುತ್ತಿಲ್ಲ.
ಕೆನರಾ ಬ್ಯಾಂಕ್ನವರು ನಿರ್ಮಿಸಿದ ತಂಗುದಾಣ ಅರ್ಧದಲ್ಲೇ ನಿಂತಿದೆ. ಪಂಚಾಯತ್ ಪಕ್ಷ ನಿರ್ಮಿಸಿದ ತಂಗುದಾಣ ಪ್ರಯಾಣಿಕರಿಗಾಗಿ ಕಾಯುತ್ತಿದೆ.
ಕಟಪಾಡಿಯ ಬಸ್ಗಳು , ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಪೋಷಕರ ಮಧ್ಯೆ ಕೇವಲ ಚರ್ಚೆಯಲ್ಲಿರುವ ಈ ಸಮಸ್ಯೆ ಬೇಗನೆ ಬಗೆ ಹರಿಯಬೇಕಾಗಿದೆ.
ಹೆದ್ದಾರಿ ದಟ್ಟನೆಗೂ ಇದು ಕಾರಣವಾಗಿದ್ದು, ಪ್ರತಿ ನಿತ್ಯ ಅವಘಡಗಳಿಗೆ ಕಾರಣವಾಗಿದೆ. ಅವಘಡಗಳು ನಡೆಯುವುದು ತಪ್ಪಿಸಲು ಸಾರ್ವಜನಿಕರು ನಾಲ್ಕು ಹೆಜ್ಜೆ ನಡೆದು ಹೊಸ ತಂಗುದಾಣಗಳನ್ನು ಉಪಯೋಗಿಸಿಕೊಂಡು ಸಂಭವಿಸಬಹುದಾದ ಅವಘಡಗಳನ್ನು ತಡೆಯಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್