ದಾರಿದೀಪ ನಿರ್ವಹಣೆ ಅವ್ಯವಸ್ಥೆ ನಗರ ಸಭೆಯ ತಪ್ಪು ನಿರ್ಧಾರಗಳ ಫಲ
Team Udayavani, Jun 29, 2018, 6:20 AM IST
ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ದಾರಿದೀಪಗಳ ಅಸಮರ್ಪಕ ನಿರ್ವಹಣೆಯಿಂದ ಎಲ್ಲ ಕಡೆ ದೂರುಗಳು ಕೇಳಿ ಬರುತ್ತಿದೆ. ಇದಕ್ಕೆ ನಗರಸಭೆಯ ತಪ್ಪು ನಿರ್ಧಾರ ಕಾರಣ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ಯಲ್ಲಿ ನಗರ ಪದಾಧಿಕಾರಿಗಳ ಪೇಜ್ ಪ್ರಮುಖರ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡು ತಿದ್ದ ಅವರು, ಒಂದು ದೀಪ ದುರಸ್ತಿ ಮಾಡಲು ದೂರು ನೀಡಿದ ನಾಗರಿಕ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಗರಾಡಳಿತ ನೇರ ಹೊಣೆಯಾಗಿದ್ದು ಇದರ ನಿರ್ವಹಣೆಗೆ ಸ್ಥಳೀಯ ಮಾಹಿತಿಯಿಲ್ಲದ ದೂರದ ಶಿವಮೊಗ್ಗದ ಗುತ್ತಿಗೆದಾರರನ್ನು ನೇಮಕ ಮಾಡಿರುವುದು ಮತ್ತು ಇದರಲ್ಲಿ ಅಪಾರ ಭ್ರಷ್ಟಾಚಾರ ನಡೆಸಿರುವುದರ ಬಗ್ಗೆ ಗುಮಾನಿಗಳಿವೆ ಎಂದರು.
ಹಿಂದೆ ಬಿಜೆಪಿ ಆಡಳಿತದ ಸಮಯದಲ್ಲಿ ದಾರಿದೀಪ ನಿರ್ವಹಣೆ ಮಾಡುತಿದ್ದ ರಮೇಶ್ ಎಲೆಕ್ಟ್ರಿಕಲ್ಸ… ಅವರು ಉತ್ತಮ ಸೇವೆ ಸಲ್ಲಿಸಿದ ಅನುಭವ ಮತ್ತು ದಾಖಲೆ ಹೊಂದಿದ್ದರು. ಅವರನ್ನು ಬದಲಾಯಿಸಿದ್ದರ ಉದ್ದೇಶವೇನು ಎಂದು ನಗರಸಭಾ ಕಾಮಗಾರಿಗಳ ಅಭಿವೃದ್ಧಿ ಪರಿಶೀಲನ ಸಭೆಯಲ್ಲಿ ತಾನು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಮಾಧಾನಕರ ಉತ್ತರ ದೊರೆತಿಲ್ಲ ಭಟ್ ಹೇಳಿದರು.
ಮಲ್ಪೆ ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಆದಷ್ಟು ಬೇಗನೆ ಆರಂಭವಾಗಲಿದೆ. ಪ್ರಕ್ರಿಯೆಗಳು ನಡೆಯುತ್ತಿವೆ ಮತ್ತು ತಾತ್ಕಾಲಿಕವಾಗಿ ಹೊಂಡ ಗುಂಡಿಗಳನ್ನು ಕಾಂಕ್ರೆಟ್ ಹಾಕಿ ಮುಚ್ಚಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ ಯವರು ಮಾತನಾಡಿ, ನಗರಸಭಾ ಚುನಾವಣಾ ಪೂರ್ವಭಾವಿಯಾಗಿ ಮತದಾರರ ಸೇರ್ಪಡೆ ಮತ್ತು ಪರಿಷ್ಕರಣೆಯ ಪ್ರಕ್ರಿಯೆ ನಡೆಯುತ್ತಿದ್ದು ಕಾರ್ಯಕರ್ತರು ಮತ್ತೆ ಸಕ್ರಿಯರಾಗಿ ತಮ್ಮ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಅಭಿಯಾನಗಳನ್ನು ಮುಂದುವರಿಸಿ ಎಂದು ಮನವಿ ಮಾಡಿದರು. ವಿಜಯ ಕೊಡವೂರು ರವಿವಾರ ಚಿಟಾ³ಡಿಯಲ್ಲಿ ನಡೆಯಲಿರುವ ಪೇಜ್ ಪ್ರಮುಖರ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ನಗರ ಪ್ರ. ಕಾರ್ಯದರ್ಶಿ ಜಗದೀಶ್ ಆಚಾರ್ಯ ನಿರೂಪಣೆ ಮಾಡಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾರಮೇಶ್, ನಗರ ಉಪಾಧ್ಯಕ್ಷ ಟಿ. ಜಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್