ಪೇಜಾವರ ಶ್ರೀಗಳು KMC ಗೆ ದಾಖಲು;ಮುಸ್ಲಿಮರಿಂದ ಪ್ರಾರ್ಥನೆ
Team Udayavani, Aug 20, 2017, 11:46 AM IST
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಶ್ರೀಪಾದರು ಭಾನುವಾರ ಹರ್ನಿಯ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಯ ಹೊರಗೆ ಪೇಜಾವರ ಬ್ಲಿಡ್ ಡೊನೇಟಿಂಗ್ ತಂಡದ ಮುಸ್ಲಿಂ ಸದಸ್ಯರು ಶ್ರೀಗಳ ಶೀಘ್ರ ಚೇತರಿಸಿಕೊಳ್ಳಬೇಕು ಎಂದು ವಿಶೇಷ ಪ್ರಾರ್ಥನೆ ನಡೆಸಿದರು.
ವಾರದ ಕಾಲ ಮಠದಲ್ಲಿ ಪೂಜಾ ಕೈಂಕರ್ಯಗಳನ್ನು ಕಿರಿಯ ಶ್ರೀಗಳು ನೆರವೇರಿಸಲಿದ್ದಾರೆ.
ಇದುವರೆಗೆ ಆರೋಗ್ಯ ತಪಾಸಣೆಯನ್ನು ವೈದ್ಯರು ಶ್ರೀಕೃಷ್ಣ ಮಠಕ್ಕೆ ಬಂದು ನಡೆಸುತ್ತಿದ್ದರು. ಸುಮಾರು ಒಂದು ವರ್ಷದಿಂದ 86 ಹರೆಯದ ಶ್ರೀಗಳಿಗೆ ಆರೋಗ್ಯದ ಸಮಸ್ಯೆ ಕಾಣುತ್ತಿತ್ತು. ಪರ್ಯಾಯ ಅವಧಿ ಮುಗಿಯುವವರೆಗೂ ಮುಂದೂಡುವ ಆಲೋಚನೆಯಲ್ಲಿದ್ದರು. ಆರೋಗ್ಯದ ವಿಷಯವಾದ ಕಾರಣ ಇನ್ನಷ್ಟು ಮುಂದೂಡುವುದು ಬೇಡ ಎಂದು ಇತರ ಮಠಾಧೀಶರೂ ಒತ್ತಾಯಿಸಿದ್ದರಿಂದ ಹೆಚ್ಚುವರಿ ತಪಾಸಣೆ, ಶಸ್ತ್ರಚಿಕಿತ್ಸೆಗಾಗಿ ಅವರು ಆಸ್ಪತ್ರೆಗೆ ತೆರಳಲು ಒಪ್ಪಿದರು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!