ಬದರಿಯಲ್ಲಿ ನಡೆಯಲಾಗದೆ ಡೋಲಿ ಏರಿದ ಪೇಜಾವರ ಶ್ರೀ – ವೀಡಿಯೋ ವೈರಲ್
Team Udayavani, Oct 23, 2019, 10:25 PM IST
ಉಡುಪಿ: ಉತ್ತರ ಭಾರತದ ಯಾತ್ರೆಯನ್ನು ಇತ್ತೀಚೆಗೆ ಮಾಡಿದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬದರೀನಾಥ ಕ್ಷೇತ್ರದಲ್ಲಿ ಆಮ್ಲಜನಕ ಕೊರತೆಯಿಂದ ನಡೆಯಲಾಗದೆ ಸುಮಾರು 300 ಮೀ. ದೂರ ಡೋಲಿಯನ್ನು ಏರಿ ಪ್ರಯಾಣಿಸಬೇಕಾಯಿತು. ಸ್ವಾಮೀಜಿಯವರು ಡೋಲಿಯಲ್ಲಿ ಕುಳಿತು ಸಾಗುತ್ತಿರುವ ಈ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ಡೆಹ್ರಾಡೂನ್ನಿಂದ ಬದರಿಗೆ ಹೆಲಿಕಾಪ್ಟರ್ನಲ್ಲಿ ಅ. 14ರಂದು ತೆರಳಿದ್ದ ಸ್ವಾಮೀಜಿಯವರು ಪೇಜಾವರ ಮಠವಾದ ಅನಂತ ಮಠದಿಂದ ಅಲಕಾನಂದ ನದಿ ಸೇತುವೆವರೆಗೆ ಸುಮಾರು 300 ಮೀ. ಕಾರಿನಲ್ಲಿ ತೆರಳಿದ್ದರು. ಅನಂತರ ಸುಮಾರು 300 ಮೀ. ದೂರ ನಡೆದು ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ದೇವರ ದರ್ಶನ ಮಾಡಿ ಸುಮಾರು 300 ಮೀ. ನಡೆದುಕೊಂಡು ಬಂದರು.
ಆಗ ಆಮ್ಲಜನಕದ ಕೊರತೆಯಾಗಿ ನಡೆಯಲಾಗಲಿಲ್ಲ. ಆ ಸಂದರ್ಭದಲ್ಲಿ ಅಲ್ಲಿ ಯಾವತ್ತೂ ಸ್ವಾಮೀಜಿಯವರಿಗೆ ಡೋಲಿ ಸೇವೆ ಮಾಡುವ ಸೇವಕರೊಬ್ಬರು ಕೂಡಲೇ ಡೋಲಿಯಲ್ಲಿ ಕೂಡಿಸಿಕೊಂಡು ಸುಮಾರು 300 ಮೀ. ದೂರವಿರುವ ಪೇಜಾವರ ಮಠಕ್ಕೆ ಶ್ರೀಗಳನ್ನು ಸುರಕ್ಷಿತವಾಗಿ ತಂದು ಬಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ