ಜನಸಂದಣಿರಹಿತ ಸ್ಥಿತಿ, ಏಕಾಂತದಲ್ಲಿ ಪರ್ಯಾಯ ಶ್ರೀಗಳ ಪಾರಾಯಣ
ಶ್ರೀಕೃಷ್ಣಮಠ, ಪ್ರಾರ್ಥನಾ ಮಂದಿರಗಳಲ್ಲಿ ಜನ ವಿರಳ
Team Udayavani, Mar 23, 2020, 6:59 AM IST
ಉಡುಪಿ: ಶ್ರೀಕೃಷ್ಣಮಠ ಸದಾ ಭಕ್ತ ಜನಜಂಗುಳಿಯಿಂದ ಕೂಡಿರುವ ತಾಣ. ಆದರೆ ರವಿವಾರ ಮಾತ್ರ ಪರಸ್ಥಳದ ಯಾರೊ ಬ್ಬರೂ ಭಕ್ತರು ಇದ್ದಿರಲಿಲ್ಲ. ಕೇವಲ ಮಠದ ಸಿಬಂದಿ ಮಾತ್ರ ಪೂಜೆಯ ಸಹಾಯಕ್ಕಾಗಿ ಇದ್ದರು. ಇದೇ ರೀತಿ ರಥಬೀದಿ ಸುತ್ತಮುತ್ತಲ ಪ್ರದೇಶದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಶ್ರೀಕೃಷ್ಣಮಠದ ಮುಂಭಾಗದಲ್ಲಿ ಯಾವುದೇ ಸೇವೆಗಳನ್ನು ಸ್ವೀಕರಿಸುವುದಿಲ್ಲ. ರವಿವಾರ ಬಂದ್ ಆಗಿರುತ್ತದೆ ಎಂಬ ಸೂಚನಾ ಫಲಕವನ್ನು ಹಾಕಲಾಗಿತ್ತು.
ಏತನ್ಮಧ್ಯೆ ಪುಣೆಯಿಂದ ಬಂದ ಇಸ್ಕಾನ್ನ ಸುಮಾರು 15 ಭಕ್ತರು ಶ್ರೀಕೃಷ್ಣಮಠದ ಪರಿಸರದಲ್ಲಿ ಬೀಡುಬಿಟ್ಟಿದ್ದಾರೆ. ಸಂಜೆ ಶ್ರೀಕೃಷ್ಣಮಠದ ಮುಂಭಾಗದಲ್ಲಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ದೇಶದ ಏಕತೆಗಾಗಿ ಜಾಗಂಟೆಯನ್ನು ಬಾರಿಸುವ ಮೂಲಕ ಸಂದೇಶ ಸಾರಿದರು. ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಅದಮಾರು ಮಠದ ಮುಂಭಾಗ ಜಾಗಂಟೆಯನ್ನು ಬಾರಿಸಿದರು. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಠದ ಎದುರು ಕೈಚಪ್ಪಾಳೆ ತಟ್ಟಿ ಸಂದೇಶ ಸಾರಿದರು. ಮಠದ ಒಳಗಡೆ ವಿಶೇಷ ಪೂಜೆ ನಡೆಯಿತು.
ಪ್ರಾರ್ಥನಾ ಮಂದಿರಗಳಲ್ಲಿ ಜನ ವಿರಳ
ಚರ್ಚ್ಗಳಲ್ಲಿ ರವಿವಾರದ ಸಾಮೂಹಿಕ ಪ್ರಾರ್ಥನೆಯನ್ನು ರದ್ದುಗೊಳಿಸಿದ್ದರಿಂದ ಚರ್ಚ್ ನಲ್ಲಿ ಜನಸಂದಣಿ ಇರಲಿಲ್ಲ. ಸಿಎಸ್ಐ ಚರ್ಚ್ ನಲ್ಲಿ ಜನರ ಸಂಖ್ಯೆ ವಿರಳವಿತ್ತು.
ಬ್ರಹ್ಮಗಿರಿ ನಾಯರ್ಕೆರೆಯ ಹಾಶಿಮಿ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲದಂತೆ ಬಂದ್ ಮಾಡಲಾಗಿದೆ. ಮುಂದಿನ ಸೂಚನೆ ಬರುವವರೆಗೆ ಇದು ಮುಂದುವರಿಯುತ್ತದೆ. ಮನೆಗಳಲ್ಲಿಯೇ ಪ್ರಾರ್ಥನೆಯನ್ನು ಮನೆ ಯಿಂದಲೇ ನಡೆಸುವಂತೆ ಮಸೀದಿ ಆಡಳಿತ ಮಂಡಳಿ ತಿಳಿಸಿದೆ.
ಏಕಾಂತ ಪಾರಾಯಣ
ಪರ್ಯಾಯ ಅವಧಿಯಲ್ಲಿ ಸದಾ ಕೆಲಸ, ಪಾಠ, ಪೂಜೆಗಳಲ್ಲಿ ನಿರತರಾಗಿರುತ್ತಿದ್ದ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ಮುಗಿದ ಬಳಿಕ ಗರ್ಭಗುಡಿ ಎದುರಿನ ಚಂದ್ರಶಾಲೆಯಲ್ಲಿ ಏಕಾಂತದಲ್ಲಿ ಪಾರಾಯಣ ನಿರತರಾದರು. ಶ್ರೀಕೃಷ್ಣಮಠದಲ್ಲಿ ಇಂತಹ ಏಕಾಂತ ದಿನ ಸಿಗುವುದೇ ದುರ್ಲಭ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ