ಪೆರ್ಡೂರು ಪಕ್ಕಾಲು: ಮರಕ್ಕೆ ಕಾರು ಢಿಕ್ಕಿ , ಚಾಲಕ ಸಾವು
Team Udayavani, Mar 13, 2019, 1:00 AM IST
ಹೆಬ್ರಿ : ಹಿರಿಯಡಕದಿಂದ ಪೆರ್ಡೂರು ಕಡೆ ಬರುತ್ತಿದ್ದ ಕಾರೊಂದು ಪಕ್ಕಾಲು ತಿರುವು ಬಳಿ ರಸ್ತೆ ಬದಿಯ ಮರವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು ಓರ್ವ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ಬೆಳ್ತಂಗಡಿ ಮೂಲದವರು ಎನ್ನಲಾದ ಕಾರು ಚಾಲಕ ಪ್ರಶಾಂತ ಜಿ.ಐ ಮೃತಪಟ್ಟಿದ್ದು ಕಾರಿನಲ್ಲಿದ್ದ ರಾಜೇಶ್ ,ಪ್ರಸಾದ್,ಪ್ರಶಾಂತ ಬಿ. ತೀವ್ರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಹಿರಿಯಡಕದ ಮುತ್ತೂರಿ ನಲ್ಲಿರುವ ಟಿನ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಸಂಜೆ 5ಗಂಟೆ ಹೊತ್ತಿಗೆ ಹಿರಿಯಡಕದಿಂದ ಪೆರ್ಡೂರು ಕಡೆ ಕಾರಿನಲ್ಲಿ ಹೋಗುತ್ತಿದ್ದರು.
ಈ ಸಂದರ್ಭ ಪಕ್ಕಾಲು ತಿರುವಿನ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಾರು ಗದ್ದೆಗೆ ಉರುಳಿದ್ದು ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂ ಗೊಂಡಿದೆ.
ಅಪಘಾತದ ಶಬ್ದ ಕೇಳಿದ ಹತ್ತಿರನ ಮನೆಯವರು ಕೂಡಲೇ ಬಂದು ಕಾರಿನ ಒಳಗೆ ಸಿಲುಕಿದ್ದವರನ್ನು ಹೊರಗೆಳೆದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಮೊದಲೇ ಚಾಲಕ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಪಾಯ ಕಾರಿ ತಿರುವು
ಪೆರ್ಡೂರಿನಿಂದ ಹಿರಿಯಡಕ ಹೋಗುವ ಮಧ್ಯ ಪಕ್ಕಾಲು ತಿರುವು ಕಿರಿದಾದ ರಸ್ತೆಯಿಂದ ಕೂಡಿದ್ದು ಈ ಭಾಗದಲ್ಲಿ ಅಪಘಾತಗಳಿಂದ ಪ್ರಾಣ ಕಳೆದು ಕೊಂಡವರು ಹೆಚ್ಚು. ಕಡಿದಾದ ತಿರುವು ಇದ್ದರೂ ಇಲ್ಲಿ ಯಾವುದೇ ನಾಮ ಫಲಕ ಅಳವಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್