ಪೆರ್ಡೂರು ಪಕ್ಕಾಲು ಅಪಾಯಕಾರಿ ತಿರುವಿಗೆ ಮುಕ್ತಿ ಎಂದು ?
Team Udayavani, Mar 14, 2019, 1:00 AM IST
ಹೆಬ್ರಿ: ಉಡುಪಿ ಶಿವಮೊಗ್ಗ ರಾಜ್ಯ ಹೆದ್ದಾರಿಯ ಪೆರ್ಡೂರು ಸಮೀಪದ ಪಕ್ಕಾಲು ತಿರುವು ಅಪಾಯಕಾರಿ ಹಾಗೂ ಅಪಘಾತದ ತಾಣವಾಗಿದ್ದು ಸಮಸ್ಯೆಗೆ ಮುಕ್ತಿ ಕಾಣದಾಗಿದೆ. ಪಕ್ಕಾಲು ಏರು ತಿರುವು ಅತಿ ಕಿರಿದಾದ ರಸ್ತೆಯಿಂದ ಕೂಡಿದ್ದು ಈ ಭಾಗದಲ್ಲಿ ಹಲವು ಅಪಘಾತ ನಡೆದಿವೆ. ಆದರೂ ಸ್ಥಳೀಯಾಡಳಿತ ಹಾಗೂ ಸಂಬಂಧ ಪಟ್ಟ ಇಲಾಖೆ ಗಮನ ಹರಿಸಿಲ್ಲ.
ಚರಂಡಿಯೇ ಇಲ್ಲ
ಒಂದೆಡೆ ರಸ್ತೆ ಕಿರಿದಾದರೆ ಈ ಮಧ್ಯೆ ರಸ್ತೆಗೆ ಚರಂಡಿ, ನಡೆಯಲು ಜಾಗ ಇಲ್ಲದೆ ಜನರು ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ. ಈ ಮಾರ್ಗದಲ್ಲಿ ಶಿವಮೊಗ್ಗ-ಮಂಗಳೂರು ವೇಗದೂತ ಬಸ್ಗಳು, ವಾಹನಗಳು ವೇಗವಾಗಿ ಸಂಚರಿಸುವುದರಿಂದ ಪಾದಚಾರಿಗಳು ಪ್ರಾಣ ಕೈಯಲ್ಲಿ ಹಿಡಿದು ನಡೆದು ಕೊಂಡು ಹೋಗುವ ಸ್ಥಿತಿಯಿದೆ.
ರಸ್ತೆಗೆ ತಾಗಿದ ಅಪಾಯಕಾರಿ ಮರಗಳು
ಕಡಿದಾದ ರಸ್ತೆಗೆ ತಾಗಿದ ಬೃಹತ್ ಮರಗಳಿಂದ ಅಪಾಯಗಳು ಹೆಚ್ಚಾಗಿದೆ. ಈ ಮಾರ್ಗದಲ್ಲಿ ತಿರುವುಗಳೇ ಹೆಚ್ಚಾಗಿರುವುದರಿಂದ ರಸ್ತೆಗೆ ತಾಗಿದ ಪೊದೆಗಳಿಂದ ಎದುರುಗಡೆ ಬರುತ್ತಿರುವ ವಾಹನದ ಬಗ್ಗೆ ತಿಳಿಯುತ್ತಿಲ್ಲ.
ರಸ್ತೆ ಅಗಲ ಮಾಡಿ
ರಸ್ತೆ ಅಗಲಗೊಳಿಸುವುದರಿಂದ ಅಪಘಾತಗಳನ್ನೂ ಸಾಕಷ್ಟು ತಗ್ಗಿಸಬಹುದು ಎನ್ನುತ್ತಾರೆ ಸ್ಥಳೀ ಯರಾದ ಪಕ್ಕಾಲು ಸಂತೋಷ ಕುಲಾಲ ಅವರು.
ಸಮಸ್ಯೆ ಪರಿಹರಿಸಲು ಪ್ರಯತ್ನ
ಈ ಭಾಗದಲ್ಲಿ ನಿರಂತರವಾಗಿ ಆಗುತ್ತಿರುವ ಅಪಘಾತಗಳ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪಂಚಾಯತ್ನಲ್ಲಿ ಚರ್ಚಿಸಿ ಸಂಬಂಧ ಪಟ್ಟವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಲ್ಲಿ ಪ್ರಯತ್ನಿಸುತ್ತೇನೆ.
-ಶಾಂಭವಿ ಕುಲಾಲ್, ಅಧ್ಯಕ್ಷರು ಗ್ರಾ.ಪಂ. ಪೆರ್ಡೂರು
ಸೂಚನಾ ಫಲಕವಿಲ್ಲ
ಅಪಘಾತ ವಲಯ, ಕಡಿದಾದ ತಿರುವು ಇದ್ದರೂ ಇಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಸಮಸ್ಯೆಯ ತೀವ್ರತೆ ಹಾಗೂ ಅಪಾಯದ ಬಗ್ಗೆ ಜಾಗೃತೆ ವಹಿಸುವ ಬಗ್ಗೆ ಪಂಚಾಯತ್ ನಿರ್ಲಕ್ಷ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ