ದ್ವಿತೀಯ ದಿನವೂ ವಿದ್ಯಾರ್ಥಿಗಳ ಭರಪೂರ ಸ್ಪಂದನೆ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಉದಯವಾಣಿ ಫೋನ್‌ಇನ್‌

Team Udayavani, Mar 14, 2020, 6:13 AM IST

Phone-In-Puc

ಉಡುಪಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಉದಯವಾಣಿ ದಿನಪತ್ರಿಕೆಯು ಗುರುವಾರ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆರಂಭಿಸಿದ ಫೋನ್‌ಇನ್‌ ಕಾರ್ಯಕ್ರಮ ಶುಕ್ರವಾರವೂ ಮಣಿಪಾಲದ ಕಚೇರಿಯಲ್ಲಿ ಮುಂದುವರಿಯಿತು. ಇಂಗ್ಲಿಷ್‌, ಹಿಂದಿ, ಸಂಸ್ಕೃತ, ಸಮಾಜಶಾಸ್ತ್ರ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.

ಎರಡನೇ ದಿನವೂ ಕರೆಗಳ ಮಹಾಪೂರವೇ ಹರಿದುಬಂತು. ಬೈಲೂರು, ಜಮಖಂಡಿ, ಮಂಗಳೂರು, ಮುದರಂಗಡಿ, ಬಂಟ್ವಾಳ, ಹಿರಿಯಡಕ್ಕ, ಕಾರವಾರ, ಸುರತ್ಕಲ್‌, ಕುಂದಾಪುರ, ಬೈಕಂಪಾಡಿ, ಮಣ್ಣಗುಡ್ಡೆ ಸಹಿತ ಹಲವಾರು ಹಲವಾರು ಕಡೆಗಳಿಂದ ಕರೆಗಳು ಬಂದವು. ವಿದ್ಯಾರ್ಥಿಗಳಿಂದ ತೂರಿಬಂದ ಪ್ರಶ್ನೆಗೆ ಸಂಪನ್ಮೂಲ ವ್ಯಕ್ತಿಗಳು ಅಷ್ಟೇ ಸರಳವಾಗಿ ಉತ್ತರಿಸಿದರು.

ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಮುಂಡ್ಕೂರಿನ ಶಿಕ್ಷಕ ಕೆ. ವಿವೇಕಾನಂದ ಹೆಗ್ಡೆ ಹಾಗೂ ಕಾರ್ಕಳದ ಎಂ.ವಿ. ಶಾಸ್ತ್ರಿ ಹೈಸ್ಕೂಲಿನ ಶಿಕ್ಷಕ ಪ್ರಕಾಶ್‌ ರಾವ್‌ ಅವರು ಇಂಗ್ಲಿಷ್‌, ಕಲ್ಯಾಣಪುರದ ಡಾ| ಟಿಎಂಎ ಪೈ ಹೈಸ್ಕೂಲಿನ ಶಿಕ್ಷಕ ವೆಂಕಟೇಶ್‌ ಎಚ್‌.ಎನ್‌. ಅವರು ಹಿಂದಿ ಹಾಗೂ ಸಂಸ್ಕೃತ ವಿಷಯ, ಸಮಾಜ ವಿಜ್ಞಾನ ವಿಷಯದಲ್ಲಿ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ ಶೇಖರ ಭೋವಿ, ಕನ್ನಡ ವಿಷಯದಲ್ಲಿ ಕಾವಡಿ ಸರಕಾರಿ ಪ.ಪೂ. ಕಾಲೇಜಿನ ಕಿರಣ್‌ ಹೆಗ್ಡೆ ಮಾಹಿತಿ ನೀಡಿದರು.

1 ಗಂಟೆಯಿಂದ 2 ಗಂಟೆಗಳಿಗೆ ವಿಸ್ತಾರ
ವಿದ್ಯಾರ್ಥಿಗಳ ದೂರವಾಣಿ ಕರೆಗಳು ಕಚೇರಿಗೆ ನಿರಂತರ ಬರತೊಡಗಿದವು. ಹಲವಾರು ರೀತಿಯ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ವಿಸ್ತಾರವಾಗಿ ಉತ್ತರಿಸಿದರು. ಸಂಜೆ 6ಗಂಟೆಗೆ ಆರಂಭಗೊಂಡ 1 ಗಂಟೆಯ ಪೋನ್‌ ಇನ್‌ ಕಾರ್ಯಕ್ರಮಕ್ಕೆ ಬಂದ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಮತ್ತೂ 1 ಗಂಟೆ ವಿಸ್ತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳು ಕೂಡ ವಿದ್ಯಾರ್ಥಿಗಳ ಸ್ಪಂದನೆ ಕಂಡು ಖುಷಿಪಟ್ಟರು.

ಪರೀಕ್ಷೆ ತಯಾರಿ ಹೇಗೆ?
ವಿದ್ಯಾರ್ಥಿಗಳು ಎಲ್ಲ ವಿಷಯಗಳನ್ನು ಪರೀಕ್ಷೆ ಪೂರ್ವದಲ್ಲಿ ಅಭ್ಯಾಸ ಮಾಡಿ ಕೊಂಡು ಸಮಗ್ರ ವಿಷಯದ ಕೀ ನೋಟ್‌ ತಯಾರಿಸಿಕೊಳ್ಳಬೇಕು. ಪರೀಕ್ಷೆ ಹಿಂದಿನ ದಿನ ಕೀ ನೋಟ್‌ ಓದಿದ ತತ್‌ಕ್ಷಣ ಎಲ್ಲ ವಿಷಯಗಳು ನೆನಪಿಗೆ ಬರವಂತೆ ನೋಡಿಕೊಳ್ಳಬೇಕು.

ಪರೀಕ್ಷೆ ಕೊಠಡಿ ಹೋಗುವ ಮುನ್ನ ಯಾವುದೇ ಚರ್ಚೆ ಹಾಗೂ ಗೊಂದಲಕ್ಕೆ ತುತ್ತಾಗಬಾರದು. ಪೂರ್ವದಲ್ಲಿ ತಯಾರಿಸಲಾದ ಕೀ ನೋಟ್‌ ಸಹಾಯದಿಂದ ಮತ್ತೂಮ್ಮೆ ವಿಷಯವನ್ನು ಅವಲೋಕನ ಮಾಡಬೇಕು. ಗೆಳೆಯರೊಂದಿಗೆ ಪ್ರಶ್ನೆಗಳ ಚರ್ಚಿಸಿದರೆ ಒತ್ತಡಕ್ಕೆ ತುತ್ತಾಗುವ ಸಾಧ್ಯತೆ ಇದೆ.

ತಜ್ಞರಿಂದ ವಿದ್ಯಾರ್ಥಿಗಳಿಗೆ ಸಲಹೆ
 ಆಂಗ್ಲ ವಿಷಯ
ಆಂಗ್ಲ ವಿಷಯದಲ್ಲಿ ಮೊದಲ ಬಾರಿಗೆ ಪತ್ರ ಬರೆವಣಿ ಗೆಗೆ 5 ಅಂಕ ನೀಡಲಾಗಿದೆ. ಆ ಬಗೆಗಿನ ಹಂತಗಳನ್ನು ಕಲಿಯಬೇಕು. ಒಟ್ಟು ಸಾರಾಂಶದಲ್ಲೂ 2 ಪಾಯಿಂಟ್‌ಗಳಿರಬೇಕು. 3 ಪದ್ಯಗಳು 4 ಪಠ್ಯಗಳಿಂದ 7 ಅಂಕ ಸುಲಭದಲ್ಲಿ ಗಳಿಸಿಕೊಳ್ಳಬಹುದು. ಗ್ರ್ಯಾಂಡ್‌ ಮಾ ಕ್ಲೈಂಬ್ಸ್ ಎ ಟ್ರೀ, ಜಾಜ್‌ ಪೊಯಮ್‌, ದ ಸಾಂಗ್‌ ಆಫ್ ಇಂಡಿಯಾ, ಐ ಆ್ಯಮ್‌ ದ ಲ್ಯಾಂಡ್‌ ಇವಿಷ್ಟು ವಿಷಯದಲ್ಲಿ 4 ಅಂಕ ಹಾಗೂ
3 ಅಂಕಗಳ ಪ್ರಶ್ನೆಗಳು ಸಿಗಲಿವೆ.

 ಹಿಂದಿ ಭಾಷೆ
ರಜಾ ಪತ್ರಕ್ಕೆ 5 ಅಂಕಗಳಿರುತ್ತವೆ. 4 ಅಂಕದ ಕಂಠಪಾಠ ಪದ್ಯಕ್ಕೆ ಹೆಚ್ಚು ಒತ್ತು ನೀಡಬೇಕು. 3 ಅಂಕದ ಸಮ್ಮರಿ ಪದ್ಯವನ್ನು ತಿಳಿದುಕೊಳ್ಳಬೇಕು. 3 ಅಂಕದ ಭಾವಾರ್ಥಕ್ಕೆ ಹೆಚ್ಚು ಮಹತ್ವ ನೀಡಬೇಕು. 15 ಅಂಕಗಳಿಗೆ ಆಗುವಷ್ಟು ಗದ್ಯಪಾಠದಿಂದ ಪ್ರಶ್ನೆಗಳನ್ನು ಕೇಳುತ್ತಾರೆ ಇದಕ್ಕೆ ತಯಾರಿ ನಡೆಸಬೇಕು. ಕರ್ನಾಟಕ ಸಂಪದ, ಗಿಲ್ಲು, ಇಂಟರ್‌ನೆಟ್‌ಕ್ರಾಂತಿ, ಇಮಾನ್‌ದಾರ್‌ ಕೀ ಸಮ್ಮಿಲನ್‌ನಿಂದ ಹೆಚ್ಚು ಓದಿದರೆ ಒಳ್ಳೆಯದು. ಇದರಿಂದ 3-4 ಅಂಕದ ಪ್ರಶ್ನೆ ಅಧಿಕ ಬರುವ ಸಾಧ್ಯತೆಗಳಿವೆ.

 ಸಮಾಜ ವಿಜ್ಞಾನ
ಸಮಾಜ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಗೊಂದಲವಿದ್ದ ವಿವಿಧ ಕದನ, ಒಪ್ಪಂದ, ನಕ್ಷೆ ಗುರುತಿಸು ವುದು, ಇತಿಹಾಸ, ರಾಜ್ಯ ಶಾಸ್ತ್ರ, ಭೂಗೋಳ ಶಾಸ್ತ್ರ ಸೇರಿ ದಂತೆ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು.

 ಕನ್ನಡ
ವ್ಯಾಕರಣ, ಸಂದರ್ಭ ಸಹಿತ ವಿವರಿಸಿ, ಗಾದೆ ಮಾತು, ಪದ್ಯ, ಪ್ರಬಂಧಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು. ಕೊನೆಯ ಅವಧಿ ತಯಾರಿ ಕುರಿತು ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು.

ಟಾಪ್ ನ್ಯೂಸ್

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-uv-fusion

Theater: ಅಳಿವು ಉಳಿವಿನ ದವಡೆಯಲ್ಲಿ ರಂಗಭೂಮಿ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

8-uv-fusion

Smell of First Rain: ಹೊಸಮಳೆಯ ಮೃಣ್ಮಯ ಗಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.