ಕಂಬದಕೋಣೆ: ಸುಂಟರ ಗಾಳಿಗೆ ಮನೆ, ಕೊಟ್ಟಿಗೆಗೆ ಹಾನಿ
Team Udayavani, Aug 5, 2019, 5:28 AM IST
ಉಪ್ಪುಂದ: ಕಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಂಟರಗಾಳಿ ಬೀಸಿದ ಪರಿಣಾಮ ತೆಂಕಬೆಟ್ಟು ಕಡೆಮನೆ ಅಣ್ಣಪ್ಪ ಬಳೆಗಾರ ಎಂಬವರ ಟೆರೇಸ್ ಮೇಲೆ ಮರವೊಂದು ಬಿದ್ದ ಪರಿಣಾಮ ಮನೆಗೆ ಹಾನಿ ಉಂಟಾಗಿದೆ.
ರಾತ್ರಿ ಹೊತ್ತು ದಿಢೀರನೆ ಬೀಸಿದ ಸುಂಟರಗಾಳಿಯಿಂದಾಗಿ ಮನೆಯೊಳಗೆ ಲಘು ಕಂಪನ ಕಾಣಿಸಿಕೊಂಡು ಮನೆಯ ಮೇಲೆ ಮರಬಿದ್ದ ಪರಿಣಾಮ ಗೋಡೆ ಬಿರುಕು ಬಿಟ್ಟಿತಲ್ಲದೇ ಮೇಲ್ಛಾವಣಿ ಹಾನಿಗೀಡಾಗಿದೆ.
ಕೊಟ್ಟಿಗೆಯೂ ಹಾನಿ
ಸುಂಟರ ಗಾಳಿಯ ಆರ್ಭಟಕ್ಕೆ ಅವರ ಮನೆಯ ದನದ ಕೊಟ್ಟಿಗೆಯು ಕುಸಿದು ಸಂಪೂರ್ಣ ಹಾನಿಗೀಡಾಗಿದೆ. ಇದು ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬವಾಗಿದ್ದು ಮನೆ, ಕೊಟ್ಟಿಗೆಗೆ ಹಾನಿಗೀಡಾದ ಹಿನ್ನೆಲೆಯಲ್ಲಿ ಅವರು ಆತಂಕ ಗೊಂಡಿದ್ದು, ಜಿಲ್ಲಾಡಳಿತ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಚಹಲ್ 200 ವಿಕೆಟ್ಗಳ ಕಮಾಲ್; ಈ ಸಾಧನೆಗೈದ ಮೊದಲ ಬೌಲರ್
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ