ಶಾಲೆಗಳಲ್ಲಿ ಬಿಸಿಯೂಟಕ್ಕೆ ಅಕ್ಕಿ ಕೊರತೆ ಸಾಧ್ಯತೆ?

ಗೋದಾಮಿನಲ್ಲಿ ಕಾಮಗಾರಿಗಾಗಿ ವಿಳಂಬ; ಬಿಸಿಯೂಟ ವ್ಯತ್ಯಯ ಸಾಧ್ಯತೆ

Team Udayavani, Jan 28, 2023, 7:43 AM IST

ಶಾಲೆಗಳಲ್ಲಿ ಬಿಸಿಯೂಟಕ್ಕೆ ಅಕ್ಕಿ ಕೊರತೆ ಸಾಧ್ಯತೆ?

ಕುಂದಾಪುರ: ಉಡುಪಿ ಜಿಲ್ಲೆಯಾದ್ಯಂತ ಶಾಲೆಗಳಿಗೆ ಬಿಸಿಯೂಟದ ಅಕ್ಕಿ ಸರಬರಾಜು ಸ್ಥಗಿತಗೊಂಡಿದ್ದು, ಶೀಘ್ರವೇ ಪೂರೈಕೆಯಾಗದಿದ್ದರೆ ಅಕ್ಕಿ ಕೊರತೆ ಉದ್ಭವಿಸಲಿದೆ.

ಭಾರತ ಆಹಾರ ನಿಗಮ (ಫ‌ುಡ್‌ ಕಾರ್ಪೋರೇಶನ್‌ ಆಫ್ ಇಂಡಿಯಾ) ಗೋದಾಮಿನಿಂದ ಕರ್ನಾಟಕ ಆಹಾರ ನಿಗಮದ ಮೂಲಕ ಶಾಲೆಗಳಿಗೆ ಅಕ್ಕಿ, ಬೇಳೆ ಸರಬರಾಜು ಆಗುತ್ತದೆ. ಈ ಶೈಕ್ಷಣಿಕ ವರ್ಷದ 3 ತ್ತೈಮಾಸಿಕ ಅವಧಿಯಲ್ಲಿ ಆಹಾರ ಪದಾರ್ಥ ಬಿಡುಗಡೆಯಾಗಿದೆ. ಆದರೆ 4ನೇ ತ್ತೈಮಾಸಿಕ ಅವಧಿಯ (ಜನವರಿ-ಮಾರ್ಚ್‌)ಜನವರಿ ಮುಗಿಯುತ್ತ ಬಂದರೂ ಅವಶ್ಯವಿರುವ ಅಕ್ಕಿ ಇನ್ನೂ ಶಾಲೆಗೆ ತಲುಪಿಲ್ಲ.

ಎಷ್ಟು ಅಕ್ಕಿ
ಉಡುಪಿ ಜಿಲ್ಲೆಗೆ 1ರಿಂದ 5ನೇ ತರಗತಿ ವರೆಗೆ 290 ಮೆಟ್ರಿಕ್‌ ಟನ್‌ ಅಕ್ಕಿ, 6ರಿಂದ 8ನೇ ತರಗತಿಗೆ 235.5 ಮೆಟ್ರಿಕ್‌ ಟನ್‌ ಅಕ್ಕಿ ಬಿಡುಗಡೆಯಾಗಿದೆ. ಕಳೆದ ಸಾಲಿನಲ್ಲಿ ಬಿಡುಗಡೆಯಾದ ಅಕ್ಕಿಯಲ್ಲಿ ಮಿಕ್ಕುಳಿದ ಅಕ್ಕಿಯನ್ನು ಈಗ ಬಳಸಲಾಗುತ್ತಿದೆ. ಉಳಿದಂತೆ 63 ದಿನಗಳಿಗೆ ಅಕ್ಕಿ ದೊರೆಯಬೇಕಿದೆ.

ತಾಲೂಕುವಾರು ಅಕ್ಕಿ ವಿವರ
ಅವಿಭಜಿತ ಉಡುಪಿ ತಾಲೂಕಿನಲ್ಲಿ 1ರಿಂದ 5ನೇ ತರಗತಿಯ ಸರಕಾರಿ ಶಾಲೆಯ 10,089, ಅನುದಾನಿತ ಶಾಲೆಯ 6,970 ಮಕ್ಕಳಿಗೆ ಒಟ್ಟು 1,074 ಕ್ವಿಂ., ಅವಿಭಜಿತ ಕುಂದಾಪುರ ತಾಲೂಕಿಗೆ ಸರಕಾರಿ ಶಾಲೆಯ 15,589, ಅನುದಾನಿತ ಶಾಲೆಯ 2,495 ಮಕ್ಕಳಿಗೆ 1,139 ಕ್ವಿಂ. ಅಕ್ಕಿ, ಅವಿಭಜಿತ ಕಾರ್ಕಳ ತಾಲೂಕಿನ ಸರಕಾರಿ ಶಾಲೆಯ 6,928, ಅನುದಾನಿತ ಶಾಲೆಗಳ 3,961 ಮಕ್ಕಳಿಗೆ ಒಟ್ಟು 686 ಕ್ವಿಂ. ಅಕ್ಕಿ ಒಟ್ಟು 2,900 ಕ್ವಿಂ. ಅಕ್ಕಿ ವಿತರಣೆೆಯಾಗಬೇಕಿದೆ. 6ರಿಂದ 8ನೇ ತರಗತಿಯ ಮಕ್ಕಳಿಗೆ ಅವಿಭಜಿತ ಉಡುಪಿ ತಾಲೂಕಿನಲ್ಲಿ ಸರಕಾರಿ ಶಾಲೆಯ 5,952, ಅನುದಾನಿತ ಶಾಲೆಯ 4,216 ಮಕ್ಕಳಿಗೆ ಒಟ್ಟು 960 ಕ್ವಿಂ., ಅವಿಭಜಿತ ಕುಂದಾಪುರ ತಾಲೂಕಿಗೆ ಸರಕಾರಿ ಶಾಲೆಯ 8,311, ಅನುದಾನಿತ ಶಾಲೆಯ 1,320 ಮಕ್ಕಳಿಗೆ 910 ಕ್ವಿಂ. ಅಕ್ಕಿ, ಅವಿಭಜಿತ ಕಾರ್ಕಳ ತಾಲೂಕಿನ ಸರಕಾರಿ ಶಾಲೆಯ 4,059, ಅನುದಾನಿತ ಶಾಲೆಗಳ 1,073 ಮಕ್ಕಳಿಗೆ ಒಟ್ಟು 484 ಕ್ವಿಂ. ಅಕ್ಕಿ ಒಟ್ಟು 2,355 ಕ್ವಿಂ. ಅಕ್ಕಿ ವಿತರಣೆೆಯಾಗಬೇಕಿದೆ. ಜ. 21ರಂದು ಜಿಲ್ಲಾಧಿಕಾರಿಗಳು ಅಕ್ಕಿ ಬಿಡುಗಡೆ ಆದೇಶಕ್ಕೆ ಸಹಿ ಹಾಕಿದ್ದಾರೆ. ಆದರೆ ವಿತರಣೆ ಮಾತ್ರ ವಿಳಂಬ ಎನ್ನಲಾಗುತ್ತಿದೆ.

ಕಾಮಗಾರಿ ಕಾರಣ
ಮಣಿಪಾಲದ ಪೆರಂಪಳ್ಳಿಯಲ್ಲಿ ಇರುವ ಐಎಫ್ಸಿ ಗೋದಾಮಿನಲ್ಲಿ ಕಾಂಕ್ರಿಟ್‌ ಕಾಮಗಾರಿ ನಡೆಯಲಿರುವ ಕಾರಣ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದು, ಅಕ್ಕಿ ಸರಬರಾಜು ವಿಳಂಬವಾಗಲಿದೆ ಎಂದು ಕಾರಣ ನೀಡಲಾಗುತ್ತಿದೆ. ಒಂದೊಮ್ಮೆ ಇದು ಹೌದಾದರೆ ಸುಮಾರು 21 ದಿನಗಳವರೆಗೆ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಆದರೆ ಸದ್ಯ ಲಭ್ಯವಿರುವ ಆಕ್ಕಿ ಸುಮಾರು 15-20 ದಿನಗಳಿಗೆ ಸಾಕಾಗಬಹುದು. ಅದರಂತೆಯೇ ಬೇಡಿಕೆ ಪಟ್ಟಿ ಸಲ್ಲಿಸಲಾಗಿದೆ.

ನಿಗಮದಿಂದ ಅಕ್ಕಿ ವಿತರಣೆ ಆರಂಭವಾಗಿ ತಾಲೂಕು ಕೇಂದ್ರದ ಗೋದಾಮಿಗೆ ತಲುಪಲು ಸಾಮಾನ್ಯ 1 ವಾರ ತಗುಲುತ್ತದೆ. ಆ ಬಳಿಕ ತಾಲೂಕು ಕೇಂದ್ರದಿಂದ ರಾಜ್ಯ ಆಹಾರ ನಿಗಮದ ಗೋದಾಮಿನಿಂದ ಗ್ರಾಮಾಂತರದ ವಿವಿಧ ಶಾಲೆಗಳಿಗೆ ವಿತರಿಸಲು 3-4 ವಾರ ಬೇಕಾಗಬಹುದು. ಹಾಗಾಗಿ ಈಗಲೇ ಕ್ರಮ ಕೈಗೊಳ್ಳದಿದ್ದರೆ ಕಾಮಗಾರಿಯ ನೆವದಿಂದ ಶಾಲೆಗಳಲ್ಲಿ ಅಕ್ಕಿಯ ಕೊರತೆ ಉಂಟಾಗಲಿದೆ.

ಸಮಸ್ಯೆ ಗಮನಕ್ಕೆ ಬಂದಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಐಎಫ್ಸಿ ಅಧಿಕಾರಿಯನ್ನು ಬರಲು ಹೇಳಿ ಆದಷ್ಟು ಶೀಘ್ರ ಶಾಲೆಗಳಿಗೆ ತೊಂದರೆಯಾಗದಂತೆ ಸಮಸ್ಯೆ ಬಗೆ ಹರಿಸುತ್ತೇವೆ.
– ಪ್ರಸನ್ನ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಉಡುಪಿ ಜಿ.ಪಂ.

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.