ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಮನೆಗೆ ಭಾಗಶಃ ಹಾನಿ, 50,000 ರೂ. ನಷ್ಟ
Team Udayavani, Jul 2, 2019, 5:00 AM IST
ಪಡುಬಿದ್ರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಸೋಮವಾರ ಮಧ್ಯಾಹ್ನ 1ಗಂಟೆಗೆ ಬೆಂಕಿ ಹತ್ತಿಕೊಂಡು ಎಲ್ಲೂರು ಗ್ರಾಮದ ಕೊಳಚೂರು ಸುಧಾ ಆಚಾರ್ಯ ಎಂಬವರ ಮನೆಯ ಅಡುಗೆ ಕೋಣೆ ಸೇರಿದಂತೆ ಭಾಗಶಃ ಹಾನಿಯಾಗಿದೆ. ಮನೆಯವರು ಲಕ್ಷಾಂತರ ರೂ. ನಷ್ಟ ಸಂಭವಿಸಿರುವುದಾಗಿ ಹೇಳಿದ್ದಾರೆ.
ಸುಧಾ ಆಚಾರ್ಯ ಹತ್ತಿರದ ಮನೆಗೆ ಹಾಲು ತರಲು ಹೋಗಿದ್ದಾಗ ಈ ಅವಘಡವು ಸಂಭವಿಸಿದೆ. ಪದೆಬೆಟ್ಟು ಸುಬ್ರಹ್ಮಣ್ಯ ಯುವಕ ವೃಂದದ ಸದಸ್ಯರು ಆ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ಎಲ್ಲೂರು ಗ್ರಾಮ ಲೆಕ್ಕಿಗ ಅರುಣ್ ಹಾನಿಗೀಡಾದ ಮನೆಗೆ ಭೇಟಿ ನೀಡಿದ್ದು ಸುಮಾರು 50000ರೂ. ಗಳಷ್ಟು ನಷ್ಟ ಸಂಭವಿಸಿರುವುದಾಗಿ ಕಾಪು ತಹಶೀಲ್ದಾರ್ರಿಗೆ ವರದಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕರ್ತವ್ಯದಲ್ಲಿದ್ದ ಪೊಲೀಸ್ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು
Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು
Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ
Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ
Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ