ಪಿಎಂ ಕಿಸಾನ್ ಯೋಜನೆ – ಬೆಳೆ ಸಾಲ ಅರ್ಜಿಯಲ್ಲಿ ಭಾರೀ ಅಂತರ!
ಇಂದಿನಿಂದ ಬೆಳೆ ಸಾಲ ಅಭಿಯಾನ
Team Udayavani, Feb 7, 2020, 9:51 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಉಡುಪಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಜಿ ಸಲ್ಲಿಸಿದವರ ಸಂಖ್ಯೆಗೂ ಬೆಳೆ ಸಾಲ ಪಡೆದ ರೈತರ ಸಂಖ್ಯೆಗೂ ಭಾರೀ ವ್ಯತ್ಯಾಸವಿರುವ ಕಾರಣ ಸರಕಾರದ ನಿರ್ದೇಶನದಂತೆ ಫೆ. 8ರಿಂದ 24ರವರೆಗೆ ಬೆಳೆ ಸಾಲ ಅಭಿಯಾನವನ್ನು ಎಲ್ಲ ಬ್ಯಾಂಕುಗಳೂ ನಡೆಸಲಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಅಗ್ರಣಿ ಬ್ಯಾಂಕ್ ಪ್ರಬಂಧಕ ರುದ್ರೇಶ್ ಮತ್ತು ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರಕಾರದ 6,000 ರೂ., ರಾಜ್ಯ ಸರಕಾರದ 4,000 ರೂ. ನೆರವು ಕಿಸಾನ್ ಸಮ್ಮಾನ್ ಯೋಜನೆಯಡಿ ನಾಲ್ಕು ಕಂತುಗಳಲ್ಲಿ ಸಿಗಲಿದೆ. ಜಿಲ್ಲೆಯಲ್ಲಿ 1,34,217 ರೈತರು ಅರ್ಜಿ ಸಲ್ಲಿಸಿದ್ದು ಕೆಲವರಿಗೆ ಎರಡು, ಮೂರು ಕಂತುಗಳು ಸಿಕ್ಕಿವೆ. ಕೆಲವರಿಗೆ ಕೊನೆಯ ಕಂತೂ ಬಂದಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವೇ ಮಂದಿಗೆ ಬಂದಿಲ್ಲ; ಅದನ್ನು ಪರಿಹರಿಸಲಾಗುತ್ತಿದೆ. ಆದರೆ ರಾಷ್ಟ್ರೀಕೃತ, ಗ್ರಾಮೀಣ, ಡಿಸಿಸಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದುಕೊಂಡವರು ಕೇವಲ 30,940 ರೈತರು. ರೈತರಾಗಿ ಅರ್ಜಿ ಸಲ್ಲಿಸಿದ 1,03,277 ಮಂದಿಗೆ ಬೆಳೆ ಸಾಲ ಸಿಗಲಿಲ್ಲ ಎಂಬ ಸೂಚನೆ ಇದು ಎಂದರು.
ಬ್ಯಾಂಕ್ನವರು ಸಾಲ ಕೊಡುತ್ತಿದ್ದಾರೋ ಇಲ್ಲವೋ? ಮಾಹಿತಿ ಕೊರತೆಯೋ ಎಂಬ ಸಂಶಯ ಮೂಡುತ್ತಿದೆ. ಬ್ಯಾಂಕ್ನವರಿಗೆ ಬೆಳೆ ಸಾಲ ಕೊಡಲು ಸೂಚನೆ ನೀಡಲಾಗಿದೆ. ಇನ್ನೊಮ್ಮೆ ಸಭೆ ಕರೆದು ಯಾವುದೇ ವಿಳಂಬವಿಲ್ಲದೆ ಸಾಲ ಕೊಡಲು ಸೂಚನೆ ನೀಡಲಾಗುವುದು. ಅಭಿಯಾನದ ಅವಧಿಯಲ್ಲಿ ರೈತರು ಬೆಳೆಸಾಲಕ್ಕೆ ಹೆಸರು ನೋಂದಾಯಿಸಬಹುದು. ಕಡಿಮೆ ಜಾಗವಿದ್ದವರಿಗೂ ಸಾಲ ನೀಡಲಾಗುವುದು. ಅಗತ್ಯವಿರುವವರಿಗೆ ಸಾಲ ಸಿಗುವುದಿಲ್ಲ ಎಂದಾಗಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬ್ಯಾಂಕ್ ಅಧಿಕಾರಿಗಳು ಬೆಳೆ ಸಾಲ ನೀಡುವುದಿಲ್ಲ ಎಂದು ಹೇಳಿದರೆ, ಅನಗತ್ಯವಾಗಿ ವಿಳಂಬ ಮಾಡಿದರೆ ಜಿಲ್ಲಾ ಅಗ್ರಣಿ ಬ್ಯಾಂಕ್ ಪ್ರಬಂಧಕ ರುದ್ರೇಶ್ (9449860858), ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ (8277932500), ಉಪನಿರ್ದೇಶಕ ಚಂದ್ರಶೇಖರ್ (8277932501) ಅವರನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ