ಉಡುಪಿಯಲ್ಲಿ ರಾಷ್ಟ್ರಪತಿ ಭೇಟಿಗೆ ಸಿದ್ಧತೆ
Team Udayavani, Dec 17, 2018, 9:34 AM IST
ಉಡುಪಿ: ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸನ್ಯಾಸಾಶ್ರಮ ಸ್ವೀಕರಿಸಿದ 80ನೇ ವರ್ಧಂತಿ ಅಂಗವಾಗಿ ಅವರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಡಿ. 27ರಂದು ಉಡುಪಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆಯು ರವಿವಾರ ಸಂಜೆ ಉಡುಪಿ ಪೇಜಾವರ ಮಠದ ರಾಮವಿಟಲ ಸಭಾಂಗಣದಲ್ಲಿ ನಡೆಯಿತು.
ಡಿ. 27ರ ಮಧ್ಯಾಹ್ನ 12.10ಕ್ಕೆ ಆಗಮಿಸುವ ರಾಷ್ಟ್ರಪತಿಯವರು ಒಂದು ತಾಸು ಉಡುಪಿಯಲ್ಲಿರುತ್ತಾರೆ. ಕೇಂದ್ರ ಸಚಿವೆ, ಶ್ರೀಗಳ ಶಿಷ್ಯೆ ಉಮಾಭಾರತಿ ಆಯೋಜಿಸುವ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಪಾಲ್ಗೊಳ್ಳುವರು.
ರಾಜಾಂಗಣದಲ್ಲಿ ಸಭೆ?
ರಥಬೀದಿಯಲ್ಲಿ ಸಭೆ ನಡೆಸಲು ಇಕ್ಕಟ್ಟಾಗುತ್ತದೆ. ರಾಜಾಂಗಣದ ಪಾರ್ಕಿಂಗ್ ಪ್ರದೇಶ ತೆರೆದ ಸ್ಥಳವಾದ ಕಾರಣ ಭದ್ರತಾ ದೃಷ್ಟಿಯಿಂದ ಸೂಕ್ತವಲ್ಲ. ರಾಜಾಂಗಣ ಸಭಾಂಗಣವು ಆವರಣ ಹೊಂದಿರುವುದರಿಂದ ಇದು ಸೂಕ್ತ ಎಂಬ ಅಭಿಪ್ರಾಯ ಬಂತು. “ಇಲ್ಲಿ ಸಭೆ ಮಾಡಿದರೆ ವೇದಿಕೆಯಿಂದ 30 ಮೀ. ಅಂತರ ಖಾಲಿ ಬಿಡಬೇಕು. ಬಹುತೇಕ ಅರ್ಧಾಂಶ ಸಭಾಂಗಣದಲ್ಲಿ ಮಾತ್ರ ಜನರು ಕುಳಿತುಕೊಳ್ಳಬಹುದು. ಮೇಲ್ಭಾಗದಲ್ಲಿ ಕುಳಿತುಕೊಳ್ಳಲು ಅವಕಾಶಗಳಿಲ್ಲ’ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಅಧಿಕಾರಿ ಪ್ರಹ್ಲಾದ ಆಚಾರ್ಯ ತಿಳಿಸಿದರು.
ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಮಾತನಾಡಿ, ಕಾರ್ಯಕ್ರಮಕ್ಕೆ ಒಂದು ತಾಸು ಮುನ್ನ ಆಹ್ವಾನಿತರು ಸಭೆಯಲ್ಲಿ ಆಸೀನರಾಗಬೇಕು. ಶ್ರೀ ಕೃಷ್ಣಮಠ ಪರಿಸರದ 100 ಮೀ. ಸುತ್ತಲಿನ ಎಲ್ಲ ಅಂಗಡಿಗಳನ್ನು ಮುಚ್ಚ ಬೇಕು. ಆಗಮಿಸುವ ವಿಐಪಿಗಳಿಗೆ ಪಾಸ್ ನೀಡಬೇಕು. ಅವರು ಪಾಸ್ನೊಂದಿಗೆ ಗುರುತು ಚೀಟಿಯನ್ನು ತರಬೇಕು. ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕಿಂಗ್ಗೆ ಅವಕಾಶವಿಲ್ಲ. ಆ ದಿನ ಮಠದ ಪರಿಸರವನ್ನು ಎನ್ಎಸ್ಜಿ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ರಾಜಾಂಗಣದ ಸಮೀಕ್ಷೆ ನಡೆಸಿದ್ದೇವೆ. ಅಂತಿಮ ನಿರ್ಣಯವನ್ನು ಎನ್ಎಸ್ಜಿ ತೆಗೆದುಕೊಳ್ಳುತ್ತದೆ ಎಂದರು.
ಗಣ್ಯರಾದ ನಳಿನಿ ಪ್ರದೀಪ್, ಬಾಲಾಜಿ ರಾಘವೇಂದ್ರ ಆಚಾರ್ಯ, ಕೆ.ಕೆ. ಸರಳಾಯ, ಗಣೇಶ ರಾವ್, ಪ್ರದೀಪ್ಕುಮಾರ್ ಕಲ್ಕೂರ, ವಿ.ಜಿ. ಶೆಟ್ಟಿ, ವಿಲಾಸ ನಾಯಕ್, ದೇವದಾಸ ಹೆಬ್ಟಾರ್ ಉಪಸ್ಥಿತರಿದ್ದು ಚರ್ಚಿಸಿದರು. ವಾಸುದೇವ ಭಟ್ ಪೆರಂಪಳ್ಳಿ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ