- Sunday 08 Dec 2019
ಬೀಜಾಡಿ : ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಬೀಗ!
Team Udayavani, Jun 18, 2018, 2:30 AM IST
ಕೋಟೇಶ್ವರ: ಮಳೆಗಾಲದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚು. ಆರೋಗ್ಯ ಕ್ಷೀಣಿಸುವುದೂ ಇದೇ ಸಂದರ್ಭದಲ್ಲೇ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಕೇಂದ್ರಗಳ ಅಗತ್ಯ ಇನ್ನೂ ಹೆಚ್ಚು. ಆದರೆ ಗೋಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಬೀಜಾಡಿ ಸರಕಾರಿ ಆರೋಗ್ಯ ಉಪಕೇಂದ್ರ ಬಾಗಿಲು ಮುಚ್ಚಿ ವರ್ಷ ಕಳೆದಿದೆ.
2017ರಿಂದ ಮುಚ್ಚಿದ ಕೇಂದ್ರ
ಗೋಪಾಡಿ ಗ್ರಾ.ಪಂ. ಕಟ್ಟಡದ ಸನಿಹದಲ್ಲೇ ಈ ಆರೋಗ್ಯ ಉಪಕೇಂದ್ರವಿದೆ. ಆದರೆ 2017 ಜುಲೈನಿಂದ ಸಿಬ್ಬಂದಿ ಇಲ್ಲದೆ ಬಾಗಿಲು ಮುಚ್ಚಿದೆ. ಆದ್ದರಿಂದ ಬಡರೋಗಿಗಳು ಪರದಾಡಬೇಕಾದ ಸಂದಿಗ್ಧ ಪರಿಸ್ಥಿತಿ ಬಂದೊದಗಿದೆ.
ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಖಾಲಿ
ಬೀಜಾಡಿ ಉಪಕೇಂದ್ರದಲ್ಲಿ ಬೇಕಾದ ಎಲ್ಲ ಸೌಕರ್ಯ ಹೊಂದಿದ್ದರೂ ಇಲ್ಲಿ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಒಂದು ವರ್ಷದಿಂದ ಖಾಲಿ ಇದೆ. ಆದ್ದರಿಂದ ಈಗ ಬೀಗ ಹಾಕಲಾಗಿದೆ.
ಪ್ರತ್ಯೇಕ ಆರೋಗ್ಯ ಕೇಂದ್ರಗಳಿಗೆ ಬೇಡಿಕೆ
ಈಗಾಗಲೇ ಬೀಜಾಡಿ ಹಾಗೂ ಗೋಪಾಡಿ ಗ್ರಾಮಗಳು ಪ್ರತ್ಯೇಕಗೊಂಡಿದ್ದು ಗೋಪಾಡಿಯು ನೂತನ ಗ್ರಾ.ಪಂ. ಆಗಿ ಅಸ್ತಿತ್ವಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ಗ್ರಾಮಗಳಲ್ಲಿ ಆರೋಗ್ಯ ಉಪಕೇಂದ್ರ ಆಗಬೇಕೆನ್ನುವ ಬೇಡಿಕೆ ಇದೆ. ಈವರೆಗೆ ಗೋಪಾಡಿ ಹಾಗೂ ಬೀಜಾಡಿ ಒಂದೇ ಗ್ರಾ.ಪಂ.ನಲ್ಲಿ ಇದ್ದ ಕಾರಣ ಗೋಪಾಡಿಯಲ್ಲಿ ಬೀಜಾಡಿ ಆರೋಗ್ಯ ಉಪಕೇಂದ್ರವನ್ನು ಆರಂಭಿಸಲಾಗಿತ್ತು. ಆದರೆ ಗ್ರಾಮ ವಿಭಾಗ ಆದ್ದರಿಂದ ಪ್ರತ್ಯೇಕ ಆರೋಗ್ಯ ಕೇಂದ್ರ ಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ. ಈ ಸಂಬಂಧ ಪಂಚಾಯತ್ ನಿರ್ಣಯ ಕೈಗೊಂಡು ಆರೋಗ್ಯ ಇಲಾಖೆಯ ಅದಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಆದರೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಮುಚ್ಚಿದ ಆರೋಗ್ಯ ಕೇಂದ್ರೂ ತೆರೆಯಲಿಲ್ಲ.
ಮಂಜೂರಾತಿಗೆ ವಿಳಂಬ
ಆರೋಗ್ಯ ಸಹಾಯಕರಿಲ್ಲದೇ ಕೇಂದ್ರ ಮುಚ್ಚಿದ್ದರಿಂದ ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಿಖಿತ ಪತ್ರ ಬರೆಯಲಾಗಿದೆ. ಆದರೆ ಇಲಾಖೆ ಮಂಜೂರಾತಿ ಆಗಿಲ್ಲ. ಪ್ರಸ್ತುತ ಗೋಪಾಡಿಯಲ್ಲಿರುವ ಬೀಜಾಡಿ ಆರೋಗ್ಯ ಉಪಕೇಂದ್ರದ ಹೆಸರನ್ನು ಬದಲಾಯಿಸಿ ಅಲ್ಲಿ ಮಹಿಳಾ ಆರೋಗ್ಯ ಸಹಾಯಕಿಯನ್ನು ನೇಮಕ ಮಾಡಿದಲ್ಲಿ ಒಂದು ಹಂತದ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ಕುಂಭಾಶಿ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ.
ಇಲಾಖೆಗೆ ಮಾಹಿತಿ
ಖಾಲಿಯಿರುವ 320 ಮಹಿಳಾ ಆರೋಗ್ಯ ಸಹಾಯಕರ ಹುದ್ದೆಯಲ್ಲಿ 190 ಹುದ್ದೆ ಭರ್ತಿಯಾಗಿದೆ. ಉಳಿದ ಹುದ್ದೆಗಳಿಗೆ ತುಂಬಬೇಕಿದೆ. ಇಲಾಖೆಗೆ ಮಾಹಿತಿ ನೀಡಲಾಗಿದೆ.
– ಶ್ರೀಲತಾ ಎಸ್. ಶೆಟ್ಟಿ, ಜಿ.ಪಂ. ಸದಸ್ಯೆ
ಮನವಿ
ಉಡುಪಿ ಜಿಲ್ಲೆಯಲ್ಲಿ ಭರ್ತಿಯಾಗದೇ ಉಳಿದಿರುವ ಆರೋಗ್ಯ ಸಹಾಯಕಿಯರ ಹುದ್ದೆಯ ನೇಮಕಾತಿಗೆ ಸಂಬಂಧಪಟ್ಟಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನೇಮಕಾತಿಯಾದೊಡನೆ ಹುದ್ದೆ ಭರ್ತಿಮಾಡಲಾಗುವುದು.
– ಡಾ| ರೋಹಿಣಿ, ಡಿ.ಎಚ್.ಒ.
ಕ್ರಮ ಕೈಗೊಂಡಿಲ್ಲ
ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆರೋಗ್ಯ ಉಪಕೇಂದ್ರವನ್ನು ಆರಂಭಿಸಲು ಕೇಳಿಕೊಳ್ಳಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.
– ಸರಸ್ವತಿ ಜಿ.ಪುತ್ರನ್, ಅಧ್ಯಕ್ಷರು, ಗ್ರಾ.ಪಂ. ಗೋಪಾಡಿ
— ಡಾ| ಸುಧಾಕರ ನಂಬಿಯಾರ್
ಈ ವಿಭಾಗದಿಂದ ಇನ್ನಷ್ಟು
-
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ...
-
ಕೋಟ: ಮುಂಗಾರು ಕಟಾವು ಪೂರ್ಣಗೊಂಡು ಹಿಂಗಾರು ಬಿತ್ತನೆ ಆರಂಭವಾದರೂ ಸರಕಾರದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕೇಂದ್ರಗಳಿನ್ನೂ ಆರಂಭವಾಗಿಲ್ಲ. ಸಾಮಾನ್ಯ...
-
ಕಾರ್ಕಳ: ಒಂದಿಲ್ಲೊಂದು ಕಾರ್ಯಕ್ಕಾಗಿ ಪ್ರತಿಯೋರ್ವರೂ ಅವಲಂಬಿಸಬೇಕಾದ ಇಲಾಖೆಗಳಲ್ಲಿ ಕಂದಾಯ ಇಲಾಖೆಯೇ ಪ್ರಮುಖ ವಾದುದು. ಜನನ ಪ್ರಮಾಣ ಪತ್ರದಿಂದ ಮೊದಲ್ಗೊಂಡು...
-
ಸಿದ್ದಾಪುರ: ಸಿದ್ದಾಪುರ ವಲಯ ಭಜನಾ ಮಂಡಳಿಗಳ ಒಕ್ಕೂಟದವತಿಯಿಂದ ಸಿದ್ದಾಪುರ ನಗರ ಭಜನೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಡಿ. 7ರಂದು ನಗರ ಭಜನೆ ಉತ್ಸವ ಕಾರ್ಯಕ್ರಮ...
-
ಉಡುಪಿ/ಮಂಗಳೂರು: ಕರಾವಳಿಯ ದ.ಕ. ಮತ್ತು ಉಡುಪಿ ಜಿಲ್ಲೆ ಸಹಿತ ರಾಜ್ಯಾದ್ಯಂತ ಶುಕ್ರವಾರ ಸರ್ವರ್ ಸಮಸ್ಯೆಯಿಂದಾಗಿ ಸಬ್ರಿಜಿಸ್ಟ್ರಾರ್ ಕಚೇರಿಗಳಲ್ಲಿ ಗ್ರಾಹಕರಿಗೆ...
ಹೊಸ ಸೇರ್ಪಡೆ
-
ಬೆಳ್ತಂಗಡಿ: ಎಲ್ಲರ ನಿರೀಕ್ಷೆ ಚುನಾವಣೆ ಫಲಿತಾಂಶದ ಕಡೆ ಇದೆ. ಎಲ್ಲಾ ಕ್ಷೇತ್ರದಲ್ಲಿ ಸಚಿವರೊಂದಿಗೆ ನಾವು ಸುತ್ತು ಬಂದಿದ್ದು, ಸಮೀಕ್ಷೆ ಪ್ರಕಾರ 15 ಕ್ಷೇತ್ರದಲ್ಲಿ...
-
ಮೈಸೂರು: ಕೆ.ಎಸ್ಆರ್ ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪ್ಪ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು...
-
ಮಂಗಳೂರು: ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆದಳ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಮುಕ್ಕದ...
-
ಲಕ್ನೋ: ಮದುವೆಗೆ ವರ ತಡವಾಗಿ ಬಂದಿದ್ದಕ್ಕೆ ಬೇಸರಗೊಂಡ ವಧುವಿನ ಕುಟುಂಬಸ್ಥರು ಬೇರೊಬ್ಬನ ಜೊತೆ ವಿವಾಹವನ್ನು ಸಾಂಗವಾಗಿ ನೆರವೇರಿಸಿದ ಘಟನೆ ಉತ್ತರಪ್ರದೇಶದಲ್ಲಿ...
-
ತಿರುವನಂತಪುರ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯಕ್ಕೆ ತಿರುವನಂತಪುರ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದ ಟೀಂ ಇಂಡಿಯಾ ಎರಡನೆ...