ಖಾಸಗಿ ಸಿಟಿ ಬಸ್‌ ನಿಲ್ದಾಣದಲ್ಲಿ ನಿರ್ವಹಣೆ ಕೊರತೆ

ತುಂಡಾದ ಬೆಂಚ್‌ಗಳು, ಕಿತ್ತುಹೋದ ಇಂಟರ್‌ಲಾಕ್‌

Team Udayavani, Feb 29, 2020, 5:17 AM IST

CITY-BUS-STAND

ಉಡುಪಿ: ನಗರದ ವಿವಿಧ ಭಾಗಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತಿರುವ ಖಾಸಗಿ ಬಸ್‌ಗಳ ನಿಲ್ದಾಣದಲ್ಲಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.

ನಗರ ಖಾಸಗಿ ಬಸ್‌ ನಿಲ್ದಾಣದಿಂದ ನಿತ್ಯ ಮಲ್ಪೆ, ಅಲೆವೂರು, ಮಂಚಿ, ಸಂತೆಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಿಗೆ 80 ಬಸ್‌ಗಳು ಸಂಚರಿಸುತ್ತಿವೆ. ಈ ಎಲ್ಲ ಬಸ್‌ಗಳು ಖಾಸಗಿ ಸಿಟಿ ಬಸ್‌ ನಿಲ್ದಾಣ ಮೂಲಕ ಇತರೆ ಸ್ಥಳವನ್ನು ಸಂಪರ್ಕಿಸುತ್ತವೆೆ. ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ನಿಲ್ದಾಣದಲ್ಲಿ ನಿರ್ವಹಣೆ ಕೊರತೆಯಿಂದ ಪ್ರಯಾಣಿಕರು ಸಮಸ್ಯೆ ಪಡುವಂತಾಗಿದೆ.

ತುಂಡಾದ ಬೆಂಚ್‌ಗಳು!
ಸಿಟಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಕಟ್ಟೆಯ ಇಂಟರ್‌ಲಾಕ್‌ ಬೆಂಚ್‌ಗಳು ತುಂಡಾಗಿ ಬಿದ್ದಿದ್ದು, ಹಲವು ತಿಂಗಳುಗಳೇ ಕಳೆದಿವೆ. ಇತರೆ ಬೆಂಚ್‌ಗಳ ತಳದಲ್ಲಿ ತುಕ್ಕು ಹಿಡಿದು ತುಂಡಾಗುವ ಹಂತದಲ್ಲಿವೆ. ಪ್ರಯಾಣಿಕರಿಗೆ ಕೂರಲೂ ಜಾಗವಿಲ್ಲ. ಇದರಲ್ಲೇನಾದರೂ ಕೂತರೆ ಮೂಳೆ ಮುರಿದುಕೊಳ್ಳುವುದು ಖಚಿತ ಎಂಬಂತಿದೆ.

ಇಂಟರ್‌ಲಾಕ್‌ಗೆ ಹಾನಿ
ಬಸ್‌ ನಿಲ್ದಾಣದಲ್ಲಿ 5 ಶೆಲ್ಟರ್‌ಗಳಿವೆ. ಕೆಲ ಶೆಲ್ಟರ್‌ ಕಟ್ಟೆಯ ಇಂಟರ್‌ಲಾಕ್‌ಗಳು ಕಿತ್ತು ಹೋಗಿವೆೆ. ಇನ್ನೂ ನಗರ ವ್ಯಾಪ್ತಿಯ ಬಸ್‌ ನಿಲ್ದಾಣಗಳ ಕೆಲ ಆಸನಗಳು ಸಂಪೂರ್ಣವಾಗಿ ಹಾಳಾಗಿವೆ.

ಮತ್ತಷ್ಟು ಆಸನಕ್ಕೆ ಬೇಡಿಕೆ
ಬಸ್‌ ನಿಲ್ದಾಣದಲ್ಲಿ ಬೆಂಚ್‌ ಮುರಿದು ಬಿದ್ದು ಹಲವು ತಿಂಗಳಾಗಿವೆ. ಸಂಬಂಧಪಟ್ಟವರು ಕೂಡಲೇ ದುರಸ್ತಿಗೊಳಿಸಬೇಕು. ನಿತ್ಯ ಸಾವಿರಾರು ಜನರು ಪ್ರಯಾಣಿಸುವ ಈ ಬಸ್‌ ನಿಲ್ದಾಣದಲ್ಲಿ ಕೇವಲ ಒಂದು ಬಾರಿಗೆ 5 ಶೆಲ್ಟರ್‌ನಲ್ಲಿ ಗರಿಷ್ಠ 30 ಮಂದಿ ಕುಳಿತುಕೊಳ್ಳಬಹದು. ಇದರಿಂದಾಗಿ ಪ್ರಯಾಣಿಕರು ನಿಂತುಕೊಂಡು ಬಸ್‌ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ವತ್ಛತೆಗೆ -ಗಾರ್ಡ್‌ ನೇಮಕ!
ನಿಲ್ದಾಣದಲ್ಲಿ ಎಂಜಲು, ಗುಟ್ಕ, ಬೀಡಿ ತಿಂದು ಉಗುಳುವವರನ್ನು, ಕಸ ಎಸೆಯುವವರನ್ನು ನಿಯಂತ್ರಿ ಸುವ ನಿಟ್ಟಿನಲ್ಲಿ ನಿಲ್ದಾಣ ಸ್ವತ್ಛತೆಗೆ ಸಿಟಿ ಬಸ್‌ ಮಾಲೀಕರು ಮತ್ತು ಚಾಲಕರು, ನಿರ್ವಾಹಕರು ನೌಕರರ ಸಂಘದವರು ಹಾಗೂ ದಾನಿಗಳ ನೆರವು ಪಡೆದು ಸೆಕ್ಯೂರಿಟಿಗಾರ್ಡ್‌ ಒಬ್ಬರನ್ನು ನೇಮಕ ಮಾಡಿದ್ದಾರೆ. ಈ ಸೆಕ್ಯೂರಿಟಿ ಗಾರ್ಡ್‌ ಬಸ್‌ ನಿಲ್ದಾಣ ಸುತ್ತಾಡುತ್ತ ಸೂಚನೆ ಕೊಡುತ್ತ ಇರುತ್ತಾರೆ. ಕಸ ಎಸೆಯಲು ಅಲ್ಲಲ್ಲಿ ಕಸದ ಡಬ್ಬಿ (ಒಣ ಕಸ-ಹಸಿ ಕಸ ಪ್ರತ್ಯೇಕ), ಉಗುಳಲು ಸಿಮೆಂಟ್‌ ಚಟ್ಟಿಯನ್ನು ಇರಿಸಲಾಗಿದೆ.

ಗಮನಕ್ಕೆ ತರಲಾಗಿದೆ
ಸಿಟಿ ಬಸ್‌ ನಿಲ್ದಾಣದ ನಿರ್ವಹಣಾ ಜವಾ ಬ್ದಾರಿಯ ನಗರಸಭೆಯದ್ದು, ಒಂದು ಬಸ್‌ಗೆ 150ರೂ ನಂತೆ 80 ಬಸ್‌ಗಳ ಮಾಸಿಕ 12,000 ರೂ. ನಗರಸಭೆಗೆ ಪಾವತಿಯಾಗುತ್ತಿದೆ. ಆಸನಗಳು ಹಾಳಾಗಿರುವ ಕುರಿತು ನಗರಸಭೆ ಗಮನಕ್ಕೆ ತರಲಾಗಿದೆ.
-ಸುರೇಶ್‌ ನಾಯಕ್‌, ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ.

ವ್ಯಾಪ್ತಿಗೆ ಬರುವುದಿಲ್ಲ
ಖಾಸಗಿ ಸಿಟಿ ಬಸ್‌ ನಿಲ್ದಾಣದ ನಿರ್ವಹಣೆಯ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ.
-ಮೋಹನ್‌ ರಾಜ್‌, ಎಇಇ ನಗರಸಭೆ. ಉಡುಪಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.