ಕಬ್ಬಿನಾಲೆ: ಕೊಂಕಣಾರಬೆಟ್ಟು ಶಾಲಾ ಕಾಂಪೌಂಡ್ ಕುಸಿತ
ಖಾಸಗಿ ಪೈಪ್ ಲೈನ್ ಅವಾಂತರ
Team Udayavani, Jul 30, 2019, 5:29 AM IST
ಹೆಬ್ರಿ: ಕಬ್ಬಿನಾಲೆ ಗ್ರಾಮದಲ್ಲಿ ಖಾಸಗಿ ಮೊಬೈಲ್ ಕಂಪೆನಿಯ ಪೈಪ್ಲೈನ್ ಕಾಮಗಾರಿ ಸಂದರ್ಭ ಶಾಲಾ ಕಾಂಪೌಂಡಿನ ಹತ್ತಿರದಲ್ಲೇ ಭಾರೀ ಆಳದ ಅಗೆತ ಮಾಡಿದ ಪರಿಣಾಮ ಕೊಂಕಣಾರಬೆಟ್ಟು ಶಾಲಾ ಕಾಂಪೌಂಡ್ ಸಂಪೂರ್ಣ ಕುಸಿದು ಬಿದ್ದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಂಪೆನಿಯ ನಿರ್ಲಕ್ಷ
ಶಾಲೆಯ ಆವರಣಗೋಡೆಯ ಸಮೀಪ ಹೊಂಡಗಳನ್ನು ಮಾಡುತ್ತಿರುವಾಗಲೇ ಗೋಡೆ ಸ್ವಲ್ಪ ಕುಸಿತಕಂಡಿದ್ದು ಗ್ರಾಮಸ್ಥರ ಒತ್ತಾಯದ ಮೇರೆಗೆ ಕಲ್ಲನ್ನು ಹಾಕಿ ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು. ಆದರೆ ಮತ್ತೆ ಅಲ್ಲಿಯೇ ಹೊಂಡಗಳನ್ನು ತೋಡಿದ್ದರಿಂದ ಕಾಂಪೌಂಡ್ ಮತ್ತೆ ಸಂಪೂರ್ಣ ಕುಸಿತಗೊಂಡಿದೆ. ಘಟನೆ ನಡೆದು ಹಲವು ದಿನಗಳು ಕಳೆದರೂ ಖಾಸಗಿ ಕಂಪೆನಿಯಾಗಲಿ, ಶಿಕ್ಷಣ ಇಲಾಖೆ, ಸ್ಥಳೀಯಾಡಳಿತವಾಗಲಿ ದುರಸ್ತಿಗೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯ ಬದಿಯಲ್ಲಿ ಶಾಲೆ ಇರುವುದರಿಂದ ನಿತ್ಯ ವಾಹನ ಸಂಚಾರದಿಂದ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಊರಿನವರು ಶ್ರಮದಾನದಿಂದ ಈ ಶಾಲೆಗೆ ಅಗಲವಾದ ಮೈದಾನ ಹಾಗೂ ಕಂಪೌಂಡ್ ನಿರ್ಮಾಣ ಮಾಡಿದ್ದರು.
ದುರಸ್ತಿಗಾಗಿ ಶಾಲೆಯಿಂದ ಮನವಿ
ಕಾಂಪೌಂಡ್ ದುರಸ್ತಿಗಾಗಿ ಶಾಲೆಯಿಂದ ಪಂಚಾಯತ್ಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಆದರೆ ಅದರ ದುರಸ್ತಿಗೆ ಬೇಕಾಗುವಷ್ಟು ಅನುದಾನ ಪಂಚಾಯತ್ನಿಂದ ಲಭ್ಯವಿಲ್ಲದ ಕಾರಣ ಪ್ರಕೃತಿ ವಿಕೋಪದ ಅಡಿಯಲ್ಲಿಯೇ ದುರಸ್ತಿ ಮಾಡಬೇಕಾಗುತ್ತದೆ.
-ಶಶಿಕಲಾ ಡಿ. ಪೂಜಾರಿ, ಅಧ್ಯಕ್ಷರು ಗ್ರಾ.ಪಂ. ಮುದ್ರಾಡಿ
ಬೇಜವಾಬ್ದಾರಿಯಿಂದ ಕಾಂಪೌಂಡ್ ಕುಸಿತ
ಖಾಸಗಿ ಕಂಪೆನಿಯವರು ಶಾಲಾ ಕಾಂಪೌಂಡ್ನ ಹತ್ತಿರದಲ್ಲೇ ಅಗೆತ ಮಾಡುತ್ತಾರೆ ಎಂದು ಗೊತ್ತಿದ್ದರೂ ಶಾಲಾ ಸಿಬಂದಿ, ಶಿಕ್ಷಣ ಇಲಾಖೆ, ಸ್ಥಳೀಯ ಜನಪ್ರತಿನಿಧಿ, ಸ್ಥಳೀಯ ಪಂಚಾಯತ್ಗಳಾಗಲೀ ಈ ಬಗ್ಗೆ ಮುತುವರ್ಜಿ ವಹಿಸಿ ಕಾಂಪೌಂಡ್ನಿಂದ ಸ್ವಲ್ಪ ದೂರದಲ್ಲಿ ಅಗೆಯುವಂತೆ ವಿನಂತಿಸಿದ್ದರೆ ಹೀಗಾಗುತ್ತಿರಲಿಲ್ಲ. ಸ್ಥಳೀಯ ಸಂಸ್ಥೆ ಹಾಗೂ ಮುಖಂಡರ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣ.
-ಶ್ರೀಕರ ಭಾರಧ್ವಜ್ ಕಬ್ಬಿನಾಲೆ,
ಸಾಮಾಜಿಕ ಕಾರ್ಯಕರ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ