ಕಾರ್ಕಳ:ಕಾಬೆಟ್ಟು,ಬಂಗ್ಲೆಗುಡ್ಡೆಯಲ್ಲಿ ನೀರಿಲ್ಲ
Team Udayavani, Apr 2, 2018, 7:00 AM IST
ಕಾರ್ಕಳ: ಏರುತ್ತಿರುವ ಬಿಸಿಲು ಪುರಸಭೆ ವ್ಯಾಪ್ತಿಯ ಎರಡು ವಾರ್ಡ್ಗಳಲ್ಲಿ ನೀರಿನ ಅಭಾವ ಸೃಷ್ಟಿಸಿದೆ.ಇನ್ನು ಕೆಲವೆಡೆ ನೀರಿನ ಸಂಪರ್ಕ ಸರಿ ಇಲ್ಲದೇ ಸಮಸ್ಯೆಯಾಗಿದೆ. ಕಾಬೆಟ್ಟು ವಾರ್ಡ್ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನೀರಿನ ಕೊರತೆ ಬಿಸಿ ಮುಟ್ಟಿದೆ.ಬಂಗ್ಲೆಗುಡ್ಡೆ ವಾರ್ಡ್ನಲ್ಲಿ ಕಳೆದ ಐದಾರು ದಿನಗಳಿಂದ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದ್ದು,ಕೆಲ ತಾಂತ್ರಿಕ ಸಮಸ್ಯೆಗಳನ್ನೂ ಈ ವಾರ್ಡ್ ಎದುರಿಸುತ್ತಿದೆ.
ವಿದ್ಯುತ್ ಸಂಪರ್ಕವಿಲ್ಲ
ಕಾಬೆಟ್ಟು ವಾರ್ಡ್ನಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ಬಾವಿ ನಿರ್ಮಾಣವಾಗಿದೆ. ಪೈಪ್ಲೈನ್ ಕೂಡ ಮಾಡಲಾಗಿದ್ದು, ಆದರೆ ಅದಕ್ಕೆ ವಿದ್ಯುತ್ ಸಂಪರ್ಕವಿಲ್ಲ. ಈ ಬಾವಿಯಿಂದ ನೀರು ತೆಗೆದರೆ ಸಮಸ್ಯೆ ಸ್ವಲ್ಪ ಕಡಿಮೆಯಾಗಲಿದೆ.ಹತ್ತಿರದಲ್ಲಿ ಬೋರ್ವೆಲ್ ಇದ್ದರೂ ಅದರ ನೀರು ಸಾಲುತ್ತಿಲ್ಲ.ರೋಟರಿ ಕಾಲನಿ,ಭಾರತ್ ಬೀಡಿ ಕಾಲನಿ,ಕಾಬೆಟ್ಟು ಕುಚೇಲಪಾದೆ, ಪ್ರಶಾಂತ್ ನಗರ ಮೊದಲಾದ ಕಡೆ ನೀರಿನ ಆವಶ್ಯಕತೆ ಇದೆ.
ನಿತ್ಯ 3 ಎಂಎಲ್ಡಿ ನೀರು ಅಗತ್ಯ
ಪುರಸಭೆಯ ವ್ಯಾಪ್ತಿಗೆ ಮುಂಡ್ಲಿ ಜಲಾಶಯದಿಂದ ನೀರು ಒದಗಿಸಲಾಗುತ್ತದೆ.ಮುಂಡ್ಲಿಯಲ್ಲಿ ಇನ್ನೂ ಒಂದು ತಿಂಗಳ ಕಾಲ ನೀರು ಸಿಗಬಹುದು ಎನ್ನುವ ಲೆಕ್ಕಾಚಾರವಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಸದ್ಯ ಒಂದೂವರೆ ಮೀಟರ್ನಷ್ಟು ನೀರಿದೆ.ಅಲ್ಲಿನ ನೀರು ಕಡಿಮೆಯಾದರೆ ಸ್ವರಾಜ್ಯ ಮೈದಾನದ ಸಮೀಪವಿರುವ ರಾಮಸಮುದ್ರದಿಂದ ನೀರು ತೆಗೆಯಲಾಗುತ್ತದೆ. ಉಳಿದಂತೆ ಪುರಸಭೆಯ ವ್ಯಾಪ್ತಿಯಲ್ಲಿ 10 ಬೋರ್ವೆಲ್ಗಳು ಹಾಗೂ 8 ಬಾವಿಗಳಿವೆ. 8,127 ಮನೆಗಳಲ್ಲಿ 4,426 ಮನೆಗಳಿಗೆ ಪುರಸಭೆಯ ನೀರಿನ ಸಂಪರ್ಕವಿದೆ. ಪುರಸಭೆ ವ್ಯಾಪ್ತಿಯಲ್ಲಿ ಪ್ರತಿ ದಿನ 3 ಎಂಎಲ್ಡಿ ನೀರಿನ ಅಗತ್ಯವಿದೆ.
ಪುರಸಭೆ ಎಚ್ಚೆತ್ತುಕೊಳ್ಳಲಿ
ಎರಡು ದಿನಗಳಿಗೊಮ್ಮೆ ನೀರು ಬರುತ್ತದೆ.ಆ ನೀರು ದಿನಬಳಕೆಗೆ ಸಾಕಾಗುವುದಿಲ್ಲ.ಕಳೆದ ಬಾರಿ ನಾವೇ ಹಣ ಖರ್ಚು ಮಾಡಿ ಟ್ಯಾಂಕರ್ ನೀರು ತರಿಸಿದ್ದೆವು.ಎಪ್ರಿಲ್, ಮೇ ತಿಂಗಳಲ್ಲಿ ನೀರಿನ ಅಭಾವ ತೀವ್ರವಾಗಿರುತ್ತದೆ. ಹೀಗಾಗಿ ಮುಂದಿನ ಎರಡು ತಿಂಗಳಲ್ಲಿ ಎದುರಾಗುವ ಸಮಸ್ಯೆ ಬಗೆಹರಿಸಲು ಪುರಸಭೆ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.
– ಪ್ರವೀಣ್ ಕುಮಾರ್,ಕಾಬೆಟ್ಟು ನಿವಾಸಿ
ದೊಡ್ಡ ಸಮಸ್ಯೆ ಇಲ್ಲ
ಪುರಸಭೆ ವ್ಯಾಪ್ತಿಗೆ ಸದ್ಯಕ್ಕೆ ದೊಡ್ಡಮಟ್ಟದಲ್ಲಿ ನೀರಿನ ಸಮಸ್ಯೆ ಇಲ್ಲ. ಮುಂಡ್ಲಿಯಲ್ಲಿ ನೀರು ಕಡಿಮೆಯಾದರೆ ರಾಮಸಮುದ್ರದಿಂದ ಪೂರೈಕೆ ಮಾಡಲಾಗುತ್ತದೆ.ಬಾವಿ, ಬೋರ್ವೆಲ್ಗಳಿವೆ. ಕೆಲವೊಂದು ಭಾಗಗಳಿಗೆ ಟ್ಯಾಂಕರ್ ಮೂಲಕವೂ ನೀರು ಪೂರೈಕೆ ಮಾಡಲಾಗಿದೆ.
– ಮೇಬಲ್ ಡಿಸೋಜಾ,ಪುರಸಭೆಯ ಮುಖ್ಯಾಧಿಕಾರಿ
– ಜಿವೇಂದ್ರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು