“ಮಳೆಗಾಲದ ಒಳಗೆ ಪ್ರೊಟೆಕ್ಷನ್ ವಾಲ್ ಕಾಮಗಾರಿ ಪೂರ್ಣ’
Team Udayavani, May 25, 2018, 7:20 AM IST
ಬೈಂದೂರು: ಒತ್ತಿನೆಣೆ ಗುಡ್ಡ ಕುಸಿತ ತಡೆಯಲ್ಲಿ ನಿರ್ಮಿಸಿದ ಸ್ಲೋಪ್ ಪ್ರೊಟೆಕ್ಷನ್ ವಾಲ್ ಕುಸಿಯುವ ಭೀತಿಯಲ್ಲಿರುವ ಒತ್ತಿನೆಣೆ ಪ್ರದೇಶಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್ ಬೇಟಿ ನೀಡಿದರು.
ಐ.ಆರ್.ಬಿ ಕಂಪೆನಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಮಳೆಗಾಲದಲ್ಲಿ ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲು ತಿಳಿಸಿದರು ಹಾಗೂ ಸಂಪೂರ್ಣ ಮುಂಜಾರೂಕತೆ ವಹಿಸಲು ಆದೇಶಿಸಿದರು.
ಮಳೆಗಾಲದ ಒಳಗೆ ಸಂಪೂರ್ಣ ಪ್ರೊಟೆಕ್ಷನ್ ವಾಲ್ ನಿರ್ಮಾಣ ಗುಡ್ಡ ಕುಸಿತಕ್ಕೆ ಸಂಬಂಧಿಸಿದಂತೆ ಉದಯವಾಣಿ ವರದಿಗೆ ಸ್ಪಂದಿಸಿದ ಕಂಪೆನಿ ಅಧಿಕಾರಿಗಳು ಬುಧವಾರದಿಂದ ಕಾಮಗಾರಿಯನ್ನು ಇನ್ನಷ್ಟು ವೇಗದಿಂದ ನಡೆಸುತ್ತಿದ್ದಾರೆ. ಹಾಗೂ ಹೆಚ್ಚುವರಿ ಸಿಬಂದಿಗಳನ್ನು ನೇಮಿಸಲಾಗಿದೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಐ.ಆರ್.ಬಿ. ಪ್ರಾಜೆಕ್ಟ್ ಮ್ಯಾನೇಜರ್ ಯೋಗೇಂದ್ರಪ್ಪ ಯಾವುದೇ ರೀತಿ ಯಲ್ಲೂ ಗುಡ್ಡ ಕುಸಿಯದಂತೆ ಸೂಕ್ತ ಎಚ್ಚರಿಕೆ ವಹಿಸಿ ಕಾಮಗಾರಿ ನಡೆಸಲಾಗಿದೆ. ಅಕಾಲಿಕ ಮಳೆಯಿಂದ ರಸ್ತೆ ಪಕ್ಕದಲ್ಲಿ ಶೇಖರಿಸಿದ ಜೇಡಿಮಣ್ಣು ಚರಂಡಿ ಮೂಲಕ ಕೃಷಿ ಭೂಮಿಗೆ ನುಗ್ಗಿದೆ. ಒತ್ತಿನೆಣೆಯಲ್ಲಿ ಮಣ್ಣು ತೆರವು ಕಾರ್ಯ ಭರದಿಂದ ನಡೆಯುತ್ತಿದೆ. ಮಳೆಗಾಲದ ಒಳಗೆ ಎರಡು ಭಾಗಗಳು ಸ್ಲೋಪ್ ಪ್ರೊಟೆಕ್ಷನ್ ವಾಲ್ ಕಾಮಗಾರಿ ಪೂರ್ಣಗೊಳ್ಳಲಿದೆ ಮತ್ತು ಎರಡು ರಸ್ತೆಗಳು ಸಹ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ