ರಸ್ತೆ ಕಾಮಗಾರಿಗೆ ಬೆಂಬಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ
ಸಿದ್ದಾಪುರ: ಜಿ.ಪಂ. ರಸ್ತೆ ಕಾಮಗಾರಿಗೆ ಖಾಸಗಿ ಲೇಔಟ್ದಾರರಿಂದ ಅಡ್ಡಿ
Team Udayavani, Feb 28, 2020, 5:24 AM IST
ಸಿದ್ದಾಪುರ: ಸಿದ್ದಾಪುರ ಗ್ರಾಮದ ಮಹಾಮ್ಮಾಯ ಸಭಾ ಗೃಹದಿಂದ ಆಜ್ರಿ ಗ್ರಾಮ ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆ ಕಾಮಗಾರಿಗೆ ಫೆ. 26ರ ಸಂಜೆ ಅಗಳಿ ಬಳಿ ಖಾಸಗಿ ಲೇಔಟ್ದಾರರೋರ್ವರು ಅಡ್ಡಿಪಡಿಸಿದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ತರು ರಸ್ತೆ ಕಾಮಗಾರಿಗೆ ಬೆಂಬಲಿಸಿ, ರಸ್ತೆಯಲ್ಲಿ ಪ್ರತಿಭಟನೆಗೆ ಇಳಿದು ಖಾಸಗಿ ಲೇಔಟ್ದಾರರೋರ್ವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಸಿದ್ದಾಪುರ ಗ್ರಾಮದ ಅಗಳಿ ಬಳಿ ಸುಮಾರು 24 ಎಕರೆ ಪಟ್ಟ ಸ್ಥಳವನ್ನು 2011ರಲ್ಲಿ ಲೇಔಟ್ ನಿರ್ಮಿಸಲು ಖಾಸಗಿಯವರು ಖರೀದಿಸಿದ್ದರು. ಅಂದಿನಿಂದ ಇಂದಿನ ತನಕ ರಸ್ತೆಯ ವಿಚಾರವಾಗಿ ಘರ್ಷಣೆಗಳು ನಡೆಯುತ್ತಿತ್ತು. 2011ರಲ್ಲಿ ಜಾಗ ಖರೀದಿ ಮಾಡುವಾಗ ಪಟ್ಟದಾರರ ಹತ್ತಿರ ಸಾರ್ವಜನಿಕರ ರಸ್ತೆಗಳಿಗೆ ತೊಂದರೆ ನೀಡುವುದಿಲ್ಲ ಎನ್ನುವ ಆಶ್ವಾಸನೆ ಖರೀದಿದಾರರು ನೀಡಿದ್ದರು. ಆದರೆ ಖರೀದಿದಾರರು ಆಕ್ಕ ಪಕ್ಕದಲ್ಲಿರುವ ಕುಮ್ಕಿ ಸ್ಥಳ ಅತಿಕ್ರಮ, 2 ಕೆರೆಗಳ ಒತ್ತುವರಿ ಮಾಡಿ ಮುಚ್ಚಿದ ಬಗ್ಗೆ ಘರ್ಷಣೆಗಳು ನಡೆದವು. ಇದರ ಬಗ್ಗೆ ವಿಧಾನ ಪರಿಷತ್ ಆರ್ಜಿ ಸಮಿತಿಯಲ್ಲಿ ದೂರು ಕೂಡ ದಾಖಲಾಗಿತ್ತು. ಖಾಸಗಿ ಲೇಔಟ್ದಾರರು ಕ್ರಮೇಣ ಸುಮ್ಮನಿದ್ದರು.
2020ರಲ್ಲಿ ವಾರಾಹಿ ನೀರಾವರಿ ಯೋಜನೆಯ ಅಡಿಯಲ್ಲಿ ಸುಮಾರು 4 ಕಿ.ಮೀ. ರಸ್ತೆ ಅಭಿವೃದ್ಧಿಗೆ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು ಅನುದಾನ ಖಾದಿರಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಕಾಮಗಾರಿ ನಡೆಯುತ್ತಿರುವಾಗ ಬುಧವಾರ ಸಂಜೆ ಅಡ್ಡಿಪಡಿಸಿದಾಗ, ಗ್ರಾಮಸ್ಥರು ರಸ್ತೆ ಕಾಮಗಾರಿಗೆ ಬೆಂಬಲವಾಗಿ ನಿಂತರು.
ಲೇಔಟ್ದಾರರ ವಿರುದ್ಧ ಪ್ರತಿಭಟನೆ ಇಳಿದು ಆಕ್ರೋಶ ಹೊರ ಹಾಕಿದರು. ಸುಮಾರು 20 ವರ್ಷದ ಹಿಂದೆ ರೇವತಿ ಶೆಟ್ಟಿ ಅವರು ಸಿದ್ದಾಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾಗ ಗ್ರಾಮ ಪಂಚಾಯತ್ ರಸ್ತೆಯಾಗಿದ್ದ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಜಿಲ್ಲಾ ಪಂಚಾಯತ್ ರಸ್ತೆಯನ್ನಾಗಿ ಮಾಡಿದರು. ಈ ರಸ್ತೆಯು ಸಿದ್ದಾಪುರ ಹಾಗೂ ಆಜ್ರಿ ಗ್ರಾಮ ಸಂಪರ್ಕಿಸುವ ರಸ್ತೆಯಾಗಿದೆ. ನೂರಾರು ಕುಟುಂಬಗಳು ಈ ರಸ್ತೆಯ ಮೂಲಕ ದಿನ ನಿತ್ಯ ಸಂಪರ್ಕ ಬೆಳೆಸುತ್ತಾರೆ. ಸೂರ್ಜಿನಕೊಡ್ಲು, ಅಗಳಿ, ಚಿತ್ತೇರಿ, ಹೊಳೆಕೋಣು, ಆಜ್ರಿ ಮೂರುಕೈ ಹೀಗೆ ಹತ್ತಾರು ಸಣ್ಣ ಸಣ್ಣ ಪ್ರದೇಶಗಳ ಜನರ ಸಂಪರ್ಕ ಕೊಂಡಿ ಈ ರಸ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ