ಪುತ್ತಿಗೆ ಶ್ರೀಗಳಿಂದ ವಿದೇಶದಲ್ಲಿ 9ನೇ ಮಂದಿರ ಸ್ಥಾಪನೆ
Team Udayavani, Feb 12, 2018, 4:05 PM IST
ಉಡುಪಿ: ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಆಸ್ಟ್ರೇಲಿಯದ ಸಿಡ್ನಿ ನಗರದಲ್ಲಿ ಶ್ರೀ ವೆಂಕಟಕೃಷ್ಣ
ವೃಂದಾವನವನ್ನು ವೇದ ಮಂತ್ರಗಳ ನಡುವೆ ಉದ್ಘಾಟಿಸಿದರು. ಶ್ರೀಪಾದರು ವಿದೇಶದಲ್ಲಿ ಸ್ಥಾಪಿಸಿದ 9ನೇ ದೇವಸ್ಥಾನ ಮತ್ತು ಆಸ್ಟ್ರೇಲಿಯದಲ್ಲಿ 2ನೆಯದ್ದಾಗಿದೆ.
ಈ ದೇವಸ್ಥಾನ ಸ್ಥಾಪನೆಗೊಂಡಿದ್ದು ಕೇವಲ ಹತ್ತೇ ದಿನಗಳ ದಾಖಲೆ ಅವಧಿಯಲ್ಲಿ. ಇಲ್ಲಿ ಕೃಷ್ಣ ಮತ್ತು ಮಂತ್ರಾಲಯ
ರಾಘವೇಂದ್ರ ಸ್ವಾಮಿಗಳ ವೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ.
ಸಪ್ತಶುದ್ಧಿ, ಪ್ರಾಕಾರ ಶುದ್ಧಿ, ಗಣಪತಿ ಹೋಮ, ತುಳಸಿ ಪೂಜೆ, ದ್ವಾರಪೂಜೆ ಮೊದಲಾದ ಧಾರ್ಮಿಕ ಆಚರಣೆಗಳ ಬಳಿಕ
ಪ್ರತಿಷ್ಠಾಪನೆ ನೆರವೇರಿಸಲಾಯಿತು. ವಿಷ್ಣು ಸಹಸ್ರನಾಮ, ಮಂಗಲಾಷ್ಟಕ ಮೊದಲಾದ ಪಾರಾಯಣಗಳನ್ನು ಪಾಲ್ಗೊಂಡ
ಸಾಮಾನ್ಯ ಭಕ್ತರೂ ಪಠಿಸಿದರು. ಇಲ್ಲಿ ದೇವಸ್ಥಾನ ಸ್ಥಾಪಿಸುವಲ್ಲಿ ಸಹಕರಿಸಿದ ಭಕ್ತರು, ಉಂಟಾದ ಪ್ರೇರಣೆ ಕುರಿತು ಶ್ರೀಪಾದರು ವಿವರಿಸಿದರು. ಭಕ್ತ ಜಗನ್ ಅವರು ಸ್ವಾಗತಿಸಿ ದೇವಸ್ಥಾನದಲ್ಲಿ ನಡೆಯುವ ಸೇವೆಗಳನ್ನು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ