ಮಳೆಕೊಯ್ಲು ಅಭಿಯಾನಕ್ಕೆ ಸಾಥ್‌ ನೀಡಿದ ಮುದ್ರಾಡಿ ಗ್ರಾ. ಪಂ.


Team Udayavani, Oct 24, 2019, 5:31 AM IST

male-koilu

ಹೆಬ್ರಿ : ಉದಯವಾಣಿ ಅಭಿಯಾನದಿಂದ ಪ್ರೇರಣೆಗೊಂಡು ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್‌ ಕಟ್ಟಡದಲ್ಲಿ ಮಳೆ ಕೊಯ್ಲು ಅಳವಡಿಸುವುದರ ಜತೆಗೆ ಪಂಚಾಯತ್‌ ನೇತೃತ್ವದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಕೊಯ್ಲು ಅಳವಡಿಸಿ ಮಳೆಕೊಯ್ಲು ಅಭಿಯಾನಕ್ಕೆ ಸಾಥ್‌ ನೀಡಿದ್ದು ಇತರರಿಗೆ ಮಾದರಿಯಾಗಿದೆ.

ಮಳೆ ಕಡಿಮೆಯಾಗಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಾ ಇರುವುದ ರಿಂದ ನೀರಿನ ಮುಂಜಾಗ್ರತಾ ಕ್ರಮಕ್ಕಾಗಿ ಉದಯವಾಣಿಯಲ್ಲಿ ಬರುತ್ತಿರುವಂತಹ ಮಳೆಕೊಯ್ಲು ಅಭಿಯಾನ ವನ್ನು ಗಮನಿಸಿದ ಮುದ್ರಾಡಿ ಗ್ರಾ.ಪಂ. ಮೊದಲಿಗೆ ಪಂಚಾಯತ್‌ನ ಆವರಣದಲ್ಲಿರುವ ಬಾವಿಗೆ ಮಳೆ ಕೊಯ್ಲು ಘಟಕ ನಿರ್ಮಿಸಿ ಮಾಡಿನ ನೀರನ್ನು ಪೈಪ್‌ ಮೂಲಕ ಟಾಂಕಿಯಲ್ಲಿ ಸಂಗ್ರಹಿಸಿ ನೀರನ್ನು ಶುದ್ಧಗೊಳಿಸುವ ಕ್ರಮದ ಮೂಲಕ ಬಾವಿಗೆ ಜಲಪೂರಣ ಮಾಡಿ ಬಾವಿಯಲ್ಲಿ ನೀರಿನ ಸಂಗ್ರಹಣೆ ಮಾಡಿ ನೀರು ಹರಿದು ಹೋಗದಂತೆ ಭೂಮಿಯಲ್ಲಿ ಇಂಗಿಸುವಿಕೆಯಿಂದ ಅಂತರ್ಜಲ ಮಟ್ಟ ಉಳಿಸುವ ನಿಟ್ಟಿನಲ್ಲಿ ಮಳೆಕೊಯ್ಲು ಘಟಕವನ್ನು ನಿರ್ಮಿಸಲಾಯಿತು.

ಪಂಚಾಯತ್‌ ಸಭೆಯಲ್ಲಿ ನಿರ್ಣಯ
ಬೇಸಗೆ ಕಾಲದಲ್ಲಿ ಹೆಚ್ಚು ತ್ತಿರುವ ನೀರಿನ ಸಮಸ್ಯೆಗೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದೇ ಕಾರಣ ಎನ್ನುವುದನ್ನು ಗಮನಿಸಿದ ಪಂಚಾಯತ್‌ ಸಾಮಾನ್ಯ ಸಭೆ ಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಕಚೇರಿ ಕಟ್ಟಡದಲ್ಲಿ ಮಳೆಕೊಯ್ಲು ನಿರ್ಮಾಣ ಮಾಡುವವ ರಿಗೆ 3 ಸಾವಿರ ರೂ. ಅನುದಾನ ನೀಡುವು ದಾಗಿ ಸಭೆಯಲ್ಲಿ ನಿರ್ಣಯಿಸಿದ್ದು,ಸುಮಾರು 75 ಸಾವಿರವನ್ನು ಮಳೆಕೊಯ್ಲು ಘಟಕ ನಿರ್ಮಾಣಕ್ಕೆ ಮೀಸಲಿಡಲು ತೀರ್ಮಾನಿಸಲಾಗಿದೆ.
ಎಲ್ಲೆಲ್ಲಿ ಅಳವಡಿಕೆ ಮುದ್ರಾಡಿ ಗ್ರಾ.ಪಂ. ನೇತೃತ್ವದಲ್ಲಿ ಮಳೆಕೊಯ್ಲು ಘಟಕಕ್ಕೆ ಮಾಹಿತಿ ನೀಡುವುದರ ಜತೆಗೆ ಈಗಾಗಲೇ ಮುದ್ರಾಡಿ ಗ್ರಾಮ ಪಂಚಾಯತ್‌ನಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಸುಮಾರು 4 ಸಾವಿರ ರೂ. ವೆಚ್ಚದಲ್ಲಿ ಮಳೆಕೊಯ್ಲು ಘಟಕ ನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ.

ಬಳಿಕ ಮುದ್ರಾಡಿ ಸರಕಾರಿ ಹಿ.ಪ್ರಾ.ಶಾಲೆಗೆ ಹಾಗೂ ನೆಲ್ಲಿಕಟ್ಟೆ ಸ.ಕಿ.ಪ್ರಾ.ಶಾಲೆಗೆ ಪಂಚಾಯತ್‌ನಿಂದ 3 ಸಾವಿರ ರೂ. ಅನುದಾನ ನೀಡುವುದರ ಮೂಲಕ ಮಳೆಕೊಯ್ಲು ಅಳವಡಿಕೆ ಮಾಡಿದ್ದಾರೆ.ಇದರಿಂದ ಪ್ರೇರಿತರಾದ ಸ್ಥಳೀಯ ಉದ್ಯಮಿ ಶ್ರೀಧರ್‌ ನಾಯಕ್‌ ಅವರು ಸ್ವಂತ ಕಡಿಮೆ ಖರ್ಚಿನಲ್ಲಿ ಮಳೆಕೊಯ್ಲು ಘಟಕವನ್ನು ಅಳವಡಿಸಿದ್ದಾರೆ. ಅದೇ ರೀತಿ ಪಂಚಾಯತ್‌ ಮಾರ್ಗದರ್ಶನದಲ್ಲಿ ಶಾಲಾ  ಶಿಕ್ಷಕಿ ಮಾಲತಿ ಅವರ ಮನೆಗೆ ಹಾಗೂ ಪಂಚಾಯತ್‌ ಸದಸ್ಯೆ ಬಲ್ಲಾಡಿ ರತ್ನ ಪೂಜಾರಿ ಅವರ ಮನೆಯಲ್ಲಿ ಈಗಾಗಲೇ ಅತೀ ಕಡಿಮೆ ವೆಚ್ಚದಲ್ಲಿ ಘಟಕ ಅಳವಡಿಸಿ ಇತರರಿಗೆ ಮಾದರಿ ಯಾಗಿದ್ದಾರೆ.

ಅಳವಡಿಸಿದರೆ ಮಾತ್ರ ಅನುಮತಿ
ಮಳೆಕೊಯ್ಲು ಬಗ್ಗೆ ವಿಶೇಷ ಯೋಜನೆ ಸಿದ್ಧಪಡಿಸಿದ ಮುದ್ರಾಡಿ ಗ್ರಾ.ಪಂ. ಹೊಸ ಮನೆ/ ಯಾವುದೇ ಕಟ್ಟಡ ನಿರ್ಮಿಸಲು ಅನುಮತಿ ನೀಡಬೇಕಾದರೆ ಮಳೆಕೊಯ್ಲು ಘಟಕ ಕಡ್ಡಾಯವಾಗಬೇಕು ಎಂಬಆದೇಶ ಹೊರಡಿಸಿದ್ದು ಮಳೆಕೊಯ್ಲು ಅಭಿಯಾನಕ್ಕೆ ಉತ್ತೇಜನ ನೀಡುತ್ತಿದೆ.

ಅ.31: ಸಾರ್ವಜನಿಕ ಸಭೆ
ಮುದ್ರಾಡಿ ಪರಿಸರದಲ್ಲಿ ಪ್ರತಿ ವರ್ಷ ಬೇಸಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು ಪಂಚಾಯತ್‌ನಿಂದ ನೀರು ಸರಬರಾಜು ಮಾಡುವ ಮನೆಗಳಿಗೆ ಹಾಗೂ ಗ್ರಾಮಸ್ಥರಿಗೆ ಮಳೆಕೊಯ್ಲು ಬಗ್ಗೆ ಮಾಹಿತಿ ನೀಡಲು ಅ.31ರಂದು ಸಭೆ ಕರೆಯಲು ತೀರ್ಮಾನಿಸಲಾಗಿದೆ.

ಮಳೆಕೊಯ್ಲು ಘಟಕವನ್ನು ಪ್ರತೀ ಮನೆಯಲ್ಲಿ ಅಳವಡಿಸುವಬಗ್ಗೆ
ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ
ಅವರು ತಿಳಿಸಿದ್ದಾರೆ.

ಕಡಿಮೆ ವೆಚ್ಚದಲ್ಲಿ ಮಳೆಕೊಯ್ಲು ಘಟಕ ನಿರ್ಮಾಣ
ಹೆಚ್ಚಿನವರು ಮಳೆಕೊಯ್ಲು ಘಟಕ ನಿರ್ಮಾಣಕ್ಕೆ ದುಬಾರಿ ವೆಚ್ಚವಾಗುತ್ತದೆ ಎಂದು ಕೈಕಟ್ಟಿ ಕುಳಿತಿದ್ದಾರೆ.ಆದರೆ ಈ ಬಗ್ಗೆ ಭಯ ಪಡುವ ಆವಶ್ಯಕತೆ ಇಲ್ಲ ಅತೀ ಕಡಿಮೆ ಖರ್ಚಿನಲ್ಲಿಯೂ ಮಳೆಕೊಯ್ಲು ಘಟಕ ನಿರ್ಮಾಣ ಮಾಡಲು ಸಾಧ್ಯವಾಗುತ್ತಿದ್ದು ನನ್ನ ಮನೆಗೆ ಅಳವಡಿಸಿದ್ದೇನೆ.ಈ ಕುರಿತು ನಾನು ಮಾಹಿತಿ ನೀಡಲು ಸಿದ್ಧನಿದ್ದೇನೆ.
-ಶ್ರೀಧರ್‌ ನಾಯಕ್‌, ಉದ್ಯಮಿ ,ಮುದ್ರಾಡಿ

ಉದಯವಾಣಿ ಅಭಿಯಾನ ಪ್ರೇರಣೆ
ಪ್ರತಿ ವರ್ಷ ಹೆಚ್ಚುತ್ತಿರುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಯಾವ ಮಾರ್ಗೋಪಾಯ ಹಿಡಿಯುವುದು ಎಂಬ ಯೋಚನೆಯಲ್ಲಿರುವಾಗ ಉದಯವಾಣಿಯಲ್ಲಿ ಪ್ರಕಟವಾದ ಮಳೆಕೊಯ್ಲು ಅಭಿಯಾನ ನಮಗೆ ಪ್ರೇರಣೆಯಾಗಿದೆ.ಈ ನಿಟ್ಟಿನಲ್ಲಿ ಪಂಚಾಯತ್‌ ಮೊದಲು ಅಳವಡಿಸಿ ಇತರರಿಗೆ ಅಳವಡಿಸಲು ಪ್ರೇರೆಪಿಸಲಾಗುತ್ತಿದೆ
-ಶಶಿಕಲಾ ಡಿ.ಪೂಜಾರಿ, ಅಧ್ಯಕ್ಷರು ,ಮುದ್ರಾಡಿ ಗ್ರಾಮ ಪಂಚಾಯತ್‌.

ಜನರೇ ಜಾಗೃತರಾಗಿ
ಈಗಾಗಲೇ ಇಷ್ಟು ಮಳೆ ಸುರಿದರೂ ಕೂಡ ಬಾವಿ ,ಕೆರೆಗಳಲ್ಲಿ ನೀರು ಕಡಿಮೆಯಾಗಿ ಅಂತರ್ಜಲ ವೃದ್ಧಿಯಾಗಿಲ್ಲ . ಕಳೆದ ಬಾರಿ ಮನೆ ಮನೆಗೆ ನೀರು ಪೂರೈಕೆ ಮಾಡಿದ್ದು ,ಈ ಬಾರಿ ಜನರೇ ಜಾಗೃತರಾಗಿ ಅವರ ಪರಿಸರದಲ್ಲಿ ಮಳೆಕೊಯ್ಲು ಅಳವಡಿಸುವುದರ ಮೂಲಕ ಮುಂದೆ ಆಗುವ ನೀರಿನ
ಸಮಸ್ಯೆಗೆ ಕಡಿವಾಣ ಹಾಕಬೇಕಾಗಿದೆ.
-ಸುನಿಲ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ , ಮುದ್ರಾಡಿ

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.