ಗುಡುಗು ಸಹಿತ ಅಕಾಲಿಕ ಮಳೆ: ಭತ್ತ ಕಟಾವಿಗೆ ಅಡ್ಡಿ
Team Udayavani, Nov 17, 2019, 5:17 AM IST
ಕುಂದಾಪುರ: ಬೈಂದೂರು, ಕುಂದಾಪುರ ತಾಲೂಕಿನ ಎಲ್ಲೆಡೆ ಶನಿವಾರ ಮಧ್ಯಾಹ್ನದ ಅನಂತರ ಗುಡುಗು ಸಹಿತ ಅಕಾಲಿಕ ಮಳೆಯಾಗಿದೆ. ಮತ್ತೆ ಮಳೆ ಸುರಿದಿರುವುದರಿಂದ ಭತ್ತದ ಕಟಾವಿಗೆ ಅಡ್ಡಿಯಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
ಶನಿವಾರ ಕುಂದಾಪುರ, ಸಿದ್ದಾಪುರ, ಶಂಕರ ನಾರಾಯಣ, ಹಾಲಾಡಿ, ಬೆಳ್ವೆ, ಗೋಳಿ ಯಂಗಡಿ, ಅಲಾºಡಿ, ಕೊಲ್ಲೂರು, ಸೆಲ್ಕೊಡು, ಜಡ್ಕಲ್, ವಂಡ್ಸೆ, ಕುಂಭಾಸಿ, ತೆಕ್ಕಟ್ಟೆ, ಬಿದ್ಕಲ್ಕಟ್ಟೆ, ಬಿಜೂರು, ಉಪ್ಪುಂದ, ಮರವಂತೆ, ಬೈಂದೂರು, ಶಿರೂರು, ಗಂಗೊಳ್ಳಿ, ಹೆಮ್ಮಾಡಿ, ತಲ್ಲೂರು ಭಾಗದಲ್ಲಿ ಮಳೆಯಾಗಿದೆ.
ಕೆಲವು ದಿನಗಳ ಎರಡೆರಡು ಚಂಡ ಮಾರುತಗಳ ಹಿನ್ನೆಲೆಯಲ್ಲಿ ಗದ್ದೆಯಲ್ಲಿ ಭಾರೀ ನೀರು ನಿಂತಿದ್ದರಿಂದ ಕಟಾವು ವಿಳಂಬಗೊಂಡಿತ್ತು. ಈಗ ಮಳೆ ಕಡಿಮೆ ಹಾಗೂ ಕಟಾವು ಯಂತ್ರ ಸಿಕ್ಕಿರುವುದರಿಂದ ಕಟಾವು ಕಾರ್ಯ ನಿಧಾನಕ್ಕೆ ಅಲ್ಲಲ್ಲಿ ನಡೆಯುತ್ತಿತ್ತು. ಆದರೂ ಕೆಲವೆಡೆಗಳಲ್ಲಿ ಇನ್ನೂ ಕೂಡ ಕಟಾವು ಯಂತ್ರ ಬಾರದ ಕಾರಣ ಭತ್ತದ ಕಟಾವು ಕಾರ್ಯ ಆರಂಭವೇ ಆಗಿಲ್ಲ. ಇನ್ನು ಅಂಗಳದಲ್ಲಿ ಒಣಗಲು ಹಾಕಿದ ಬೈಹುಲ್ಲು ಕೂಡ ಮಳೆಗೆ ಒದ್ದೆಯಾಗಿದೆ. ಈ ಮಳೆಯಿಂದಾಗಿ ಮತ್ತೆ ರೈತರು ಚಿಂತಾಕ್ರಾಂತರಾಗಿದ್ದಾರೆ.
ಕೊಲ್ಲೂರು ಪರಿಸರ: ಉತ್ತಮ ಮಳೆ
ಕೊಲ್ಲೂರು: ಕಳೆದ ಎರಡು ದಿನಗಳಿಂದ ದೂರವಾಗಿದ್ದ ಮಳೆ ನ. 16ರಂದು ಕೊಲ್ಲೂರು ಪರಿಸರದಲ್ಲಿ ಧಾರಾಕಾರವಾಗಿ ಸುರಿದು ತಂಪೆರಚಿತು.
ಹಾಲ್ಕಲ್, ಸೆಳ್ಕೊàಡು, ಜಡ್ಕಲ್, ಮುದೂರು ಪರಿಸರದಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಸಿದ್ದಾಪುರ: ಮಳೆಯಿಂದ ರೈತರು ಕಂಗಾಲು
ಸಿದ್ದಾಪುರ: ಕಳೆದ ಹಲವು ದಿನಗಳಿಂದ ದೂರವಾಗಿದ್ದ ಮಳೆಯು ಶನಿವಾರ ಗುಡುಗು ಸಹಿತ ಭಾರೀ ಮಳೆಯಾಗಿದೆ. ಅಕಾಲಿಕ ಮಳೆ ಸುರಿದಿರುವುದರಿಂದ ರೈತರು ಹಾಗೂ ಕೃಷಿಕರು ಕಂಗಾಲಾಗಿದ್ದಾರೆ. ಕಟಾವು ಮಾಡಿ ಗದ್ದೆಯಲ್ಲಿ ಹಾಗೆಯೇ ಉಳಿದ ಭತ್ತದ ಪೈರು, ಓಣಗಿಸಲು ಅಂಗಳಕ್ಕೆ ಹಾಕಿದ ಅಡಿಕೆ ಮಳೆ ನೀರಿನಿಂದಾಗಿ ಒದ್ದೆಯಾಗಿವೆ.
ಸುರಿದ ಭಾರೀ ಮಳೆಯಿಂದಾಗಿ ಸಿದ್ದಾಪುರ ಪರಿಸರದ ಜನಜೀವನ ಅಸ್ತವ್ಯಸ್ತಗೊಂಡಿತು. ಶಂಕರನಾರಾಯಣ, ಹಾಲಾಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು, ಹೊಸಂಗಡಿ, ಹಳ್ಳಿಹೊಳೆ, ಆಜ್ರಿ, ಅಂಪಾರು ಮುಂತಾದ ಪ್ರದೇಶಗಳಲ್ಲೂ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ