ಗೋಳಿಕಟ್ಟೆ- ಜಂತ್ರ ಸಂಪರ್ಕ ರಸ್ತೆ ಸಂಚಾರ ದುಸ್ತರ
ರಸ್ತೆಯಲ್ಲಿಯೇ ಹರಿಯುವ ಮಳೆ ನೀರು ; ಸಂಚಾರಕ್ಕೆ ಬಾಡಿಗೆ ವಾಹನಗಳು ಹಿಂದೇಟು
Team Udayavani, Oct 14, 2019, 5:42 AM IST
ಬೆಳ್ಮಣ್: ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಕಟ್ಟೆಯಿಂದ ಬೆಳ್ಮಣ್ ಗ್ರಾಮದ ಜಂತ್ರವನ್ನು ಸಂಪರ್ಕಿಸುವ ಸಂಪರ್ಕ ರಸ್ತೆಯ ಅರ್ಧ ಭಾಗ ಇನ್ನೂ ಡಾಮರೀಕರಣಗೊಳ್ಳದಿರುವುದರಿಂದ ವಾಹನ ಸಂಚಾರದ ಜತೆ ನಡೆದು ಸಂಚರಿಸುವುದೂ ಕಷ್ಟಕರವಾಗಿದ್ದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ನಂದಳಿಕೆ ಗೋಳಿಕಟ್ಟೆಯಿಂದ ಜಂತ್ರವನ್ನು ಸಂಪರ್ಕ ಪಡೆದು ಮುಂದೆ ಶಿರ್ವ ಹಾಗೂ ಉಡುಪಿ ಸಾಗುವ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಈ ಕೂಡು ರಸ್ತೆ ಹಲವು ವರ್ಷಗಳಿಂದಲೂ ಡಾಮರು ಕಾಣದೆ ತೀರ ಹದಗೆಟ್ಟಿದೆ. ನಂದಳಿಕೆ ಪಂಚಾಯತ್ ವ್ಯಾಪ್ತಿಗೆ ಬರುವ ಗೋಳಿಕಟ್ಟೆಯಿಂದ ಸುಮಾರು 500 ಮೀ. ಉದ್ದದ ರಸ್ತೆಗೆ ಡಾಮರೀಕರಣ ಮಾಡಲಾಗಿದ್ದು ಆ ಬಳಿಕ ಬೆಳ್ಮಣ್ ಗ್ರಾ.ಪಂ. ವ್ಯಾಪ್ತಿಯಲ್ಲಿನ 250ರಿಂದ 300 ಮೀ. ರಸ್ತೆ ಈಗಲೂ ಡಾಮರಿಲ್ಲದೆ ಬರೀ ಮಣ್ಣಿನ ರಸ್ತೆಯಂತಾಗಿದೆ. ಮಳೆ ನೀರು ರಸ್ತೆಯಲ್ಲೇ ಹರಿಯು ವುದರಿಂದ ರಸ್ತೆ ಮಧ್ಯದಲ್ಲೇ ಚರಂಡಿ ನಿರ್ಮಾಣ ಗೊಂಡಿದೆ.
ಉಡುಪಿಗೆ ಹತ್ತಿರದ ರಸ್ತೆ
ನಂದಳಿಕೆಯಿಂದ ಶಿರ್ವ, ಜಂತ್ರ, ಕಟಪಾಡಿ, ಉಡುಪಿ ಕಡೆಯತ್ತ ಪ್ರಯಾಣ ಬೆಳೆಸಲು ಇದು ಹತ್ತಿರದ ರಸ್ತೆ ಯಾಗಿದ್ದು, ಬಹುತೇಕ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ. ಆದರೆ ಈ 300 ಮೀ. ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ವಾಹನ ಸವಾರರು ಸಂಕಟ ಅನುಭವಿಸುವಂತಾಗಿದೆ.
ಈ ಭಾಗದಲ್ಲಿ ಯಾವುದೇ ಬಸ್ಸು ಸೌಕರ್ಯವಿಲ್ಲದ ಪರಿಣಾಮ ಗ್ರಾಮಸ್ಥರು ಹೆಚ್ಚಾಗಿ ರಿಕ್ಷಾ, ಕಾರು, ಹಾಗೂ ಬೈಕ್ಗಳಂತಹ ಸಣ್ಣ ಪುಟ್ಟ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಆದರೆ ಬಾಡಿಗೆ ವಾಹನಗಳು ಕೂಡ ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದು ಬೈಕ್ ಸವಾರರಂತು ನಿತ್ಯ ಇಲ್ಲಿ ಬಿದ್ದು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.
ಇನ್ನಾದರೂ ಸಮಬಂಧ ಪಟ್ಟವರು ಶೀಘ್ರ ರಸ್ತೆ ದುರಸ್ತಿ ಕಾಮಗಾರಿಗೆ ಮುಂದಾಗುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಪರ್ಯಾಯ ವ್ಯವಸ್ಥೆ
ರಸ್ತೆಯ ಸ್ವಲ್ಪ ಭಾಗ ಪಟ್ಟಾ ಜಾಗದಲ್ಲಿ ಬರುತ್ತದೆ. ಅದು ಪಂಚಾಯತ್ಗೆ ಹಸ್ತಾಂತರ ಆಗಿಲ್ಲ. ಹೀಗಾಗಿ ವಿಳಂಬವಾಗಿದೆ. ತಕ್ಕ ಮಟ್ಟಿಗೆ ಕೂಡಲೇ ಪರ್ಯಾಯ ವ್ಯವಸ್ಥೆಯನ್ನು ಮಾಡುವಲ್ಲಿ ಕ್ರಮ ಕೈಗೊಳ್ಳುತ್ತೇವೆ.
-ಪ್ರಕಾಶ್, ಬೆಳ್ಮಣ್ ಪಿಡಿಒ
ಸಂಚಾರಕ್ಕೆ ಅಯೋಗ್ಯ
ಈ ರಸ್ತೆಯು ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಎರಡೂ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಬರುವುದರಿಂದ ಅರ್ಧ ಮಾತ್ರ ಡಾಮರೀಕರಣಗೊಂಡಿದೆ. ಉಳಿದ ರಸ್ತೆ ಕಚ್ಚಾ ರಸ್ತೆಯಂತಾಗಿದೆ.
– ನಿತ್ಯಾನಂದ ಅಮೀನ್, ಗ್ರಾಮಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ