ಅದಮಾರು ಮಠದ ಒಳಾಂಗಣದಲ್ಲಿ ಮಳೆ ನೀರ ಕೊಯ್ಲು


Team Udayavani, Dec 10, 2019, 5:07 AM IST

ed-41

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮುಂದಿನ ಬಾರಿ ಪರ್ಯಾಯ ಪೂಜೆಯನ್ನು ನಿರ್ವಹಿಸಲಿರುವ ಅದಮಾರು ಮಠದ ಸ್ವಾಮೀಜಿಯವರು ತಮ್ಮ ಮಠದಲ್ಲಿ ಮಳೆ ನೀರು ಕೊಯ್ಲು ನಡೆಸಲು ಬೇಕಾದ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.

ಮಠದ ಗರ್ಭಗುಡಿ ಸುತ್ತಲೂ ಇರುವ ಪೌಳಿಯ ನಡುವೆ ನಾಲ್ಕೂ ಕಡೆಗಳಿಂದ ಮಾಡಿನ ನೀರು ಕೆಳಗೆ ಬೀಳುವ ಅಂಗಣವಿದೆ. ಇದಕ್ಕೆ ಈ ಹಿಂದೆ ಎಲ್ಲ ಕಡೆ ಇರುವಂತೆ ಸಿಮೆಂಟ್‌ ಹಾಕಿದ ಕಾರಣ ನೀರು ಇಂಗದೆ ಹೊರಗೆ ಹೋಗುತ್ತಿತ್ತು. ಈಗ ಈ ಸಿಮೆಂಟ್‌ ನೆಲವನ್ನು ತೆಗೆದು ಎರಡೂವರೆ ಅಡಿ ಆಳದಲ್ಲಿ ಹೊಯಿಗೆ, ಜಲ್ಲಿಯನ್ನು ಹಾಕಿ, ಅದರ ಮೇಲೆ ಸುಮಾರು ಎರಡು ಇಂಚಿನ ಮೂರು ರಂಧ್ರಗಳಿರುವ ಇಟ್ಟಿಗೆಗಳನ್ನು ಕೂರಿಸಲಾಗುತ್ತಿದೆ.

ಆಳದಲ್ಲಿ ಅರ್ಧ ಅಡಿ ಮರಳು ಹಾಕಿ ಅದರ ಮೇಲೆ ಒಂದು ಅಡಿ ಜಲ್ಲಿಯನ್ನು ಹಾಕಿದ್ದಾರೆ. ಮರಳಿನೊಂದಿಗೆ ಶೇ.2ರಷ್ಟು ಸುಣ್ಣವನ್ನು ಬೆರೆಸಲಾಗಿದೆ. ಜಲ್ಲಿಯ ಮೇಲೆ ರಂಧ್ರವಿರುವ ಇಟ್ಟಿಗೆಗಳನ್ನು ಜೋಡಿಸುತ್ತಾರೆ. ಮಳೆಗಾಲದಲ್ಲಿ ನೀರು ಇಟ್ಟಿಗೆ ಮೇಲೆ ಬಿದ್ದು ಅದು ಭೂಮಿಯಲ್ಲಿ ಇಂಗುತ್ತದೆ. ಒಟ್ಟು ಸುಮಾರು 800 ಚದರಡಿ ಪ್ರದೇಶದಲ್ಲಿ ನೀರು ಇಂಗಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಮನೆಮನೆಗಳಲ್ಲೂ ಪ್ರಯತ್ನ ಅಗತ್ಯ
ಎಲ್ಲರ ಮನೆಗಳ ಮುಂದಿನ/ಹಿಂದಿನ ಅಂಗಣ ಹಿಂದೆ ಮಣ್ಣಿನಿಂದ ಕೂಡಿರುತ್ತಿತ್ತು. ಒಂದೆರಡು ದಶಕಗಳ ಹಿಂದೆ ನೀರನ್ನು ಇಂಗಿಸುವ, ಪರಿಸರಪೂರಕ ಮಣ್ಣಿನ ಅಂಗಣ ಅಮಾನ್ಯವಾಗಿ ನೀರನ್ನು ಇಂಗಿಸದ, ಪರಿಸರನಾಶಕವಾದ ಸಿಮೆಂಟ್‌ ಅಂಗಣ ಮಾನ್ಯವಾಯಿತು. ಇತ್ತೀಚೆಗೆ ನೀರಿನ ಕೊರತೆ ಎದುರಾದಾಗ ಪರಿಸರಪೂರಕ ಮಣ್ಣಿನ ಅಂಗಣವನ್ನು ಅಮಾನ್ಯಗೊಳಿಸಿದ್ದು ತಪ್ಪು ಎಂಬ ಭಾವನೆ ಕ್ರಮೇಣ ತಿಳಿಯುತ್ತಿದೆ. ಹೀಗಾಗಿ ಮತ್ತೆ ಮಣ್ಣಿನ ಅಂಗಣಕ್ಕೆ ಮಾನ್ಯತೆ ಬರುತ್ತಿದೆ. ಈಗಿನಿಂದ ಮುಂದಿನ ಬೇಸಗೆಯೊಳಗೆ ತಮ್ಮ ತಮ್ಮ ಮನೆ ಪರಿಸರಕ್ಕೆ ಸರಿಹೊಂದುವ ಮಳೆ ನೀರು ಕೊಯ್ಲು ಕಾಮಗಾರಿಯನ್ನು ನಡೆಸಿದರೆ ಮುಂದಿನ ಮಳೆಗಾಲದ ನೀರಿನ ಕೊಯ್ಲು ಮಾಡಿ ಅದರ ಮುಂದಿನ ಬೇಸಗೆಯ ಪರದಾಟವನ್ನು ತಪ್ಪಿಸಬಹುದು.

ಈ ಹಿಂದೆ ಮಾಡಿನ ಮೂಲಕ ಬಂದ ಮಳೆ ನೀರು ಇಂಗದೆ ನೇರವಾಗಿ ತೋಡು ಸೇರುತ್ತಿತ್ತು. ಮಠದ ಗರ್ಭಗುಡಿ ಹೊರಗಿನ ಈ ಕಾಮಗಾರಿ ನಡೆಯುವ ಸುತ್ತಿನಲ್ಲಿಯೇ ಒಂದು ಬಾವಿ ಇದೆ. ಇದಲ್ಲದೆ ಇನ್ನೆರಡು ಬಾವಿಗಳು ಮಠದ ಆವರಣದಲ್ಲಿ ಇವೆ. ಮಳೆ ನೀರು ಇಂಗಿ ಯಾವುದಾದರೂ ಬಾವಿಗೆ ಹೋಗು ವಂತಾಗಿ ಜಲಸಮೃದ್ಧಿಯಾಗಲಿ ಎಂಬ ಮುಂದಾ ಲೋಚನೆಯಿಂದ ಈ ಕಾಮಗಾರಿ ನಡೆಸಲಾಗುತ್ತಿದೆ.
– ರಾಘವೇಂದ್ರ ರಾವ್‌, ವ್ಯವಸ್ಥಾಪಕರು, ಅದಮಾರು ಮಠ, ಉಡುಪಿ

ಅದಮಾರು ಮಠದ ಗರ್ಭಗುಡಿ ಹೊರಗಿನ ಪ್ರದೇಶದಲ್ಲಿ ಮೊದಲು ಮರಳು ಹಾಕಿ ಅದರ ಮೇಲೆ ಜಲ್ಲಿಯನ್ನು ಹಾಕಲಾಗಿದೆ. ಇನ್ನು ಮುಂದೆ ರಂಧ್ರವಿರುವ ಇಟ್ಟಿಗೆಗಳನ್ನು ಜೋಡಿಸಲಾಗುತ್ತಿದೆ.

ಟಾಪ್ ನ್ಯೂಸ್

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

“ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ’ ಅಭಿಯಾನ

“ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ’ ಅಭಿಯಾನ

BJP FLAG

400 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು ಕಷ್ಟ: ಎಬಿಪಿ ಸಮೀಕ್ಷೆ ಭವಿಷ್ಯ

IND VS PAK

ಸಮಸ್ಯೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳಿ: ಭಾರತ, ಪಾಕ್‌ಗೆ ಅಮೆರಿಕ ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

3-hegde

LS Polls: ಮಾಡಿದ ಕೆಲಸ ನೋಡಿ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ

Udupi-Chikkamagaluru ಲೋಕಸಭಾ ಕ್ಷೇತ್ರ: ಹಳೇ ಹುಲಿಗಳ ನಡುವೆ ಹೊಸ ಯುದ್ಧ

Udupi-Chikkamagaluru ಲೋಕಸಭಾ ಕ್ಷೇತ್ರ: ಹಳೇ ಹುಲಿಗಳ ನಡುವೆ ಹೊಸ ಯುದ್ಧ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

1-eqwewq

Sunil Narine ನಿವೃತ್ತಿ ತೊರೆದು ಟಿ20 ವಿಶ್ವಕಪ್‌ ಆಡಲಿ: ಪೊವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.