ಸಾಧ‌ಕ ಕೃಷಿಕ ಕೆದೂರಿನ ರಾಮಕೃಷ್ಣ ಬಾಯಿರಿ

ಹೈನುಗಾರಿಕೆ ಎಟಿಎಂ ಇದ್ದಂತೆ, ಮಿಶ್ರಕೃಷಿಯಿಂದ ಮಾಸಿಕ ವೇತನ

Team Udayavani, Dec 20, 2019, 6:11 AM IST

KUNDAPURA-KRUSHI-1

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರ ಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕುಂದಾಪುರ: ಹೈನುಗಾರಿಕೆ ಒಂಥರಾ ಎಟಿಎಂ ಇದ್ದಂತೆ. ಪ್ರತಿದಿನ ಅಥವಾ 10 ದಿನಗಳಿ ಗೊಮ್ಮೆ ಹಣ ದೊರೆಯುತ್ತಿರುತ್ತದೆ. ಮಿಶ್ರಕೃಷಿ ಎಂದರೆ ಮಾಸಿಕ ವೇತನ ಪಡೆದಂತೆ. ಪ್ರತಿ ತಿಂಗಳೂ ಒಂದು ಮೊತ್ತ ದೊರೆಯುತ್ತದೆ. ಅಡಿಕೆ, ತೆಂಗು ಇತ್ಯಾದಿಗಳು ಬೋನಸ್‌ ಇದ್ದಂತೆ. ವರ್ಷದಲ್ಲಿ ದೊಡ್ಡಮೊತ್ತ ಕಣ್ಣಿಗೆ ಕಾಣಿಸುತ್ತದೆ. 24 ಗಂಟೆಗಳಲ್ಲಿ 15 ಗಂಟೆ ದುಡಿಯಬೇಕಾಗುತ್ತದೆ. ಸಂಬಳಕ್ಕಾಗಿ ದುಡಿದರೆ ಅದರ ಲಾಭ ಸಂಸ್ಥೆಗೆ ಹೋಗುತ್ತದೆ. ಆದರೆ ಇಲ್ಲಿ ಲಾಭ, ನಷ್ಟ ನಮಗೇ. ನಷ್ಟ ಎನ್ನುವುದು ಬರುವುದಿಲ್ಲ. ಲಾಭ ಕಡಿಮೆ ಆಗಬಹುದು ಅಷ್ಟೇ. ಹಾಗಾಗಿ ನಾನು ಕೃಷಿ ಮಾಡು ಖುಷಿ ಪಡು ಎಂದು ನಂಬುತ್ತೇನೆ. ನನ್ನ ವಾಹನದಲ್ಲೂ ಇದನ್ನೇ ಬರೆಸಿದ್ದೇನೆ ಎನ್ನುತ್ತಾರೆ ತೆಕ್ಕಟ್ಟೆ ಸಮೀಪದ ಕೆದೂರಿನ ರಾಮಕೃಷ್ಣ ಬಾಯಿರಿ. ಇವರು ಕೃಷಿ ಇಲಾಖೆಯ ಜಿಲ್ಲಾ, ತಾಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಸುಗಳಿಗೆ ಸಂಗೀತ
ಹಟ್ಟಿಯಲ್ಲಿ ವಿವಿಧ ತಳಿಯ 15ರಷ್ಟು ರಾಸುಗಳಿವೆ. ಗೊಬ್ಬರ ಕೃಷಿಗೆ ಬೇಕು. ಗಂಜಲ ತೋಟಕ್ಕೆ ಬೇಕು. ಗೋಮೂತ್ರ ಔಷಧವಾಗಿ ಸಿಂಪಡಿಸಬೇಕು. ಇಷ್ಟಿರಲು ಇನ್ನೇನು ಬೇಕು ಎನ್ನುವ ಬಾಯಿರಿ ಆವರು ದಿನಕ್ಕೆ 130 ಲೀ. ಹಾಲು ಪಡೆಯುತ್ತಾರೆ. ಹಾಲು ಕರೆಯಲು ಯಂತ್ರ, ಹಸುಗಳಿಗೆ ಸೆಖೆಗೆ ನೀರ ಹನಿ ಬೀಳಲು ವ್ಯವಸ್ಥೆ, ತಂಗಾಳಿಗೆ ಫ್ಯಾನ್‌. ಹದವಾಗಿ ಕೇಳಲು ಹಿತವಾದ ಸಂಗೀತ.

ತೆಂಗಿನ ಮರಕ್ಕೆ ಶಬ್ದ
ತೆಂಗಿನಮರ ಶಬ್ದಪ್ರಿಯ!. ಇದು ಬಾಯಿರಿ ಅವರ ಅನುಭವದ ಮಾತು. ತೆಂಗಿನಮರಕ್ಕೆ ಶಬ್ದ ಎಂದರೆ ಬಹಳ ಪ್ರೀತಿ. ಹಾಗಾಗಿ ಪೇಟೆಬದಿಯ, ದೇವಸ್ಥಾನಗಳ ಬದಿಯ ತೆಂಗಿನಮರಗಳಲ್ಲಿ ಫ‌ಸಲು ಜಾಸ್ತಿ. ತೆಂಗಿನಮರಕ್ಕೆ ಶಬ್ದ ಕೇಳಿಸಿ ಪ್ರಯೋಗಿಸಿ ನೋಡಿ ಎನ್ನುತ್ತಾರೆ.

ಬಾಳೆಯ ಬಾಳ್ವೆ
2 ಎಕರೆಯಲ್ಲಿ 1,600 ಬಾಳೆ ಬೆಳೆದಿದ್ದಾರೆ. ಗೊನೆ ಮಾಡದೇ ಎಲೆ ಮಾರಾಟ ಮಾಡಿಯೇ ಲಾಭ ಗಳಿಸಬಹುದು ಎಂದು ಲೆಕ್ಕ ಕೊಡುತ್ತಾರೆ ಬಾಯಿರಿ ಅವರು. ಗೊನೆಯಾದರೆ ಒಂದು ಬುಡಕ್ಕೆ 400 ರೂ.ಗಳ ಗೊನೆ ದೊರೆಯಬಹುದು. ಎಲೆಯಾದರೆ 1 ಗಿಡದಲ್ಲಿ 500ರಿಂದ 600 ಎಲೆ ಕಡಿಯಬಹುದು. ಒಂದು ಎಲೆಗೆ 2 ರೂ. ನಿಶ್ಚಿತ. ಗೊನೆ ಬಂದರೆ ಬುಡದಲ್ಲಿ ಬೆಳೆದ ಪುಟ್ಟಪುಟ್ಟ ಗಿಡಗಳನ್ನು ಹೊಸಕಿಹಾಕಬೇಕು. ಬಾಳೆಎಲೆಗಾದರೆ ಎಷ್ಟು ಬುಡಗಿಡ ಬಂದರೂ ಲಾಭವೇ! ತಿಂಗಳಿಗೆ ಕನಿಷ್ಟ 8-10 ಸಾವಿರ ಬಾಳೆಎಲೆ ನೀಡುತ್ತಾರೆ. ಪೂರ್ಣಪ್ರಮಾಣದಲ್ಲಿ ಸಾವಯವ.

ಮಿಶ್ರಕೃಷಿ
2 ಎಕರೆಯಲ್ಲಿ ಭತ್ತ ಬೆಳೆದಿದ್ದು ಕಳೆದ ವರ್ಷ 30 ಕ್ವಿಂ.ಈವರ್ಷ 26 ಕ್ವಿಂ. ದೊರೆತಿದೆ. ಮಳೆ ಪರಿಣಾಮ ಕಟಾವು ಸಂದರ್ಭ ಉದುರಿಹೋಗಿದೆ. ಈಗ ಜೋಳ, ಉದ್ದು ಬಿತ್ತಿದ್ದಾರೆ. ಜೋಳ ಕರಾವಳಿಯಲ್ಲಿ ವಿರಳ. ಆದರೆ ಇವರು ಹಸುಗಳಿಗಾಗಿ ಜೋಳ ಬೆಳೆಯುತ್ತಾರೆ. ತೊಂಡೆ, ಬದನೆ, ಸೀಮೆ ಬದನೆ, ಮೆಣಸು, ಹರಿವೆ, ಜೇನು, ಅನನಾಸು, ಪಪ್ಪಾಯಿ, ಗೇರು, ಮಾವು, ಹಲಸು, ಪೇರಳೆ ಹೀಗೆ ತರಹೇವಾರಿ ಬೆಳೆ ಇವರ ಕೃಷಿ ಜಮೀನಿನಲ್ಲಿ ನಳನಳಿಸುತ್ತಿದೆ. 150 ಕೆಜಿಯಷ್ಟು ಪೇರಳೆ ದೊರೆಯುತ್ತದೆ. ಇದೆಲ್ಲವೂ ಅಳಿಲು, ಹಕ್ಕಿಗಳಿಗೇ ಮೀಸಲು.

1,100 ಬುಡ ಮೋಹಿತ್‌ನಗರ ಅಡಿಕೆಯಿದ್ದು, 600 ಬುಡ ಸಿದ್ದಾಪುರ ಅಡಿಕೆಯಿದೆ. ಮೋಹಿತ್‌ನಗರ ಬೆಳೆಜಾಸ್ತಿ, ಬಾಳಿಕೆ ಕಡಿಮೆ. ಸಿದ್ದಾಪುರದ್ದು ಬಾಳಿಕೆ ಜಾಸ್ತಿ, ಬೆಳೆಕಡಿಮೆ. 120 ತೆಂಗಿನಮರಗಳಿದ್ದು 8-10 ಸಾವಿರ ತೆಂಗಿನಕಾಯಿ ದೊರೆಯುತ್ತದೆ.

ಕೃಷಿ ಉಸಿರಾಗಿದೆ
ಕೃಷಿಯ ಖುಷಿ ಬೇರೆಲ್ಲೂ ದೊರೆಯದು. ನನ್ನ ತೋಟ ನೋಡಲು ಆಗಮಿಸುವ ಎಲ್ಲರಿಗೂ ನಾನು ಇದೇ ಮಾತು ಹೇಳುತ್ತೇನೆ. ಒಂದು ವರ್ಷ ಕಡಿಮೆ ಫ‌ಸಲು ಬಂದರೂ ಮುಂದಿನ ವರ್ಷ ಭರ್ಜರಿ ದೊರೆಯಬಹುದು. ದೇಶ ಸಮೃದ್ಧವಾಗಲು ಕೃಷಿ ಅನಿವಾರ್ಯ. ಪ್ರತಿಯೊಬ್ಬರಿಗೂ ಆಹಾರ ಬೇಕೇಬೇಕು. ಎಲ್ಲ ಕೃಷಿಗಳೂ ಪ್ರಕೃತಿ ಅವಲಂಬಿತ. ಮಳೆ ಹೆಚ್ಚಾದರೆ ಕೆಲವಕ್ಕೆ ಅನುಕೂಲ, ಕೆಲವಕ್ಕೆ ಅನನುಕೂಲ. ಗಿಡಮರಗಳೆಲ್ಲ ನಮ್ಮ ಮನೆ ಸದಸ್ಯರಿದ್ದಂತೆ. ಪ್ರತಿದಿನ ಅವುಗಳನ್ನು ಮುಟ್ಟಿ ತಟ್ಟಿ ಮಾತನಾಡಿಸದಿದ್ದರೆ ಏನೋ ಕಳೆದುಕೊಂಡಂತಾಗುತ್ತದೆ. ಎಲ್‌ಐಸಿ ಏಜೆಂಟ್‌ ಆಗಿದ್ದವ ಈಗ ಪೂರ್ಣಪ್ರಮಾಣದ ಕೃಷಿಕನಾಗಿ ಖುಷಿ ಅನುಭವಿಸುತ್ತಿದ್ದೇನೆ. ಸಾಫ್ಟ್ ವೇರ್‌ ಎಂಜಿನಿಯರ್‌ ಮಕ್ಕಳಿಗೂ ಇನ್ನು ಕೆಲವೇ ವರ್ಷಗಳಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದ್ದು ಅವರೂ ಒಪ್ಪಿದ್ದಾರೆ. 20 ವರ್ಷದ ಹಿಂದೆ ಕೃಷಿ ಜಮೀನು ಖರೀದಿಸಿ 13 ವರ್ಷಗಳಿಂದ ಸತತವಾಗಿ ಕೃಷಿ ಯಲ್ಲಿ ತೊಡಗಿಸಿಕೊಂಡಿದ್ದೇನೆ.
-ರಾಮ ಕೃಷ್ಣ ಬಾಯಿರಿ
ಕೆದೂರು

ಹೆಸರು: ರಾಮಕೃಷ್ಣ ಬಾಯಿರಿ, ಕೆದೂರು
ಏನೇನು ಕೃಷಿ: ಬಾಳೆ, ಅಡಿಕೆ, ತೆಂಗು, ಭತ್ತ
ಎಷ್ಟು ವರ್ಷ:13
ಕೃಷಿ ಪ್ರದೇಶ:10 ಎಕರೆ
ಸಂಪರ್ಕ:7019942217

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.