ರವಿ ಕಟಪಾಡಿ ವೇಷ: 5.12 ಲ.ರೂ. ಸಂಗ್ರಹ
Team Udayavani, Sep 19, 2017, 7:25 AM IST
ಕಾಪು: ಅನಾರೋಗ್ಯದಿಂದ ಬಳಲುತ್ತಿರುವ ಅಶಕ್ತ ಕುಟುಂಬದ ಮಕ್ಕಳ ನೋವಿಗೆ ಸ್ಪಂದಿಸುವ ಉದ್ದೇಶ ದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭ ರವಿ ಕೆ.ಮತ್ತು ಫ್ರೆಂಡ್ಸ್ ಕಟಪಾಡಿ ತಂಡವು ವೇಷ ಧರಿಸಿ ಸಂಗ್ರಹಿಸಿದ ಹಣವನ್ನು ಸೆ. 19 ರಂದು ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಉಪನ್ಯಾಸಕ ದಯಾನಂದ್ ಹೇಳಿದರು.ಕಾಪು ಪ್ರಸ್ ಕ್ಲಬ್ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ರವಿ ಅವರ ಈ ಬಾರಿಯ ವೇಷ 5.12 ಲಕ್ಷ ರೂ. ದೇಣಿಗೆ ಸಂಗ್ರಹಿಸಿದೆ. ಇಂಗ್ಲಿಷ್ ಸಿನೆಮಾದ ಗ್ರಾಂಫರ್ ವೇಷವನ್ನು ಧರಿಸಿದ್ದ ರವಿ ಕಟಪಾಡಿ ಮತ್ತು ಅವರ 80 ಮಂದಿ ಸ್ನೇಹಿತರನ್ನೊಳಗೊಂಡ ತಂಡ ಎರಡು ದಿನಗಳ ಕಾಲ ಕಟಪಾಡಿ, ಉಡುಪಿ, ಮಲ್ಪೆ ಸೇರಿದಂತೆ ವಿವಿಧೆಡೆ ತೆರಳಿದೆ.
ತಂಡದ ಮುಖ್ಯಸ್ಥ ರವಿ ಕಟಪಾಡಿ ಮಾತನಾಡಿ, ಸಮಾಜದಲ್ಲಿರುವ ಅಶಕ್ತರ ನೋವಿಗೆ ಧ್ವನಿಯಾಗುವ ಸಂಕಲ್ಪ ದೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ವೇಷ ಧರಿಸಿ ಹಣ ಸಂಗ್ರಹಿಸಿ ಅಶಕ್ತರಿಗೆ ನೀಡುತ್ತಿದ್ದೇವೆ. ಇದು ಸಂತೃಪ್ತಿ ತಂದಿದ್ದು, ಮುಂದುವರಿಸುವ ಇಚ್ಛೆ ಇದೆ ಎಂದರು.ರವಿ ಮತ್ತು ಫ್ರೆಂಡ್ಸ್ ತಂಡದ ಪ್ರಮುಖರಾದ ಸಂತೋಷ್, ರವಿ ಕೋಟ್ಯಾನ್, ಅರುಣ್, ಚರಣ್,ಸುಧೀಶ್ ಮೊದಲಾದವರು ಉಪಸ್ಥಿತರಿದ್ದರು.
ಐವರಿಗೆ ವಿತರಣೆ
ರವಿ ಫ್ರೆಂಡ್ಸ್ ಸಂಗ್ರಹಿಸಿರುವ 5.12 ಲಕ್ಷ ರೂ. ಹಣವನ್ನು ಮೂಡಬಿದಿರೆ ದರೆಗುಡ್ಡೆಯ ಲಾವಣ್ಯ, ಶಿವಮೊಗ್ಗದ ಮೆಹಕ್ಜೀ, ದೆಂದೂರುಕಟ್ಟೆಯ ಒಂದೂ ವರೆ ತಿಂಗಳ ಮಗು, ಬನ್ನಂಜೆ ಮತ್ತು ಕುಂದಾಪುರದ ಮಕ್ಕಳಿಗೆ ಹಂಚಲು ತೀರ್ಮಾನಿಸಲಾಗಿದ್ದು, ಅವರ ಆವಶ್ಯಕತೆ ಮತ್ತು ಖರ್ಚು ವೆಚ್ಚಗಳನ್ನು ಅಂದಾ ಜಿಸಿ ಹಂಚಲಾಗುವುದು ಎಂದು ರವಿ ಕಟಪಾಡಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ