ಬೈಲೂರು ಮದಗ ಸ್ಥಳೀಯರಿಂದ ಪುನಶ್ಚೇತನ : 10 ಅಡಿ ನೀರು ಸಂಗ್ರಹ


Team Udayavani, Sep 24, 2019, 5:13 AM IST

IMG-20190923-WA0014

ಉಡುಪಿ: ಈ ಬಾರಿ ಬೇಸಗೆಯಲ್ಲಿ ನೀರಿನ ಸಮಸ್ಯೆಗೆ ಇಡೀ ನಗರವೇ ತತ್ತರಿಸಿ ಹೋಗಿದೆ. ಅನೇಕ ವರ್ಷದಿಂದ ಹೂಳು ತೆಗೆಯದೆ ಬತ್ತಿ ಹೋದ ನೀರಿನ ಮೂಲಗಳನ್ನು ಹುಡುಕಿ ತೆಗೆದು ಅಭಿವೃದ್ಧಿ ಮಾಡಲಾಗುತ್ತಿದೆ. ಅಂತಹ ಪ್ರಯತ್ನದ ಫ‌ಲವಾಗಿ ಬೈಲೂರು ಎನ್‌ಜಿಒ ಕಾಲೋನಿಯಲ್ಲಿ ಬತ್ತಿ ಹೋದ ಮದಗದಲ್ಲಿ ಇದೀಗ 10 ಅಡಿಯಷ್ಟು ನೀರು ಸಂಗ್ರಹವಾಗಿದೆ.

5 ದಶಕಗಳ ಇತಿಹಾಸ
ಬೈಲೂರು ಮದಗಕ್ಕೆ ಸುಮಾರು
5 ದಶಕಗಳ ಇತಿಹಾಸವಿದೆ. ಉಡುಪಿಯ ಹಿರಿಯ ವಕೀಲರಾಗಿದ್ದ ದಿ| ಬೈಲೂರು ವಾಸುದೇವ ರಾವ್‌ ಅವರ ಪುತ್ರ ರಮೇಶ್‌ ರಾವ್‌ ಅವರ ಒಡೆತನದ ಜಮೀನನ್ನು ಈ ಮದಗಕ್ಕಾಗಿ ಬಿಟ್ಟುಕೊಟ್ಟಿದ್ದಾರೆ. ಬೈಲೂರು ಎನ್‌ಜಿಒ ಕಾಲೊನಿ ಹಿಂಭಾಗದಲ್ಲಿ ಮದಗವಿದೆ. ಹಿಂದೆ ರೈತರು ನಾಟಿ ಮಾಡಿದ ಬಳಿಕ ದಣಿದ ಕೋಣಗಳಿಗೆ ವಿಶ್ರಾಂತಿಗಾಗಿ ಬೈಲೂರು ಮದಗಕ್ಕೆ ಬಿಡಲಾಗುತ್ತಿತ್ತು.

ಮದಗ ಕಸದ ಹೊಂಡವಾಗಿತ್ತು
ವರ್ಷ ಕಳೆದಂತೆ ಮದಗದಲ್ಲಿ ನೀರು ಮಾಯವಾಗಿ ಬಿದಿರು ಮುಳ್ಳು ಬೆಳೆದು, ಮಣ್ಣು ಹೂಳು ತುಂಬಿ ಮುಚ್ಚಿ ಹೋಗಿತ್ತು. ಹೊಂಡದಲ್ಲಿ ಕಸ, ತ್ಯಾಜ್ಯ ಇತ್ಯಾದಿಗಳನ್ನು ಎಸೆಯುತ್ತಿರುವುದರಿಂದ ನೀರಿನ ಮೂಲವಾದ ಮದಗ ಕಸದ ಕೊಂಪೆಯಾಗಿ ಮಾರ್ಪಾಡಾಗಿತ್ತು. ಎರಡು ವರ್ಷಗಳಿಗೊಮ್ಮೆ ಈ ಕಸದ ರಾಶಿ, ಒಣಗಿದ ಬಿದಿರಿಗೆ ಕಿಡಿಗೇಡಿಗಳು ಬೆಂಕಿ ಹಾಕುವುದರಿಂದ ಬೆಂಕಿ ಹೊತ್ತಿಕೊಳ್ಳುತ್ತಿತ್ತು.

ನೀರಿನಿಂದ ತುಂಬಿದ ಮದಗ
ಮಳೆಯ ನೀರು ನೇರವಾಗಿ ಬಂದು ಮದಗವನ್ನು ಸೇರುತ್ತಿರುವುದರಿಂದ ಮದಗದಲ್ಲಿ 10 ಅಡಿಗಳವರೆಗೆ ನೀರು ಸಂಗ್ರಹವಾಗಿದೆ. ಇದರಿಂದಾಗಿ ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗದು ಎನ್ನುವ ಆತ್ಮವಿಶ್ವಾಸ ಸ್ಥಳೀಯರದ್ದು.ನಗರದಲ್ಲಿ ಇನ್ನು ಸಾಕಷ್ಟು ಮದಗಗಳಿವೆ. ಸ್ಥಳೀಯರು ಅದನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು. ಆ ಮೂಲಕ ನೀರಿನ ಮೂಲವನ್ನು ಸಂರಕ್ಷಿಸಬೇಕಾಗಿದೆ.

1 ಲ.ರೂ. ವೆಚ್ಚದಲ್ಲಿ ಪುನಶ್ಚೇತನ
ಮಾಲೀಕರ ಸಹಿತ ಸ್ಥಳೀಯ ಉತ್ಸಾಹಿಗಳು ಈ ಮದಗವನ್ನು ಜೂನ್‌ ತಿಂಗಳಿನಲ್ಲಿ ಪುನಶ್ಚೇತನಗೊಳಿಸಿದ್ದಾರೆ. ಜೂನ್‌ ತಿಂಗಳಿನಲ್ಲಿ ಸುಮಾರು 10-12 ದಿನಗಳ ಕಾಲ ಜೆಸಿಬಿ, ಟಿಪ್ಪರ್‌ ಲಾರಿ ಮೂಲಕ ಸ್ಥಳವನ್ನು ಸ್ವತ್ಛಗೊಳಿಸಿ 12 ಅಡಿ ಆಳದ ಮದಗವನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸುಮಾರು 1.ಲ. ರೂ. ವ್ಯಯಿಸಲಾಗಿದೆ. ಸ್ಥಳೀಯರು ಮತ್ತು ಇಲ್ಲಿನ ಅನಿವಾಸಿ ಭಾರತೀಯರು ದೇಣಿಗೆ ನೀಡಿದ್ದಾರೆ. ಬೈಲೂರು ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್‌ ಶೆಟ್ಟಿ, ದುರ್ಗಾ ಪ್ರಸಾದ್‌, ಸತೀಶ್‌ ರಾವ್‌ ಕತಾರ್‌, ಶ್ರೀನಿವಾಸ್‌ ಕೆ.ಸ್‌. ಮುಂಚೂಣಿಯಲ್ಲಿ ನಿಂತು ಮದಗ ನಿರ್ಮಿಸಿದ್ದಾರೆ ಎಂದು ಇಲ್ಲಿನ ವೆಂಕಟೇಶ ಪ್ರಭು ತಿಳಿಸಿದ್ದಾರೆ.

ಬೇಸಗೆಯಲ್ಲಿ ನೀರಿನ ಲಭ್ಯತೆ
3ದಶಕಗಳ ಹಿಂದೆ ಈ ಮದಗದಲ್ಲಿ ಬೇಸಗೆ ಕೊನೆಯವರೆಗೂ ನೀರಿನ ಲಭ್ಯತೆಯಿತ್ತು. ಸಮಯ ಕಳೆಯುತ್ತಿದ್ದಂತೆ ಮದಗ ನಿರ್ಲಕ್ಷ್ಯಕ್ಕೆ ಒಳಗಾಗಿ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಇದರಿಂದಾಗಿ ಈ ಭಾಗದ ಬಾವಿ, ಬೋರ್‌ವೆಲ್‌ ನೀರಿನ ಮಟ್ಟ ಕುಸಿದಿದೆ. ಈ ಬಾರಿ ಮದಗವನ್ನು ಅಭಿವೃದ್ಧಿ ಪಡಿಸಿರುವುದರಿಂದ ಬೇಸಗೆಯಲ್ಲಿ ಬಾವಿಗಳು ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಿದೆ.
-ಡಾ| ಕಿರಣ್‌ ಶೆಟ್ಟಿ,
ಸ್ಥಳೀಯ ನಿವಾಸಿ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.