ಧರ್ಮ ನಿರಪೇಕ್ಷತೆ ಸಂವಿಧಾನದ ಶ್ರೇಷ್ಠತೆ : ಡಾ| ಆಶಾಲತಾ ಪಿ.
Team Udayavani, Jan 19, 2019, 12:30 AM IST
ಉಡುಪಿ: ಮಾನವ ಜನಾಂಗದ ಹಕ್ಕಿಗಾಗಿ ಹೋರಾಡಿದ ಮಹಾ ಮಾನವತಾವಾದಿ ಡಾ| ಅಂಬೇಡ್ಕರ್ರವರು, ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂರವರು ನಂಬಿದಂತಹ ಸೆಕ್ಯುಲರ್ ವಿಚಾರಧಾರೆಗೆ ಅನುಗುಣವಾಗಿ ಸಂವಿಧಾನ ರಚಿಸಿದರು. ಸಮಾನತೆ ಮತ್ತು ಭಾÅತೃತ್ವದ ನೆಲೆಗಟ್ಟಿನ ಮೇಲೆ ನಿರ್ಮಿಸಲ್ಪಟ್ಟ ನಮ್ಮ ಸಂವಿಧಾನವು ವಿಶ್ವಕ್ಕೆ ಮಾದರಿ ಎಂದು ಸುರತ್ಕಲ್ ಗೋವಿಂದ ದಾಸ್ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಡಾ| ಆಶಾಲತಾ ಪಿ. ಹೇಳಿದರು.
ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆಯ ಆಶ್ರಯದಲ್ಲಿ ಶುಕ್ರವಾರ ಕಾಂಗ್ರೆಸ್ ಭವನದ ಇಂದಿರಾ ಗಾಂಧಿ ವೇದಿಕೆಯಲ್ಲಿ ಜರಗಿದ ಸಂವಿಧಾನ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಂವಿಧಾನದ ಪೂರ್ವ ಪೀಠಿಕೆ ನೆಹರೂರವರ ಚಿಂತನೆ. ಸಂವಿಧಾನದಲ್ಲಿ ಅಳವಡಿಸಲಾದ ಮೂಲಭೂತ ಹಕ್ಕುಗಳು ಅಮೇರಿಕಾದ ಸಂವಿಧಾನದಿಂದ ಪ್ರೇರೇಪಿತವಾದವು. ಪ್ರಜಾಸತ್ತಾತ್ಮಕ ಸಮಾಜವಾದ ತತ್ವಗಳು ಮೂಲಭೂತ ಹಕ್ಕುಗಳು ಎಂದಿಗೂ ಅಬಾಧಿತವಾಗಿ ಉಳಿಯುವಂತೆ ಕಾನೂನುಗಳನ್ನು ರೂಪಿಸಿ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಭಾರತ ಸಂವಿಧಾನದಲ್ಲಿ ಅಳವಡಿಸಲಾದ ವಿಚಾರಗಳು ಚಿಂತನೆಗಳು ಮೌಲಿಕವಾದುವು ಮತ್ತು ಸರ್ವಕಾಲಿಕವಾದವು ಎಂದು ಡಾ| ಆಶಾಲತಾ ಪಿ. ಹೇಳಿದರು.
ಆರ್ಟಿಕಲ್ 32 ಸಂವಿಧಾನದ ಆತ್ಮ ಎಂದು ಬಿ.ಆರ್. ಅಂಬೇಡ್ಕರ್ ಅಂದಿದ್ದರು. ಏಕೆಂದರೆ ಸಂವಿಧಾನ ಹಕ್ಕನ್ನು ಪ್ರಭುತ್ವ ಉಲ್ಲಂಘನೆ ಮಾಡಿದಾಗ ಅದನ್ನು 32ನೇ ಆರ್ಟಿಕಲ್ ನೋಡಿಕೊಳ್ಳುತ್ತದೆ. ಈ ವಿಧಿ ಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟಿಗೆ ಕೊಟ್ಟಿದೆ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರು ಡಾ| ಬಾಬು ರಾಜೇಂದ್ರ ಪ್ರಸಾದ್ ಆಗಿದ್ದರು, ಕರಡು ಸಮಿತಿ ಅಧ್ಯಕ್ಷರು ಬಿ.ಆರ್ ಅಂಬೇಡ್ಕರ್ ಆಗಿದ್ದರು. 1949ರಲ್ಲಿ ನಮಗೆ ನಾವೇ ಅರ್ಪಣೆ ಮಾಡಿಕೊಂಡ ಸಂವಿಧಾನ, ಸಂವಿಧಾನ ಸಭೆಯ ಒಂದು ಪೊ›ಡಕ್ಟ್ ಆದರೂ ಅಂಬೇಡ್ಕರ್ ಹಾಗೂ ನೆಹರೂರವರ ಚಿಂತನೆಯ ಫಲಶ್ರುತಿ ಎಂದರು.
ಸಂವಿಧಾನವನ್ನು ಭಾರತೀಯರು ಏಕೆ ಓದಬೇಕು ಎನ್ನುವ ಬಗ್ಗೆ ಹಾಗೂ ಸಂವಿಧಾನದಲ್ಲಿ ಅಳವಡಿಸಲಾದ ಕರ್ತವ್ಯಗಳು ಹಾಗೂ ಹಕ್ಕುಗಳ ಬಗ್ಗೆ ಮಾತನಾಡಿದ ಅವರು, ನಾವು ಸಂವಿಧಾನವನ್ನು ಮತ್ತೆ ಮತ್ತೆ ಓದೋಣ. ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನೋಡುಕೊಳ್ಳುವ ಅಗತ್ಯ ಇದೆ ಎಂದರು.
ಉಪನ್ಯಾಸವನ್ನು ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನೆರವೇರಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಉದ್ಯಾವರ ನಾಗೇಶ್ ಕುಮಾರ್, ಫಾ|ವಿಲಿಯಂ ಮಾರ್ಟಿಸ್, ಪೊ›| ಸಿರಿಲ್ ಮಥಾಯಸ್, ದಿನೇಶ್ ಕೋಟ್ಯಾನ್, ಡಾ| ಸುನೀತಾ ಶೆಟ್ಟಿ, ಸೂರ್ಯ ಮತ್ತಿತರರು ಉಪಸ್ಥಿತರಿದ್ದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಸ್ವಾಗತಿಸಿ ಬಿ.ಕೆ ಸೋಮನಾಥ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಸಿದರು. ವೈ.ಬಿ. ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ