ಟೋಲ್ ವಿರುದ್ಧ ಕಾರು ಸ್ಥಗಿತಗೊಳಿಸಿ ಪ್ರತಿರೋಧ
Team Udayavani, Mar 26, 2019, 6:30 AM IST
ಕೋಟ: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಕೋಟ ಜಿ.ಪಂ. ವ್ಯಾಪ್ತಿಯ ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯವರಿಗೆ ಏಕಾಏಕಿ ಟೋಲ್ ಸ್ವೀಕರಿಸುತ್ತಿರುವುದನ್ನು ಖಂಡಿಸಿ ಆ ಭಾಗದ ಸ್ಥಳೀಯರು ರವಿವಾರ ಟೋಲ್ಗೇಟ್ನಲ್ಲಿ ಕಾರು ಸ್ಥಗಿತಗೊಳಿಸಿ ಪ್ರತಿರೋಧ ವ್ಯಕ್ತಪಡಿಸಿದರು.
ಆರಂಭದಲ್ಲಿ ವಡ್ಡರ್ಸೆ ಕೊತ್ತಾಡಿಯ ಅಜಿತ್ ಶೆಟ್ಟಿ ಎನ್ನುವವರು ತಾವು ಸ್ಥಳೀಯರಾಗಿದ್ದು ಟೋಲ್ ನೀಡುವುದಿಲ್ಲ ಎಂದು ಕಾರನ್ನು ಗೇಟ್ನಲ್ಲಿ ಸ್ಥಗಿತಗೊಳಿಸಿದರು. ಆಗ ಆ ಗೇಟ್ ಬಂದ್ ಮಾಡಿ ಬೇರೆ ಗೇಟ್ನ ಮೂಲಕ ವಾಹನ ಬಿಡಲಾಯಿತು. ಅನಂತರ ಸ್ಥಳೀಯರಾದ ಸೋಮನಾಥ ಹೆಗ್ಡೆ, ರೆಹಮತ್ ಮಧುವನ ಮುಂತಾದವರು ತಮ್ಮ ಕಾರುಗಳನ್ನು ಇತರ ಎರಡು ಗೇಟ್ಗಳಲ್ಲಿ ಸ್ಥಗಿತಗೊಳಿಸಿ, ಟೋಲ್ ನಿರಾಕರಿಸಿದರು. ಆ ಸಂದರ್ಭ ಮೊದಲ ಸ್ಥಗಿತಗೊಂಡ ಗೇಟ್ನಲ್ಲಿ ಒಂದು ಗಂಟೆ ಕಾಲ ಹಾಗೂ ಇತರ ಗೇಟ್ನಲ್ಲಿ 20ನಿಮಿಷ ವಾಹನ ಸಂಚಾರ ಸ್ಥಗಿತಗೊಂಡಿತು.
ಅನಂತರ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಕಾರ್ಯದರ್ಶಿ ವಿಟuಲ ಪೂಜಾರಿ, ಅಲ್ವಿನ್ ಅಂದ್ರಾಡೆ ಸ್ಥಳಕ್ಕಾಗಮಿಸಿ, ಈ ಹಿಂದೆ ಜನಪ್ರತಿನಿಧಿಗಳ ಸಮ್ಮುಖ ನಡೆದ ಒಪ್ಪಂದದಂತೆ ಬಾಕೂìರು ಹೊರತುಪಡಿಸಿ ಕೋಟ ಜಿ.ಪಂ. ವ್ಯಾಪ್ತಿಯ ಎಲ್ಲಾ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಟೋಲ್ ನಿರ್ವಾಹಕ ಕೇಶವ ಮೂರ್ತಿ ಜತೆ ಚರ್ಚೆ ನಡೆಸಿ ಸಹಮತ ವ್ಯಕ್ತವಾದ ಹಿನ್ನಲೆಯಲ್ಲಿ ಹೋರಾಟ ಕೈಬಿಟ್ಟು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ