ಬಡವರಿಗೆ ಮರಳು: ಕುಂದಾಪುರ, ಬೈಂದೂರು ಶಾಸಕರಿಂದ ಸಭೆ
Team Udayavani, Nov 21, 2019, 5:14 AM IST
ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಡವರಿಗೆ ಮರಳು ದೊರೆಯಬೇಕೆಂಬ ನಿಟ್ಟಿನಲ್ಲಿ ಬುಧವಾರ ಅಪರಾಹ್ನ ಇಲ್ಲಿನ ತಾಲೂಕು ಪಂಚಾಯತ್ನಲ್ಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿ.ಎಂ. ಸುಕುಮಾರ ಶೆಟ್ಟಿ ಅವರು ಪ್ರತ್ಯೇಕ ಸಭೆ ನಡೆಸಿದರು.
ತುರ್ತು ಕ್ರಮ ಕೈಗೊಳ್ಳಿ
ಒಂದೂವರೆ ತಿಂಗಳ ಹಿಂದೆ ಹೇಳಿದ್ದರೂ ಕುಂದಾಪುರ ಭಾಗದಲ್ಲಿ ಮರಳು ಟೆಂಡರ್ಗೆ ಇನ್ನೂ ಕ್ರಮಕೈಗೊಂಡಿಲ್ಲ. ಮರಳುಗಾರಿಕೆ ಎಂದರೆ ಬಳ್ಳಾರಿ ಗಣಿಯಂತಾಗಿದೆ ಎಂಬ ಟೀಕೆ ಕೇಳುತ್ತಿದೆ. ತುರ್ತಾಗಿ ಕಿರು ಅವಧಿಯ ಟೆಂಡರ್ ಪ್ರಕ್ರಿಯೆ ನಡೆಸಿ ಬಾಕಿ ಉಳಿದ ಮರಳು ದಿಬ್ಬಗಳನ್ನು ಏಲಂ ಮಾಡಿ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಗಣಿ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ಪ್ರತಿಕ್ರಿಯೆಸಿಯೂ ಕ್ರಮ ಕೈಗೊಳ್ಳದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ವಿಳಂಬಿಸಬೇಡಿ. ಅರ್ಹರಿಗೆ ಮರಳು ದೊರೆಯುವಂತಾಗಬೇಕು. ಮುಂದಿನ ಬಾರಿ ಟೆಂಡರ್ ಕರೆಯುವಾಗ ಈ ಬಾರಿಯ ಲೋಪದೋಷಗಳನ್ನು ಸರಿಪಡಿಸ ಬೇಕೆಂದರು. ಗಣಿ ಇಲಾಖೆ ಅಧಿಕಾರಿ ರಾಮ ಜಿ. ನಾಯ್ಕ , ಸಿಆರ್ಝಡ್ ವ್ಯಾಪ್ತಿಯಲ್ಲಿ 10 ಮೆಟ್ರಿಕ್ ಟನ್ (2.75 ಯುನಿಟ್)ಗೆ 5,500 ರೂ., ನಾನ್ ಸಿಆರ್ಝಡ್ನಲ್ಲಿ 6,500 ರೂ. ದರ ನಿಗದಿ ಮಾಡಲಾಗಿದೆ. ಗುಲ್ವಾಡಿ, ಕಾವ್ರಾಡಿ, ಬಳ್ಕೂರು ವ್ಯಾಪ್ತಿಗೆ 11.2 ಎಕ್ರೆ, ಹಳ್ನಾಡು, ಜಪ್ತಿ ವ್ಯಾಪ್ತಿಯಲ್ಲಿ 5.7 ಎಕ್ರೆಗೆ 5 ವರ್ಷಗಳಿಗೆ ಮರಳುದಿಬ್ಬ ತೆಗೆ ಯಲು ಟೆಂಡರ್ ಆಗಿದೆ ಎಂದರು. ಲಾರಿಗೆ ತುಂಬಿಸುವುದನ್ನೂ ಸೇರಿಸಿ ದರ ವಿಧಿಸಬೇಕು, ಹೊಸದಾಗಿ ಇನ್ನಷ್ಟು ಕಡೆ ಮರಳು ದಿಬ್ಬ ಗುರುತಿಸಿ ಟೆಂಡರ್ಗೆ ಕ್ರಮವಹಿಸಲು ಶಾಸಕರು ಹೇಳಿದರು.
ಬಳ್ಕೂರು, ಅಂಪಾರು, ಹಳ್ನಾಡು, ಶಂಕರ ನಾರಾಯಣ, ಮೊಳಹಳ್ಳಿ ಕಡೆಗಳ ವಾರಾಹಿ ಹೊಳೆಯಲ್ಲಿ 8 ಕಡೆ ಮರಳು ತೆಗೆಯಲು ಟೆಂಡರ್ ಪ್ರಕ್ರಿಯೆ ಬಾಕಿಯಿದೆ ಎಂದು ಇಲಾಖಾಧಿಕಾರಿ ಹೇಳಿದರು.
ಹೂಳೆತ್ತಿ ಹರಾಜು ಹಾಕಿ
ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಲ್ಲ ಕಿಂಡಿ ಅಣೆಕಟ್ಟುಗಳ ಹೂಳೆತ್ತಿಸಬೇಕು. ಈ ಪೈಕಿ ಲಭ್ಯವಿರುವ ಮರಳನ್ನು ಗ್ರಾ.ಪಂ. ಮಟ್ಟದಲ್ಲಿ ಏಲಂ ಮಾಡಿ ಕನಿಷ್ಟ ದರದಲ್ಲಿ ಬಡವರಿಗೆ ನೀಡಬೇಕು. ಅಭಿವೃದ್ಧಿ ಕಾಮಗಾರಿ, ಮನೆ ನಿರ್ಮಾಣಕ್ಕೆ ಮರಳಿನ ಕೊರತೆಯಾಗಬಾರದು ಎಂದು ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ಪಂ.ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಕರಣಿಕರ ಸಭೆಯಲ್ಲಿ ಮಾತನಾಡಿದ ಅವರು, ಹೂಳೆತ್ತಿದರೆ ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರಿನ ಕೊರತೆ ನಿವಾರಣೆಗೆ ಸಹಾಯವಾಗಲಿದೆ. ಕೃತಕ ನೆರೆಯುಂಟಾಗದು ಎಂದರು. ಕಾಟಾಚಾರಕ್ಕೆ ಸಭೆ ಮಾಡುತ್ತಿಲ್ಲ. ಜನಪ್ರತಿನಿಧಿಗಷ್ಟೇ ಅಲ್ಲ ಸರಕಾರಿ ನೌಕರರಿಗೂ ಜನರ ಕಾಳಜಿಬೇಕು. ಇಷ್ಟು ಹೊಳೆಗಳಿದ್ದರೂ ನೀರಿನ ಅಭಾವ ನಮ್ಮ ದುರಂತ, ಸಭೆಗೆ ಬಾರದ ಪಿಡಿಒಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದರು.
ಹೂಳೆತ್ತಲು 3 ವರ್ಗೀಕರಣ ಮಾಡಿ ಮರಳು ಸಿಗುವಲ್ಲಿ ಮೊದಲು ತೆಗೆದು ಏಲಂ, ಅನಂತರ ಇತರೆಡೆ ಹೂಳೆತ್ತಲಾಗುವುದು ಎಂದರು. ಗಣಿ ಇಲಾಖೆ ಅಧಿಕಾರಿ ರಾಮ್ ಜಿ. ನಾಯ್ಕ, 1 ವಾರದೊಳಗೆ ಆದ್ಯತೆಯ ಪಟ್ಟಿ ನೀಡಿ. ಜಂಟಿ ಸರ್ವೆ ನಡೆಸಲಾಗುವುದು ಎಂದರು.
ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಎಸ್.ಕುಂದರ್, ಉಪಾಧ್ಯಕ್ಷ ರಾಮ್ಕಿಶನ್ ಹೆಗ್ಡೆ, ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್, ಇಒ ಭಾರತಿ, ಕುಂದಾಪುರ ಇಒ ಡಾ| ನಾಗಭೂಷಣ್ ಉಡುಪ ಉಪಸ್ಥಿತರಿದ್ದರು.
ಅಭಿವೃದ್ಧಿ ಕಾರ್ಯಗಳಿಗೆ
370 ಕೋ.ರೂ. ಮಂಜೂರು
ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಈ ವರ್ಷ 300 ಕೋ.ರೂ., ಕಳೆದ ವರ್ಷ 70 ಕೋ.ರೂ. ಮಂಜೂರಾಗಿದ್ದು ಕಾಮಗಾರಿಗೆ ಮರಳಿನ ಕೊರತೆಯಿದೆ. ಇನ್ನಷ್ಟು ಕಡೆ ಕಾಲುಸಂಕ, ಶ್ಮಶಾನ, ರಿಕ್ಷಾ ತಂಗುದಾಣ ಮಾಡಲು ಅನುದಾನ ನೀಡಲಾಗುವುದು. ಸೌಕೂರು ಏತ ನೀರಾವರಿ ಯೋಜನೆಗೆ 74 ಕೋ.ರೂ.ಗೆ ಟೆಂಡರ್ ಆಗಿದೆ.
-ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ