ಕೋಡಿಬೆಂಗ್ರೆ ಬಂದರು ಸಮೀಪ ನದಿ ಕೊರೆತ: ಅಪಾಯದಲ್ಲಿವೆ ಕೆಲವು ಮನೆಗಳು
Team Udayavani, Jul 4, 2019, 5:00 AM IST
ಮಲ್ಪೆ: ಕೋಡಿಬೆಂಗ್ರೆ ಬಂದರು ಸಮೀಪದ ಪ್ರದೇಶದಲ್ಲಿ ನದಿ ಕೊರೆತ ಕಾಣಿಸಿಕೊಂಡಿದೆ. ಸಮೀಪದ 6 ಮನೆಗಳು ಅಪಾಯದಲ್ಲಿದ್ದು, ಮನೆ ಮಂದಿ ಆತಂಕಿತರಾಗಿದ್ದಾರೆ.
ಕೋಡಿಬೆಂಗ್ರೆ ಮೀನುಗಾರಿಕೆ ಜೆಟ್ಟಿ ಸಮೀಪದ, ಮಸೀದಿಯ ಎದುರುಗಡೆ ಸುವರ್ಣ ನದಿಯಲ್ಲಿ ಕೊರೆತ ಕಾಣಿಸಿ ಕೊಂಡಿದ್ದು ತೆರೆಗಳು ದಡವನ್ನು ಅಪ್ಪಳಿಸುತ್ತಿವೆೆ. ಸುಮಾರು 20ಅಡಿಗಳಷ್ಟು ಭೂ ಭಾಗವು ಕೊರೆತವಾಗಿದ್ದು, ಮರಮಟ್ಟುಗಳು ನದಿ ಪಾಲಾಗಿವೆೆ. ಸಮೀಪದ ಮನೆಗಳ ಬುಡದವರೆಗೂ ನದಿ ನೀರು ಮುನ್ನುಗ್ಗಿ ಬರುತ್ತಿದ್ದು, ಸುರೇಶ್ ಜಿ. ಕುಂದರ್, ಬೇಬಿ ತಿಂಗಳಾಯ, ದಿನೇಶ್ ಎಸ್. ಕೋಟ್ಯಾನ್, ಸುಶೀಲಾ ಖಾರ್ವಿ, ಚಿತ್ರಾ ಖಾರ್ವಿ ಅವರ ಮನೆಗಳು ಅಪಾಯದಲ್ಲಿವೆ.
ಕೊರೆತಗೊಂಡ ಪ್ರದೇಶದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಈಗಾಗಲೇ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದರ ಮಧ್ಯೆ 150 ಮೀಟರ್ವರೆಗೆ ಯಾವುದೇ ತಡೆಗೋಡೆ ಇಲ್ಲದ ಕಾರಣ ನೀರಿನ ಒತ್ತಡಕ್ಕೆ ಕೊರೆತವಾಗುತ್ತಿದೆ. ಈ ಭಾಗದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಬೇಕೆಂದು ಇಲ್ಲಿನ ನಾಗರಿಕರು ಸಂಬಂಧಪಟ್ಟ ಜನಪ್ರತಿನಿಧಿ ಗಳಿಗೆ, ಅಧಿಕಾರಿಗಳಿಗೆ ಮನವಿಯನ್ನು ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಹೂಳೆತ್ತದಿರುವುದು ಕಾರಣ ?
ಕುಂದಾಪುರ ವಿಧಾನಸಭಾ ಕ್ಷೇತ್ರ, ಕೋಡಿ ಗ್ರಾಮ ಪಂಚಾಯತ್ಗೆ ಸೇರಿದ (ಮಲ್ಪೆ ಠಾಣಾ ವ್ಯಾಪ್ತಿ) ಕೋಡಿಬೆಂಗ್ರೆಯ ಈ ಪ್ರದೇಶವು ನದಿ ಸಮುದ್ರ ಸಂಗಮದ ಸಮೀಪದ ಪ್ರದೇಶವಾಗಿದೆ.
ಮಳೆಗಾಲದಲ್ಲಿ ಇಲ್ಲಿ ಸಮುದ್ರದ ಏರಿಳಿತದ ಪ್ರಭಾವ ಇರುತ್ತದೆ. ಮೀನುಗಾರಿಕೆ ಬಂದರು ಸಮೀಪದ ಈ ನದಿಯಲ್ಲಿ ಈ ಬಾರಿ ಹೂಳೆತ್ತದಿರುವುದರಿಂದ ನದಿಯ ಆಳ ಕಡಿಮೆಯಾಗಿ ಮಳೆಗಾಲ ನದಿ ತುಂಬಿ ಹರಿದು ಕೊರೆತ ಕಾಣಿಸಿಕೊಳ್ಳಲು ಕಾರಣವಾಗಿದೆ ಎನ್ನಲಾಗುತ್ತಿದೆ.
ನದಿಯಲ್ಲಿ ಹೂಳು ತೆಗೆಯದ ಕಾರಣ ನದಿ ಆಳವಿಲ್ಲದೆ ತೆರೆಗಳು ದಂಡೆಗೆ ಅಪ್ಪಳಿಸುತ್ತಿವೆೆ. ಇದರಿಂದ 4-5 ಮನೆಗಳಿಗೆ ಸಮಸ್ಯೆ ಉಂಟಾಗಿದೆ. ಸುಮಾರು 150 ಮೀಟರ್ ತಡೆಗೋಡೆ ನಿರ್ಮಾಣ ಮಾಡುವಲ್ಲಿ ತುರ್ತು ಕ್ರಮ ತೆಗೆದುಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ