ನದಿ ತಿರುವು ನಾನ್ಸೆನ್ಸ್: ಸಾಯಿನಾಥ್
Team Udayavani, Aug 21, 2017, 8:40 AM IST
ಉಡುಪಿ: ಬರ ಇರುವುದಲ್ಲ. ಇರುವುದು ನೀರಿನ ಕೊರತೆ. ಗ್ರಾಮದಿಂದ ನಗರ, ಕೃಷಿಯಿಂದ ಕೈಗಾರಿಕೆ, ಆಹಾರ ಧಾನ್ಯದಿಂದ ವಾಣಿಜ್ಯ ಬೆಳೆ, ಜೀವನೋಪಾಯದಿಂದ ಜೀವನ ಶೈಲಿಗೆ ನೀರನ್ನು ಪೂರೈಸುತ್ತಿವುದೇ ನೀರಿನ ಸಮಸ್ಯೆಗೆ ಕಾರಣ. ನದಿ ತಿರುವು ಯೋಜನೆ ಎನ್ನುವುದೇ ನಾನ್ಸೆನ್ಸ್… ಇದು ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಅನಿಸಿಕೆ.
ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪುರಭವನದಲ್ಲಿ ರವಿವಾರ ಆಯೋಜಿಸಿದ್ದ “ತಲ್ಲೂರು ನುಡಿಮಾಲೆ 2017: ಕರಾವಳಿ ಕಟ್ಟು’ ಕಾರ್ಯಕ್ರಮದಲ್ಲಿ “ಡಿಜಿಟಲ… ಯುಗದಲ್ಲಿ ಗ್ರಾಮೀಣ ಭಾರತದ ಕಥನ’ ಕುರಿತು ಉಪನ್ಯಾಸ ನೀಡಿ ಸಂವಾದ ನಡೆಸಿದ ಅವರು ಜಲ ಸಮಸ್ಯೆ ಬಂದಾಗ ಮುಂಗಾರು ಇಳಿಮುಖ, ಜಲ ಹಂಚಿಕೆಯನ್ನು ತೋರಿಸುತ್ತಾರೆ. ಒಟ್ಟು ನೀರಾವರಿಗೆ ಬರುವ ಶೇ. 60 ಭೂಗರ್ಭದ ನೀರನ್ನು ಮರುಪೂರಣಗೊಳಿಸದ ವಿಷಯವನ್ನು ಹೇಳುತ್ತಿಲ್ಲ. ನೀರಿನ ಕೊರತೆಗೆ ಇದೇ ಮುಖ್ಯ ಕಾರಣ ಎಂದರು.
ಹಣ ಮಾಡುವ ಮಾಧ್ಯಮ
1980ರಲ್ಲಿ ನರ್ಮದಾ, ಆಲಮಟ್ಟಿ ಅಣೆಕಟ್ಟುಗಳ ಬಗೆಗೆ ಮಾಧ್ಯಮ ಚರ್ಚೆ ನಡೆಯುತ್ತಿತ್ತು. ಈಗ ಇದು ಕಣ್ಮರೆಯಾಗಿದೆ. ಬಾಲಿವುಡ್ನಿಂದ ಹಣ ಬರುತ್ತದೆ ವಿನಾ ಯಕ್ಷಗಾನದಿಂದ ಹಣ ಬರುವುದಿಲ್ಲ. ಕಳೆದ 20 ವರ್ಷಗಳಿಂದ ಮಾಧ್ಯಮ ರಂಗ ಕಾರ್ಪೊರೇಟ್ ರಂಗವಾಗಿದೆ ಎಂದು ಸಾಯಿನಾಥ್ ಅಭಿಪ್ರಾಯಿಸಿದರು.
ಪ್ರತಿರೋಧದ ಪತ್ರಿಕಾರಂಗ
ಗಾಂಧೀಜಿ, ನೆಹರೂ, ಅಂಬೇಡ್ಕರ್ ಅವರಂತಹವರು ಪತ್ರಿಕಾರಂಗದವರು. ತಪ್ಪುಗಳಾಗಿದ್ದಲ್ಲಿ ಅದನ್ನು ವಿರೋಧಿಸಿ ಎಚ್ಚರಿಸುವುದು ಪತ್ರಿಕಾರಂಗದ ಮುಖ್ಯ ಕರ್ತವ್ಯ ಎಂದರು.
ಶೇ. 70ರಷ್ಟಿರುವ ಗ್ರಾಮೀಣ ಭಾಗದ ಜನರ ವರದಿಗೆ ಪತ್ರಿಕೆಗಳಲ್ಲಿ ಜಾಗವೇ ಇಲ್ಲ. ದಿಲ್ಲಿ, ಬಾಲಿ ವುಡ್, ಮುಂಬಯಿ, ಚೆನ್ನೈ, ಕೋಲ್ಕತಾ ದಂತಹ ಮಹಾನಗರದ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿವೆ. ದೊಡ್ಡ ಮಟ್ಟದಲ್ಲಿ ರೈತರ ಸಾವು, ಅಗ್ನಿ ದುರಂತದ ಕಾರ್ಮಿಕರ ಸಾವಿನಂತಹ ದುರ್ಘಟನೆ ಗಳು ಮಾತ್ರ ಮುಖಪುಟ ಸುದ್ದಿಯಾಗುತ್ತಿವೆ ಎಂದು ವಿಷಾದಿಸಿದರು.
ಕಳೆದ 50 ವರ್ಷಗಳಲ್ಲಿ ಸುಮಾರು 225 ಭಾಷೆಗಳು ನಶಿಸಿ ಹೋಗಿವೆ. ಶಿಕ್ಷಣ ವ್ಯವಸ್ಥೆ ದುಬಾರಿಯಾಗುತ್ತಿದ್ದು ಕೇವಲ ಸಿರಿವಂತರಿಗೆ ಮಾತ್ರ ಸೀಮಿತ ವಾಗುತ್ತಿದೆ. ಶೈಕ್ಷಣಿಕ ಪಠ್ಯ ಪುಸ್ತಕಗಳು ಸಹ ಸಾಮಾನ್ಯ ವಿದ್ಯಾರ್ಥಿಗೆ ಸಿಗದ ಪರಿಸ್ಥಿತಿಯಿದೆ. ಅದಕ್ಕಾಗಿಯೇ ಯುವಕರಿಗೆ ಅನುಕೂಲ ಆಗಬಲ್ಲ ಪಠ್ಯಗಳನ್ನು ರೂರಲ… ಇಂಡಿಯಾ ಆನ್ಲೈನ್ ಪತ್ರಿಕೆ ಪ್ರಕಟಿಸುತ್ತಿದೆ ಎಂದರು.
ಪತ್ರಕರ್ತ ರಾಜಾರಾಂ ತಲ್ಲೂರು ಬರೆದ “ನುಣ್ಣನ್ನ ಬೆಟ್ಟ’ ಕೃತಿ ಯನ್ನು ಬಿಡುಗಡೆಗೊಳಿಸಿದರು. ಪ್ರೊ| ರಾಬರ್ಟ್ ಜೋಸ್ ಕೃತಿ ಪರಿಚ ಯಿಸಿದರು. ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ, ಜಿ. ಎನ್. ಮೋಹನ್, ಕತೆಗಾರ ಪ್ರೊ| ಎಂ.ಎಸ್. ಶ್ರೀರಾಮ…, ಅಜೀಂ ಪ್ರೇಂಜಿ ವಿ.ವಿ. ಪ್ರಾಧ್ಯಾಪಕ ಡಾ| ಎ. ನಾರಾಯಣ ಸಂವಾದ ನಡೆಸಿದರು. ಸಂಘಟಕ ಸದಸ್ಯರಾದ ಡಾ| ಪಿ.ವಿ. ಭಂಡಾರಿ ಸ್ವಾಗತಿಸಿ, ಐವನ್ ಡಿಸಿಲ್ವ, ರಾಮಕೃಷ್ಣ ಹೇಳೆì ವಂದಿಸಿದರು. ಸುಮಾ ನಿರ್ವಹಿಸಿದರು. ಸತೀಶ ಚಪ್ಪರಿಕೆ ಅತಿಥಿಗಳನ್ನು ಪರಿಚಯಿಸಿದರು.
ಚೀನಿಯರೆಲ್ಲ ಒಂದೇ ತೆರನಾಗಿ ಕಾಣುತ್ತಾರೇಕೆ?
ಚೀನ ದೇಶದವರನ್ನು ಕಂಡಾಗ ಒಂದೇ ತೆರನಾಗಿ ಕಾಣುತ್ತದೆಯಲ್ಲ? ಈ ಒಂದೇ ತೆರನಾದ ಮುಖವರ್ಣಿಕೆಗೆ ಒಂದು ಕರಾಳ ಚರಿತ್ರೆ ಇದೆ. 3,500- 4,000 ವರ್ಷಗಳ ಹಿಂದೆ ಅಲ್ಲಿದ್ದ ಎಲ್ಲ ಗುಡ್ಡಗಾಡು ಸಂಸ್ಕೃತಿಯನ್ನು ನಾಶ ಮಾಡುವ ಅಭಿಯಾನ ನಡೆಯಿತು. ಇದರಿಂದ ಒಂದೇ ಸಂಸ್ಕೃತಿ, ಧರ್ಮ ಅಲ್ಲಿ ಸ್ಥಾಪನೆಯಾಯಿತು. ಭಾರತಕ್ಕೆ ಹಿಮಾಲಯ ಪರ್ವತ ಒಂದು ರಕ್ಷಣಾ ಗೋಡೆ ಇದೆ. ಹೀಗಾಗಿ ಚೀನಿಯರ ಆಕ್ರಮಣ ನಡೆಯಲಿಲ್ಲ, ಇಲ್ಲದೆ ಇದ್ದರೆ ನಾವೆಲ್ಲರೂ ಚೀನಿಯರಂತೆ ಆಗುತ್ತಿದ್ದೆವು.
– ನಾಗೇಶ್ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ