ಅಧಿಕ ಭಾರದ ವಾಹನಗಳ ಓಡಾಟದಿಂದ ಕುಸಿಯುತ್ತಿದೆ ರಸ್ತೆಯ ಸೇತುವೆಗಳು


Team Udayavani, Jul 15, 2017, 3:45 AM IST

1906kota4e.jpg

ಕೋಟ: ಕೋಟ-ಗೋಳಿಯಂಗಡಿ  ಹಾಗೂ ಬ್ರಹ್ಮಾವರ -ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಅಧಿಕ ಭಾರದ ಸರಕುಗಳನ್ನು ಸಾಗಾಟ ನಡೆಸುವ ವಾಹನಗಳ ಓಡಾಟ ಹೆಚ್ಚಿದ್ದು ಇದರಿಂದಾಗಿ ಇಲ್ಲಿನ ಪ್ರಮುಖ ಸೇತುವೆಗಳು ಕುಸಿಯುವ ಭೀತಿಯಲ್ಲಿದೆ ಹಾಗೂ ಹೊಸದಾಗಿ ದುರಸ್ತಿಗೊಳಿಸಿದ ರಸ್ತೆ ಕೂಡ  ಹಾಳಾಗು¤ತಿದೆ. ಈ ಕುರಿತು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗೆ ಹಲವು  ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ.

20 ಟನ್‌ ಸಾಮರ್ಥ್ಯದ 
ರಸ್ತೆಯಲ್ಲಿ 40-45  ಟನ್‌  ಸಾಗಾಟ

ಬ್ರಹ್ಮಾವರ- ಜನ್ನಾಡಿ ಹಾಗೂ   ಕೋಟ ಗೋಳಿಯಂಗಡಿ   ಜಿಲ್ಲಾ  ಮುಖ್ಯ  ರಸ್ತೆಯಲ್ಲಿ 20ಮೆಟ್ರಿಕ್‌  ಟನ್‌ಗಿಂತ   ಅಧಿಕ ಭಾರದ  ವಾಹನಗಳ  ಓಡಾಟವನ್ನು  ಲೋಕೋಪಯೋಗಿ  ಇಲಾಖೆ ನಿರ್ಬಂಧಿಸಿದೆ.  ಶಿರಿಯಾರ,  ಬ್ರಹ್ಮಾವರ ಮುಂತಾದ  ಕಡೆಗಳಲ್ಲಿ ಈ  ಕುರಿತು ಸೂಚನಾಫಲಕವನ್ನು  ಅಳವಡಿಸಿದೆ. ಆದರೆ ವಾಹನಗಳು ಈ  ಆದೇಶವನ್ನು ಲೆಕ್ಕಿಸದೆ  40- 45 ಟನ್‌ ಗಿಂತ ಹೆಚ್ಚು  ಭಾರದ  ಸರಕುಗಳನ್ನು ಇಲ್ಲಿ ಸಾಗಾಟ  ನಡೆಸುತ್ತದೆ. ಆದರೆ ಇದನ್ನು ತಡೆಯಲು  ಆರ್‌.ಟಿ.ಒ. ಅಥವಾ ಪೊಲೀಸ್‌ ಇಲಾಖೆಯಾಗಲಿ ಮುಂದಾಗಿಲ್ಲ.

20 ಮೆಟ್ರಿಕ್‌ ಟನ್‌ಗಿಂತ ಅಧಿಕ ಭಾರದ ವಾಹನಗಳ ಓಡಾಟವನ್ನು ನಿರ್ಬಂಧಿಸಿ ಲೋಕೋಪಯೋಗಿ ಇಲಾಖೆ ಸೂಚನಾ ಫಲಕ ಅಳವಡಿಸಿರುವುದು.

ಎಚ್ಚರವಹಿಸದಿದ್ದರೆ  
ಅಪಾಯ ಗ್ಯಾರಂಟಿ 

ಕೋಟ-ಗೋಳಿಯಂಗಡಿ ರಸ್ತೆ ಈ ಭಾಗದ  ಜನರ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು,  ಸಾವಿರಾರು   ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿ ಪ್ರತಿ ನಿತ್ಯ ಸಂಚರಿಸುತ್ತಾರೆ.  ಅದೇ ರೀತಿ  ಬ್ರಹ್ಮಾವರ ಜನ್ನಾಡಿ  ರಸ್ತೆಯ ಮೂಲಕವು ಸಾವಿರಾರು ಮಂದಿ ಸಂಚರಿಸುತ್ತಾರೆ. ಹಿಂದೊಮ್ಮೆ  ಬಾಕೂìರು  ಸೇತುವೆ ಕುಸಿದ ಸಂದರ್ಭ ಈ ಭಾಗದ ಸಂಪರ್ಕ  ಸಂಪೂರ್ಣವಾಗಿ ಕಡಿತಗೊಂಡಿತ್ತು. ಇದೀಗ ಅಧಿಕ  ಭಾರದ  ವಾಹನಗಳ ಓಡಾಟದಿಂದ ಅಪಾಯದಲ್ಲಿರುವ ಸೇತುವೆ, ಕಿರು ಸೇತುವೆ,  ಮೋರಿಗಳು ಕುಸಿದಲ್ಲಿ ಈ ಭಾಗದ ಜನರು  ಮತ್ತೂಮ್ಮೆ ಸಂಕಷ್ಟಪಡಬೇಕಾಗುತ್ತದೆ.
ಒಟ್ಟಾರೆ ಈ  ಕುರಿತು ಸೂಕ್ತ  ಕ್ರಮ ಕೈಗೊಂಡು ಮುಂದೆ ಎದುರಾಗಲಿರುವ ಅಪಾಯವನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಕೋಟ, ಬ್ರಹ್ಮಾವರದಲ್ಲಿ  ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ನಡೆಸಿ ಕಾನೂನು ಮೀರುವ ವಾಹನಗಳ ಮೇಲೆ  ಕ್ರಮಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ  ಆಗ್ರಹವಾಗಿದೆ.

ಬೃಹತ್‌ ಗಾತ್ರದ‌ ಬಂಡೆಗಳ ಸಾಗಾಟ
ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಿಸುವ ಸಲುವಾಗಿ ಉಪಯೋಗಿಸುವ 40-45  ಟನ್‌ ತೂಕದ  ಬಂಡೆಕಲ್ಲುಗಳನ್ನು ಕೋಟ -ಗೋಳಿಯಂಗಡಿ  ರಸ್ತೆಯಲ್ಲಿ ಸಾಗಾಟ ನಡೆಸಲಾಗುತ್ತದೆ ಹಾಗೂ  ನವಯುಗ  ಕಂಪನಿಯ ವಾಹನಗಳು ಕೂಡ ಅಧಿಕ ಭಾರದ ಸರಕುಗಳನ್ನು ಸಾಗಾಟ ನಡೆಸುತ್ತದೆ.

ಕುಸಿಯುವ  ಭೀತಿಯಲ್ಲಿ ಸೇತುವೆಗಳು 
ಈ  ರೀತಿಯ ವಾಹನಗಳ ಓಡಾಟದಿಂದ ಇಲ್ಲಿನ ಸೇತುವೆ, ಮೋರಿಗಳು ಕುಸಿಯುವ ಅಪಾಯದಲ್ಲಿದೆ. ಜೂ.8ರಂದು ಕೋಟ ಮೂರುಕೈ ಸಮೀಪ ಬೆಟ್ಲಕ್ಕಿ ಹಡೋಲಿನಲ್ಲಿ ಕಿರುಸೇತುವೆಯೊಂದು ಕುಸಿದು ಎರಡು ದಿನ ಸಂಪರ್ಕ ಕಡಿತಗೊಂಡು ಈ ಭಾಗದ ಜನತೆ ಪರದಾಟನಡೆಸಿದ್ದರು. ಇದೀಗ ತಾತ್ಕಾಲಿಕ ಮೋರಿ ಅಳವಡಿಸಿ ಸಂಪರ್ಕಕ್ಕೆ ವ್ಯವಸ್ಥೆ  ಮಾಡಲಾಗಿದ್ದು, ಇದರ ಮೇಲೂ ಅತೀ  ಭಾರದ ವಾಹನಗಳು ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಬ್ರಹ್ಮಾವರ -ಜನ್ನಾಡಿ  ಹಾಗೂ ಕೋಟ-ಗೋಳಿಯಂಗಡಿ  ರಸ್ತೆಯಲ್ಲಿ  ಅಧಿಕ ಭಾರವನ್ನು ಹೊತ್ತು  ಓಡಾಡುವ ವಾಹನಗಳಿಂದಾಗಿ ಇಲ್ಲಿನ ಸೇತುವೆಗಳು ಕುಸಿಯುವ ಹಂತ ತಲುಪಿದೆ. ಒಂದು ವೇಳೆ ಸೇತುವೆಗಳು ಕುಸಿದಲ್ಲಿ ಸಂಪರ್ಕವೇ ಕಡಿತಗೊಳ್ಳಲಿದೆ. ಈ ಕುರಿತು  ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದೆ.  ಆದರೆ ಇದರಿಂದ  ಹೆಚ್ಚಿನ ಪ್ರಯೋಜನವಾಗಲಿಲ್ಲ. ಸಂಬಂಧಪಟ್ಟ  ಅಧಿಕಾರಿಗಳು ಈ ಕುರಿತು
ಸೂಕ್ತ  ಕ್ರಮಕೈಗೊಳ್ಳಬೇಕು.

– ಯಡ್ತಾಡಿ ಸತೀಶ್‌  ಶೆಟ್ಟಿ, ಸಾಮಾಜಿಕ ಹೋರಾಟಗಾರರು

ಕೋಟ ಹಾಗೂ ಬ್ರಹ್ಮಾವರ ಜಿಲ್ಲಾ ಮುಖ್ಯ ರಸ್ತೆಯಲ್ಲಿ  ವಾಹನಗಳು ಅಧಿಕ ಭಾರವನ್ನು ಹೊತ್ತು ಸರಕುಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಸ್ಥಳೀಯರಿಂದ  ದೂರುಗಳು ಬಂದಿದೆ. ಮುಂದಿನ  ದಿನದಲ್ಲಿ ಈ ಕುರತು
ಸೂಕ್ತ ಕ್ರಮಕೈಗೊಳ್ಳಲಾಗುವುದು.

– ಗುರುಮೂರ್ತಿ ಕುಲಕರ್ಣಿ, ಉಪಸಾರಿಗೆ ಆಯುಕ್ತರು ಉಡುಪಿ ಜಿಲ್ಲೆ

– ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.