ಕುಳ್ಳುಂಜೆ ಅಬ್ಯಾಡಿ ಮಾರ್ಗದ ಬೇಡಿಕೆ ಈಡೇರಲೇ ಇಲ್ಲ
Team Udayavani, Jun 6, 2018, 6:00 AM IST
ಕುಂದಾಪುರ: ಊರಿಗೆ ಸಂಪರ್ಕ ರಸ್ತೆ ಇಂದಾಗುತ್ತದೆ, ನಾಳೆ ಆಗುತ್ತದೆ ಎಂದು ಜನ ಜನ ಚಾತಕ ಪಕ್ಷಿಯಂತೆ ಕಾದದ್ದೇ ಬಂತು. ರಸ್ತೆ ಮಾತ್ರ ಆಗಲೇ ಇಲ್ಲ. ಈ ಮಳೆಗಾಲದಲ್ಲೂ ಜನರ ಬವಣೆ ತಪ್ಪದು. ಇದು ಕುಳ್ಳುಂಜೆ ಅಬ್ಯಾಡಿ ಮಾರ್ಗದ ರಸ್ತೆ ಸಮಸ್ಯೆ. ಶಂಕರನಾರಾಯಣ ಪದವಿಪೂರ್ವ ಕಾಲೇಜು ಬದಿಯ ಕುಳ್ಳುಂಜೆ ಕಲ್ಮಕ್ಕಿ ರಸ್ತೆಯಲ್ಲಿ ಸಾಗಿದರೆ ಈ ರಸ್ತೆ ಸಿಗುತ್ತದೆ. ಕುಳ್ಳುಂಜೆ ಬದಿ ಸುಮಾರು 40 ಮನೆ, ಅಬ್ಯಾಡಿ ಕಡೆ ಸುಮಾರು 25ಕ್ಕೂ ಹೆಚ್ಚು ಮನೆಗಳಿವೆ. ಮಳೆಗಾಲ ಆರಂಭವಾದರೆ ಸಾಕು ಇಲ್ಲಿನವರಿಗೆ ಸಮಸ್ಯೆ ತಪ್ಪಿದ್ದಲ್ಲ.
ಮಳೆಗಾಲದಲ್ಲಿ ಯಾವುದೇ ವಾಹನ ಹೋಗದ ರೀತಿ ಹದಗೆಡುವ ಈ ರಸ್ತೆಯಲ್ಲಿ ಯಾರೂ ಬರಲೊಲ್ಲರು. ಶಾಲಾ ಮಕ್ಕಳಿಗೆ, ಹಿರಿಯರಿಗೆ ನಿತ್ಯದ ಓಡಾಟಕ್ಕೆ ಕಷ್ಟ. ಈ ವಠಾರದಲ್ಲಿ ಸಾಕಷ್ಟು ಹೈನುಗಾರರಿದ್ದು ಅವರಿಗೆ ನಿತ್ಯ ಸಾಗಾಟಕ್ಕೆ ಸಮಸ್ಯೆಯಾಗಿದೆ. ಈ ರಸ್ತೆಯ ದುರಸ್ತಿಗೆ ಅದೆಷ್ಟೋ ಸಮಯ ದಿಂದ ಬೇಡಿಕೆ ಇದ್ದರೂ ಈಡೇರಲೇ ಇಲ್ಲ. ವಾರಾಹಿ ಕಾಲುವೆ ಪಕ್ಕದಲ್ಲೇ ಈ ರಸ್ತೆ ಇದ್ದು, ಕಾಲುವೆ ಕಾಮಗಾರಿ ವೇಳೆ ದುರಸ್ತಿ ನಡೆದೀತು ಎಂದು ಗ್ರಾಮಸ್ಥರು ಆಶಾವಾದ ಹೊಂದಿದ್ದರೂ ಅದೂ ಈಡೇರಿಲ್ಲ.
ಶಾಸಕರಿಗೆ ಮನವಿ
ಸಾಕಷ್ಟು ಬಾರಿ ಶಾಸಕರಿಗೆ ಮನವಿ ಕೊಟ್ಟಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಈ ಭಾಗದ ಜನರ ಬೇಡಿಕೆ ಯಾವಾಗ ಈಡೇರುತ್ತದೆ ಎಂದು ಕಾಯುತ್ತಾ ಕುಳಿತುಕೊಳ್ಳುವ ಸ್ಥಿತಿ ಬಂದಿದೆ.
ನರಸಿಂಹ ನಾೖಕ್, ಕುಳ್ಳುಂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ