ರೈಲಿನಲ್ಲಿ ಅಮಲು ಪದಾರ್ಥ ನೀಡಿ ದರೋಡೆ !


Team Udayavani, Oct 14, 2018, 10:01 AM IST

1310udsb4ramachandra-acharya.jpg

ಉಡುಪಿ: ದಿಲ್ಲಿ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಾಸಿಕ್‌ನಿಂದ ಉಡುಪಿಗೆ ಬರುತ್ತಿದ್ದ ಕುಟುಂಬಕ್ಕೆ ಅಮಲು ಪದಾರ್ಥ ನೀಡಿ ಚಿನ್ನಾಭರಣ, ನಗದು ದೋಚಿದ ಘಟನೆ ಅ. 11ರಂದು ಸಂಭವಿಸಿದೆ. ರೈಲ್ವೆ ಯಾತ್ರೀ ಸಂಘದ ಕೋಶಾಧಿಕಾರಿ  ಉಡುಪಿ ಕಿನ್ನಿಮೂಲ್ಕಿಯ ರಾಮಚಂದ್ರ ಆಚಾರ್ಯ ಮತ್ತು ಅವರ ಸಹೋದರಿ ರಾಧಮ್ಮ ದರೋಡೆಗೊಳಗಾದವರು.

ನಡೆದುದೇನು?
ರಾಮಚಂದ್ರ ಆಚಾರ್ಯ (60) ಅವರು ನಾಸಿಕ್‌ನಲ್ಲಿ ಸಂಬಂಧಿಕರ ಮನೆಯ ಕಾರ್ಯಕ್ರಮವೊಂದನ್ನು ಮುಗಿಸಿ ಸಹೋದರಿಯರಾದ ರಾಧಮ್ಮ, ಸೀಮಾ ರಾವ್‌ ಮತ್ತು ತುಳಸಿ ಉಪಾಧ್ಯಾಯ ಅವರೊಂದಿಗೆ ಅ. 11ರಂದು ಬೆಳಗ್ಗೆ 6 ಗಂಟೆಗೆ ಉಡುಪಿಗೆ ಮರಳಲು ನಾಸಿಕ್‌ ರೋಡ್‌ ರೈಲು ನಿಲ್ದಾಣದಲ್ಲಿ ದಿಲ್ಲಿ-ಎರ್ನಾಕುಲಂ ಮಂಗಳಾ ಎಕ್ಸ್‌ಪ್ರೆಸ್‌ ಹತ್ತಿದ್ದರು. ರಾಮಚಂದ್ರ ಆಚಾರ್ಯ ಮತ್ತು ರಾಧಮ್ಮ ಒಂದು ಕಂಪಾರ್ಟ್‌ಮೆಂಟ್‌ನಲ್ಲಿ ಉಳಿದವರು ಇನ್ನೊಂದು ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮೇಲ್ಗಡೆ ಸೀಟಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಮಜ್ಜಿಗೆಕೊಟ್ಟಿದ್ದು ಅದನ್ನು ಸೇವಿಸಿದ ರಾಮಚಂದ್ರ ಆಚಾರ್ಯ ಮತ್ತು ರಾಧಮ್ಮ ಪ್ರಜ್ಞೆ ಕಳೆದುಕೊಂಡರು. ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಕುಂದಾಪುರ ಸಮೀಪ ಬರುವಾಗ ಎಚ್ಚರಗೊಂಡ ಆಚಾರ್ಯರು ಪರ್ಸ್‌, ಬ್ಯಾಗ್‌ ಇಲ್ಲದಿರುವುದನ್ನು ಕಂಡು ಇನ್ನೊಂದು ಕಂಪಾರ್ಟ್‌ಮೆಂಟ್‌ಗೆ ಬಂದು ಇತರ ಸಹೋದರಿಯರ ಬಳಿ ವಿಷಯ ತಿಳಿಸಿದರು. ಅವರು ಬಂದು ಪರಿಶೀಲಿಸಿದಾಗ ರಾಧಮ್ಮ ಅವರ ಮೈಮೇಲಿದ್ದ ಚಿನ್ನಾಭರಣ, ನಗದು ಮೊದಲಾದ ಸೊತ್ತುಗಳನ್ನೂ ದರೋಡೆ ಮಾಡಿರುವುದು ತಿಳಿಯಿತು. ಬಳಿಕ ಉಡುಪಿ ನಿಲ್ದಾಣದಲ್ಲಿ ಇಳಿದು ಆಸ್ಪತ್ರೆಗೆ ದಾಖಲಾಗಿ ಇದೀಗ ಚೇತರಿಸಿಕೊಂಡಿದ್ದಾರೆ.

ಮಜ್ಜಿಗೆಯಲ್ಲಿ ನಾನು ಅರ್ಧ ಮಾತ್ರ ಕುಡಿದಿದೆ. ಅಕ್ಕ ಪೂರ್ತಿ ಕುಡಿದಿದ್ದರಿಂದ ಎಚ್ಚರವೇ ಆಗಲಿಲ್ಲ. ಉಡುಪಿ ರೈಲು ನಿಲ್ದಾಣದಲ್ಲಿ ಅವರನ್ನು ಎತ್ತಿಕೊಂಡು ರೈಲಿನಿಂದ ಕೆಳಗಿಳಿಸಬೇಕಾಯಿತು ಎಂದು ಆಚಾರ್ಯ ವಿವರಿಸಿದ್ದಾರೆ.
ಟಿಕೆಟ್‌ ಹಾಗೆಯೇ ಇದೆ “ನಾವು ನಾಸಿಕ್‌ಗೆ ಹೋಗುವಾಗ ಅಥವಾ ಬರುವಾಗ ನಮ್ಮ ಟಿಕೆಟ್‌ ಚೆಕಿಂಗ್‌ಗೆ ಕೂಡ ಟಿಸಿ
ಗಳು ಬಂದಿಲ್ಲ. ಬೇರೆ ರಕ್ಷಣೆಯನ್ನು ಹೇಗೆ ನಿರೀಕ್ಷಿಸುವುದು? ಟಿಕೆಟ್‌ ಮೂಲರೂಪದಲ್ಲಿಯೇ ಇದ್ದು, ನಾನು ಪ್ರಯಾಣಿಸಿಲ್ಲ ಎಂದು ರಿಫ‌ಂಡ್‌ ಪಡೆಯಲು ಕೂಡ ಅವಕಾಶವಿದೆ’ ಎಂದು ಇಲಾಖೆಯ ನಿರ್ಲಕ್ಷ್ಯವನ್ನು ಆಚಾರ್ಯ ಟೀಕಿಸಿದ್ದಾರೆ.

ಕಳೆದುಕೊಂಡಿದ್ದೇನು?
ರಾಮಚಂದ್ರ ಆಚಾರ್ಯರ 30,000 ರೂ. ನಗದು, ಮೊಬೈಲ್‌, ರಾಧಮ್ಮ ಅವರ ಎರಡೆಳೆಯ ಬಂಗಾರ, ಮುತ್ತಿನ ಗುಂಡುಸರ, 1 ಕಿವಿಯೋಲೆ, 2 ಉಂಗುರ, 15,000 ರೂ. ನಗದು. ರಾಧಮ್ಮ ಅವರು ಒಂದು ಮಗ್ಗುಲಿಗೆ ಮಲಗಿದ್ದರಿಂದ ಇನ್ನೊಂದು ಕಿವಿಯೋಲೆಯನ್ನು ತೆಗೆಯಲಾಗಲಿಲ್ಲ.

ರೈಲ್ವೇ ಪೊಲೀಸರು ಉಡುಪಿ ರೈಲು ನಿಲ್ದಾಣದಿಂದ ಮನೆಗೆ ತಲುಪಿಸಿದ್ದು, ಬಳಿಕ ರಾಮಚಂದ್ರ ಆಚಾರ್ಯ, ರಾಧಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚೇತರಿಸಿಕೊಂಡು ಶನಿವಾರ ಮನೆಗೆ ಮರಳಿದ್ದಾರೆ. ರಾಧಮ್ಮ ಪೂರ್ಣವಾಗಿ ಚೇತರಿಸಿಕೊಳ್ಳಬೇಕಿದೆ.  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

32

Politics: ಟಿಕೆಟ್‌ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.