ಬೋಳ ಗ್ರಾಮಕ್ಕೆ ಹಾರಿಬಂದ ನಿಗೂಢ ಬಲೂನ್: ಬೆಚ್ಚಿಬಿದ್ದ ಜನ; ಅದೇನು ಗೊತ್ತಾ?


Team Udayavani, Nov 16, 2019, 10:34 AM IST

b

ಬೆಳ್ಮಣ್: ಬಿಳಿ ಬಣ್ಣದ ದೊಡ್ಡದೊಂದು ಬಲೂನ್, ಅದರಲ್ಲೊಂದು ಉಪಕರಣ, ಒಳಗಡೆ ಏನೊ ಚಿಪ್ ನಂತಹ ವಸ್ತು. ಬೆಳ್ಳಂಬೆಳಗ್ಗೆ ಮನೆಯ ಬಳಿಯ ತೋಟದಲ್ಲಿ ಇದನ್ನು ಕಂಡ ಆ ಮನೆ ಮಂದಿಗೆ ಆತಂಕ. ಏನೋ ಪ್ಯಾರಾಚೂಟ್ ಬಂದು ನಮ್ಮ ಮನೆಗೆ ಬಿದ್ದಿದೆ. ಬಿದ್ದಿದ್ದು ಎನು ಎನ್ನುವುದೂ ಗೊತ್ತಿಲ್ಲದೆ ಬಾಂಬ್ ನಂತಹ ಸಿಡಿಯುವ ವಸ್ತು ಇರಬಹುದಾ ಎಂಬ ಭಯ!

ಇದೆಲ್ಲಾ ಕಂಡು ಬಂದಿದ್ದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ. ಇಲ್ಲಿನ ನಿವಾಸಿ ಕಿಶೋರ್ ಅವರ ಮನೆಯ ತೋಟದಲ್ಲಿ ದೊಡ್ಡ  ಬಿಳಿ ಬಣ್ಣದ ಬಲೂನ್ ನೇತಾಡುತ್ತಿತ್ತು.

ಅದರ ರಿಸಿವರ್ ನಂತಹ ಉಪಕರಣ ಮಾತ್ರ ನೆಲದಲ್ಲಿ ನೆಲಕ್ಕೆ ಬಿದ್ದಿತ್ತು. ಇದೇನೋ ವಿಚಿತ್ರ ಎಂಬಂತೆ ನೋಡಲು ಜನರೂ ಬರುತ್ತಿದ್ದರು.

ನಿಜಕ್ಕೂ ಅಲ್ಲೇನಿತ್ತು?

ಬೋಳ ಗ್ರಾಮದ ಕಿಶೋರ್ ಅವರ ಮನೆಯ ಬಳಿ ಬಂದು ಬಿದ್ದಿದ್ದು ಆರ್ ಎಸ್ ಜಿ-20 ಎ ಜಿಪಿಎಸ್ ರೇಡಿಯೋ ಅನ್ವೇಷಕ ಎಂಬ ಸಾಧನ. ಇದನ್ನು ಗಾಳಿಯ ಗುಣಮಟ್ಟ ಅಳೆಯಲು ಬಳಸಲಾಗುತ್ತದೆ.

ದೊಡ್ಡದಾದ ಗಾಳಿ ಬಲೂನಿಗೆ ಅನ್ವೇಷಕ ಉಪಕರಣವನ್ನು ಕಟ್ಟಿ ಗಾಳಿಯಲ್ಲಿ ತೇಲಿ ಬಿಡಲಾಗುತ್ತದೆ. ಇದು ನೆಲದಿಂದ ಮೇಲಕ್ಕೆ ಹಾರಾಡುತ್ತಾ ವಿವಿಧ ಸ್ಥರಗಳ ಹವಾಮಾನ, ಗಾಳಿಯ ವೇಗ, ಉಷ್ಣಾಂಶ, ಆದ್ರತೆ, ಗಾಳಿಯ ಒತ್ತಡವನ್ನು ಲೆಕ್ಕಾಚಾರ ಹಾಕಿ ತನ್ನ ಕೇಂದ್ರಕ್ಕೆ ಕಳುಹಿಸಿಕೊಡುತ್ತದೆ.

ಕರ್ನಾಟಕದ ಎರಡು ಕಡೆ ಈ ಉಪಕರಣವನ್ನು ಹಾರಿ ಬಿಡಲಾಗುತ್ತದೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ಈ ಉಪಕರಣ ಹಾರಿ ಬಿಟ್ಟು ಮಾಹಿತಿ ಸಂಗ್ರಹಿಸುವ ಹವಾಮಾನ ಇಲಾಖೆಗೆ ಸೇರಿದ ಕೇಂದ್ರವಿದೆ.

ದೇಶವ್ಯಾಪಿಯಾಗಿ ಒಟ್ಟು 36 ಹವಾಮಾನ ಕೇಂದ್ರಗಳಿದ್ದು, ಏಕಕಾಲದಲ್ಲಿ ಬೆಳಿಗ್ಗೆ 4.30ಕ್ಕೆ ಈ ಉಪಕರಣವನ್ನು ಹಾರಿಬಿಡಲಾಗುತ್ತದೆ. ಈ ಮೂಲಕ ಮಾಹಿತಿ ಪಡೆದುಕೊಳ್ಳಲಾಗುತ್ತದೆ.

ಜನವಸತಿ ಪ್ರದೇಶದಲ್ಲಿ ಯಾಕೆ ಬೀಳುತ್ತದೆ?

ಸಾಮಾನ್ಯವಾಗಿ ಈ ಉಪಕರಣಗಳು ಸಮುದ್ರ ಅಥವಾ ಜನವಸತಿ ರಹಿತ ಸ್ಥಳಗಳಲ್ಲಿ ಪತನಗೊಳ್ಳುತ್ತದೆ. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಹೀಗೆ ಜನವಸತಿ ಕೇಂದ್ರಗಳಲ್ಲಿ ಬೀಳುತ್ತದೆ. ಈ ಹಿಂದೆ ಮಂಗಳೂರಿನ ನಂತೂರು, ಎಡ್ತೂರಿನಲ್ಲೂ ಇದೇ ರೀತಿ ಜನವಸತಿ ಕೇಂದ್ರದಲ್ಲಿ ಪತನವಾಗಿ ಆತಂಕ ಸೃಷ್ಟಿಯಾಗಿತ್ತು.

 

ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು, ಗ್ರಾಮ ಕಂದಾಯ ನಿರೀಕ್ಷಕರು ಭೇಟಿ ನೀಡಿದರು. ನಂತರ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಯಿತು.

ಟಾಪ್ ನ್ಯೂಸ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.