ಉಳ್ತೂರು-ಮಲ್ಯಾಡಿ: ಕೃಷಿ ಭೂಮಿ ಆವರಿಸುತ್ತಿದೆ ಅಂತರಗಂಗೆ

ಶಾಶ್ವತ ಪರಿಹಾರ ಕ್ರಮಕ್ಕೆ ಗ್ರಾಮೀಣ ರೈತರ ಆಗ್ರಹ

Team Udayavani, Jul 20, 2019, 5:04 AM IST

1807TKE1-1

ಆವರಿಸಿರುವ ಅಂತರಗಂಗೆ.

ಮ್ಯಾನ್‌ಸೋನಿಯಾ ಜಾತಿಯ ಸೊಳ್ಳೆಗಳು ಈ ಗಿಡದ ಆಶ್ರಯದಲ್ಲಿಯೇ ತನ್ನ ವಂಶಾಭಿವೃದ್ಧಿ ಮಾಡುತ್ತವೆ. ಕೇವಲ 24 ಗಂಟೆಗಳಲ್ಲಿ ಈ ಸೊಳ್ಳೆಯ ಲಾರ್ವಾದಿಂದ ಮರಿಗಳು ಯಥೇತ್ಛವಾಗಿ ಹೊರಬರುತ್ತವೆ. ಇದನ್ನ ನೀರಿನಿಂದ ಹೊರತೆಗೆದು ದಂಡೆಗಳಲ್ಲಿ ಒಣಗಿಸಿ ಅನಂತರ ಕೆಲವೊಂದು ರಾಸಾಯನಿಕ ಸಿಂಪಡಣೆ ಅಥವಾ ಸುಟ್ಟಾಗ ಮಾತ್ರ ಶಾಶ್ವತವಾಗಿ ಅಂತರಗಂಗೆಯನ್ನು ನಾಶ ಮಾಡಲು ಸಾಧ್ಯ.

ತೆಕ್ಕಟ್ಟೆ: ತಾಲೂಕಿನ ತೆಕ್ಕಟ್ಟೆ ಹಾಗೂ ಕೆದೂರು ಗ್ರಾ.ಪಂ. ವ್ಯಾಪ್ತಿಯ ಮಲ್ಯಾಡಿ, ಹಲ್ತೂರು, ಉಳ್ತೂರು ಹೊಳೆಸಾಲು ಭಾಗಗಳಲ್ಲಿ ಅಲ್ಲಲ್ಲಿ ಮತ್ತೆ ಅಂತರಗಂಗೆಗಳು ಕಾಣಿಸಿಕೊಂಡಿದ್ದು ಕೃಷಿ ಭೂಮಿಯನ್ನು ಆವರಿಸುವ ಭೀತಿ ಇಲ್ಲಿನ ಗ್ರಾಮೀಣ ರೈತರಲ್ಲಿದೆ. ವಿರಳವಾದ ಮಳೆಯ ಪರಿಣಾಮ ಅಂತರಗಂಗೆಗಳು ಉಳ್ತೂರಿನ ಕಿರು ಸೇತುವೆ ಸಮೀಪದಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ಅಪಾರ ಪ್ರಮಾಣದಲ್ಲಿ ಬಂದು ಶೇಖರಣೆಯಾಗಿದೆ. ಸುತ್ತಮುತ್ತಲಿನ ನೂರಾರು ಎಕರೆ ಕೃಷಿ ಭೂಮಿಯಲ್ಲಿ ಈಗಾಗಲೇ ನಾಟಿ ಕಾರ್ಯ ಪೂರ್ಣಗೊಂಡಿದೆ. ಒಮ್ಮೆಲೇ ಮಳೆಯ ಪ್ರಮಾಣ ಅಧಿಕವಾದರೆ ನಾಟಿ ಮಾಡಿದ ಸಸಿಗಳ ಮೇಲೆ ಬಂದೆರಗಿ ಕೃಷಿ ನಾಶವಾಗುವ ಹೆಚ್ಚಿನ ಸಾಧ್ಯತೆಗಳಿವೆ.

ಅಂತರಗಂಗೆ ಕೃಷಿಭೂಮಿ ಆವರಿಸುವ ಆತಂಕ
ಉಳ್ತೂರು, ಮಲ್ಯಾಡಿ, ಬೇಳೂರು ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿದ್ದ ಆವೆಮಣ್ಣಿನ ಗಣಿಗಾರಿಕೆ (ಕೊಜೆ)ಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗುತ್ತಿದ್ದು ಅದರಲ್ಲಿ ಅಂತರಗಂಗೆಗಳು ದುರ್ಬೀಜವಾಗಿ ಹರಡುತ್ತಿವೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸುತ್ತಮುತ್ತಲಿನ ನೂರಾರು ಎಕರೆ ಕೃಷಿಭೂಮಿಯನ್ನು ಆವರಿಸುವ ಆತಂಕ ಇಲ್ಲಿನ ಕೃಷಿಕರಲ್ಲಿ ಎದುರಾಗಿದೆ.

ಕೃಷಿ ಭೂಮಿಯಲ್ಲಿ ನೀರಿನ ಪ್ರಮಾಣ ಕುಸಿತ
ಈ ಬಾರಿ ಮಳೆಯ ಪ್ರಮಾಣ ಸಂಪೂರ್ಣ ಇಳಿಮುಖವಾಗಿದ್ದು,ಹಲ್ತೂರು ಬೈಲು, ಉಳೂ¤ರು ಮೂಡುಬೆಟ್ಟು ಸೇರಿದಂತೆ ನಾಟಿ ಮಾಡಿದ ಕೃಷಿಭೂಮಿಯಲ್ಲಿ ಈಗಾಗಲೇ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಒಂದೆಡೆ ಮಳೆಯ ಕೊರತೆ ಮತ್ತೂಂದೆಡೆಯಲ್ಲಿ ಒಮ್ಮೆಲೇ ಮಳೆಯ ತೀವ್ರತೆ ಅಧಿಕವಾದಾಗ ಅಂತರಗಂಗೆಗಳು ನಾಟಿ ಮಾಡಿದ ಸಸಿಗಳ ಬಂದು ಎರಗುವ ಸಾಧ್ಯತೆ ಹೆಚ್ಚಾಗಿದೆ.

ಅಂತರಗಂಗೆ
ಆರರಿಂದ ಎಂಟು ಎಲೆಗಳಿರುವ ಈ ಗಿಡ ನೀರಿನ ಮೇಲ್ಭಾಗದಲ್ಲಿ ತೇಲಿಕೊಂಡು ಬೇರುಗಳು ನೀರಿನ ಒಳಭಾಗದಲ್ಲಿ ಇಳಿಬಿಡುವ ಅಲಂಕಾರಿಕ ಗಿಡವನ್ನು ವಾಟರ್‌ ಲೆಟ್ಯೂಸ್‌ (Water lettuce )ಅಥವಾ ಅಂತರಗಂಗೆ ಎಂದು ಕರೆಯಲಾಗುತ್ತದೆ. ಈ ಗಿಡದ ಮೂಲ ನೈಲ್‌ ನದಿಯ ತಟದಲ್ಲಿ ಕಂಡು ಬಂದಿದ್ದು ಅಲ್ಲಿಂದ ಮಾನವನ ಮೂಲಕವೇ ಈ ಗಿಡ ಭಾರತವನ್ನು ಪ್ರವೇಶಿಸಿದೆ ಎಂದು ಹೇಳಲಾಗುತ್ತಿದೆ. ಹಿಂದೆ ಅಲಂಕಾರಿಕಾ ಗಿಡವಾಗಿ ಬಳಕೆಯಾಗುತ್ತಿದ್ದ ಈ ಗಿಡ ಮನೆಯ ಕುಡಿಯುವ ನೀರಿನ ಬಾವಿ, ಹೂ ಕುಂಡಗಳಲ್ಲಿ ಬೆಳಸಲಾಗುತ್ತಿತ್ತು. ಆದರೆ ಅದೇ ಅಲಂಕಾರಿಕ ಗಿಡ ಕಳೆಯಾಗಿ ನೀರಿನ ಸೆಲೆ ಕೆರೆಗಳನ್ನು ಸೇರಿ ಇಂದು ಸಂಪೂರ್ಣವಾಗಿ ಬಯಲನ್ನು ವ್ಯಾಪಿಸುತ್ತಿದೆ. ನೀರಿನ ಮೇಲ್ಪದರದಲ್ಲಿ ದಟ್ಟವಾಗಿ ಬೆಳೆಯುವ ಈ ಗಿಡ ಆಮ್ಲಜನಕ ಹಾಗೂ ಸೂರ್ಯನ ಬೆಳಕು ನೀರಿನ ಆಳಕ್ಕೆ ಇಳಿಯದಂತೆ ತಡೆಯುವ ಮೂಲಕ ನೀರಿನಲ್ಲಿರುವ ಮೀನುಗಳು ಹಾಗೂ ಇತರ ಜಲಚರಗಳ ಸಾವಿಗೆ ಪರೋಕ್ಷ ಕಾರಣವಾಗುತ್ತದೆ.

ಹೊಳೆ ಸಾಲು ಹೂಳೆತ್ತಬೇಕಿದೆ
ಪ್ರತಿ ವರ್ಷದಂತೆ ಅಂತರಗಂಗೆಯ ಜತೆಗೆ ಮುಳ್ಳು ಜಾತಿಯ ವಿಷಕಾರಿ ಎಲೆ ಹೊಂಡದಲ್ಲಿ ಅಲ್ಲಲ್ಲಿ ಬೆಳೆದು ನಿಂತಿದ್ದು ಮಳೆ ಬಂದಾಗ ಕೃಷಿ ಭೂಮಿಯನ್ನು ಆವರಿಸುತ್ತಿದೆ. ಹೊಳೆ ಸಾಲುಗಳನ್ನು ಸಮರ್ಪಕವಾಗಿ ಹೂಳೆತ್ತುವ ಮಹತ್ವಾಕಾಂಕ್ಷಿ ಯೋಜನೆ ಕಾರ್ಯರೂಪಕ್ಕೆ ಬಂದರೆ ಮಾತ್ರ ಅಂತರಗಂಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈಗಾಗಲೇ ಎಲ್ಲೆಡೆಯಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದ್ದು ಒಮ್ಮೆಲೇ ಮಳೆಯ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡರೆ ಅಂತರಗಂಗೆ ಕೃಷಿಭೂಮಿಯನ್ನು ಆವರಿಸುವ ಆತಂಕವಿದೆ.
– ರವೀಂದ್ರ ಶೆಟ್ಟಿ ಕಟ್ಟೆಮನೆ
ಕೃಷಿಕರು, ಉಳ್ತೂರು

ಮತ್ತೆ ಚಿಗುರಿದ ಅಂತರಗಂಗೆ
ಹಿಂದಿನ ಕೆಲವು ವರ್ಷಗಳನ್ನು ನೋಡಿದರೆ ಈ ಬಾರಿ ಅಂತರಗಂಗೆಯ ಪ್ರಮಾಣ ಬಹಳ ವಿರಳವಾಗಿದೆ, ಮಳೆ ಪ್ರಮಾಣ ವಿರಳವಾದ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಕೊಜೆ ಹೊಂಡದಲ್ಲಿದ್ದ ಒಣಗಿದ ಅಂತರಗಂಗೆ ಮತ್ತೆ ಚಿಗುರಿದೆ. ಇದರ ನಿಯಂತ್ರಣಕ್ಕೆ ವೈಜ್ಞಾನಿಕವಾಗಿ ಹೊಳೆಯನ್ನು ಸಮರ್ಪಕವಾಗಿ ಹೂಳೆತ್ತಿದಾಗ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.
– ಜಯರಾಮ ಶೆಟ್ಟಿ, ಪಿಡಿಒ, ಗ್ರಾಮ ಪಂಚಾಯತ್‌ ಕೆದೂರು

-ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.