ದೇಶ ಕಾಯುವ ಸೈನಿಕನಿಗೆ ಜನ ಸೇವೆಯ ಕನಸು


Team Udayavani, Feb 13, 2019, 1:00 AM IST

nagesh-army-13-02.jpg

ಪುತ್ತೂರು: ಬಾಲ್ಯದಿಂದಲೇ ಕಂಡು – ಉಂಡಿದ್ದ ಬಡತನದ ನಡುವೆಯೂ ದೇಶಸೇವೆಯ ಸಂಕಲ್ಪ ಬಲವಾಗಿತ್ತು. ಅದರಿಂದಾಗಿ ಭಾರತೀಯ ಸೇನೆಯಲ್ಲಿ ಅವಕಾಶ ಸಿಕ್ಕಿತು. ಕನಸುಗಳು ಇನ್ನೂ ಮುಗಿದಿಲ್ಲ; ಭವಿಷ್ಯದಲ್ಲಿ ಭಾರತೀಯ ಆಡಳಿತ ಸೇವೆ ಸೇರಬೇಕು, ಅಧಿಕಾರಿಯಾಗಿ ಜನಸೇವೆ ಮಾಡಬೇಕು ಎಂಬ ಹಂಬಲವಿದೆ. ಪುತ್ತೂರು ತಾಲೂಕಿನ ನೆಲ್ಯಾಡಿ ಭಾಗ್ಯಜಾಲು ನಿವಾಸಿ ಕುಶಾಲಪ್ಪ ಗೌಡ ಮತ್ತು ದೇವಕಿ ಅವರ ತೃತೀಯ ಪುತ್ರ ನಾಗೇಶ್‌ ಕುಮಾರ್‌. ಇವರಿಗೆ ಇಬ್ಬರು ಸಹೋದರಿಯರು ಮತ್ತು ಓರ್ವ ಸಹೋದರ. ತಂದೆ ಕೂಲಿ ಕೆಲಸ ಮಾಡಿ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇಬ್ಬರು ಸಹೋದರಿಯರಿಗೆ ವಿವಾಹವಾಗಿದೆ.

ನಾಗೇಶ್‌ ಕುಮಾರ್‌ ಅರಸಿನಮಕ್ಕಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಪಡೆದಿದ್ದಾರೆ. ಆ ಬಳಿಕ ತಂದೆ ಕೆಲಸ ಅರಸಿಕೊಂಡು ಮೂಲ್ಕಿಯತ್ತ ತೆರಳಿದಾಗ ನಾಗೇಶ್‌ ಮೂಲ್ಕಿ ವಿಜಯಾ ಕಾಲೇಜು ಸೇರಿಕೊಂಡು ಪದವಿಪೂರ್ವ ವಿದ್ಯಾಭ್ಯಾಸ ಮಾಡಿದರು. ಅನಂತರ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದರು. ಬಳಿಕ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿ ಆಯ್ಕೆಯಾದರು. ಹವಾಲ್ದಾರ್‌ ಆಗಿ ಸೈನ್ಯದಲ್ಲಿದ್ದುಕೊಂಡೇ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡ ಸಾಧನೆ ಇವರದು.


ಬಡತನವೇ ಬಂಡವಾಳ

ನಾಗೇಶ್‌ ಕುಮಾರ್‌ ಅವರಲ್ಲಿದ್ದದ್ದು ಬಡತನದಿಂದ ಮೇಲೆ ಬರುವ ಛಲ. ಮನೆಯಲ್ಲಿ ಅನುಕೂಲಕರ ವಾತಾವರಣ ಇಲ್ಲದಿದ್ದಾಗ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಅಜ್ಜಿ ಮನೆಯಲ್ಲಿದ್ದು ಪೂರೈಸಿದ್ದರು. ಶೈಕ್ಷಣಿಕ ಖರ್ಚುವೆಚ್ಚಗಳಿಗೆ ಹಣ ಹೊಂದಿಸುವುದಕ್ಕಾಗಿ ಅಡಿಕೆ ಸುಲಿಯುವ ಕೆಲಸಕ್ಕೆ ಹೋಗುತ್ತಿದ್ದರು. ಮೂಲ್ಕಿಯಲ್ಲಿ ಪಿಯು ವಿದ್ಯಾಭ್ಯಾಸ ಮಾಡುತ್ತಿದ್ದಾಗ ತೋಟದ ಕೆಲಸ, ಜಾನುವಾರುಗಳ ನಿರ್ವಹಣೆ ಕೈಗೊಂಡು ಆದಾಯ ಗಳಿಸುತ್ತಿದ್ದರು.

ಉಗ್ರರ ದಾಳಿಯ ನೆನಪು
ಕಾಶ್ಮೀರದ ಸಾಂಜುವಾನ್‌ ಪ್ರದೇಶದಲ್ಲಿ 7 ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ನೆನಪು ನಾಗೇಶ್‌ ಸ್ಮರಣೆಯಲ್ಲಿ ಚಿರಸ್ಥಾಯಿ. ಮುಂಜಾವ 3 ಗಂಟೆಯ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದರು. 24 ಗಂಟೆಗಳ ಕಾಲ ಸೈನಿಕರ ಕ್ಯಾಂಪನ್ನು ವಶದಲ್ಲಿ ಇರಿಸಿಕೊಂಡಿದ್ದರು. ನಾಗೇಶ್‌ ಕೂಡ ಇದ್ದ ಸೈನಿಕರ ತಂಡ ಉಗ್ರರ ವಿರುದ್ಧ ನಿರಂತರ ಹೋರಾಟ ಸಂಘಟಿಸಿತ್ತು. ಈ ದಾಳಿಯಲ್ಲಿ ನಾಲ್ವರು ಸೈನಿಕರು ಹಾಗೂ ಸೈನಿಕರ ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿದ್ದು ಅತ್ಯಂತ ದುಃಖದ ಘಟನೆ ಎಂದು ನೆನಪಿಸಿಕೊಳ್ಳುತ್ತಾರೆ. ಅನಂತರ ಎನ್‌ಎಸ್‌ಜಿ ಕಮಾಂಡೋ, ವಿಶೇಷ ಪಡೆಯ ಸೈನಿಕರು ದಾಳಿ ನಡೆಸಿ ಎಲ್ಲ ಏಳು ಉಗ್ರರನ್ನೂ ಸದೆಬಡಿದರು. ಆ ಬಳಿಕ ಅಲ್ಲಿ  ದಾಳಿ ಆಗಿಲ್ಲ ಎನ್ನುತ್ತಾರೆ ನಾಗೇಶ್‌ ಕುಮಾರ್‌.


ಉನ್ನತ ಸೇವೆಯ ಕನಸು

ನಾಗೇಶ್‌ ಕುಮಾರ್‌ ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲೇ ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಕನಸು ಕಂಡು ಸಿದ್ಧತೆ ನಡೆಸುತ್ತಿದ್ದರು. ಅನಂತರ ಸೈನ್ಯದಲ್ಲಿ  ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದರೂ ಕಲಿಕೆಯನ್ನು ಬಿಟ್ಟಿಲ್ಲ. ಸೈನ್ಯದಲ್ಲಿದ್ದುಕೊಂಡೇ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಆಡಳಿತ ಸೇವೆಯ ಅಧಿಕಾರಿಯಾಗಬೇಕೆನ್ನುವ ಬಯಕೆ ಅವರಿಗಿದೆ. ಸಮಯ ಸಿಕ್ಕಿದಾಗ ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ದಿಲ್ಲಿಯ ಚಾಣಕ್ಯ ತರಬೇತಿ ಸಂಸ್ಥೆಯಲ್ಲಿ  ತರಬೇತಿ ಪಡೆಯುವ ಕನಸನ್ನೂ ಇರಿಸಿಕೊಂಡಿದ್ದಾರೆ.

ಸೇನೆ ಸೇರಬೇಕಾದರೆ ಸೂಕ್ತ ರೀತಿಯ ಸಿದ್ಧತೆ, ಪ್ರಯತ್ನವೂ ಬೇಕು. ದೈಹಿಕ ಕ್ಷಮತೆಯ ಜತೆಗೆ ತಾಂತ್ರಿಕ ಕೌಶಲವೂ ಸೈನ್ಯದಲ್ಲಿ ಅಗತ್ಯವಾಗಿರುವುದರಿಂದ ಈ ನಿಟ್ಟಿನಲ್ಲಿಯೂ ಅವಕಾಶಗಳಿವೆ. ಸಾಧನೆಯ ಛಲ ನಮ್ಮಲ್ಲಿದ್ದಾಗ ಯಾವ ಅಡೆತಡೆಯೂ ಬಾಧಿಸದು ಎನ್ನುವುದನ್ನು ಯುವ ಸಮುದಾಯ ಅರಿತುಕೊಳ್ಳಬೇಕು. 
– ನಾಗೇಶ್‌ ಕುಮಾರ್‌ ಹವಾಲ್ದಾರ್‌, ಭಾರತೀಯ ಸೇನೆ

ಮನೆಯಲ್ಲಿ ಸಾಕಷ್ಟು  ಬಡತನವಿತ್ತು. ಈ ಕಾರಣದಿಂದ ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆ ಹೊತ್ತುಕೊಂಡಿದ್ದ  ನಾಗೇಶ್‌ ಎಳವೆ ಯಲ್ಲಿಯೇ ಕೂಲಿ ಕೆಲಸ ಮಾಡಿ ಕೊಂಡು ಶಿಕ್ಷಣ ಪಡೆದಿದ್ದ. ದೇಶ ಸೇವೆ ಮಾಡಬೇಕೆಂಬ ಹಂಬಲವನ್ನು ಛಲದಿಂದ ಪೂರೈಸಿದ್ದಾನೆ. ನಮಗೆಲ್ಲ ರಿಗೂ ಖುಷಿ ಹಾಗೂ ಹೆಮ್ಮೆ ಇದೆ.
– ದೇವಕಿ ನಾಗೇಶ್‌ ಕುಮಾರ್‌ ಅವರ ತಾಯಿ

– ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.