ನಿಯಮ ಮೀರಿ ಮರಳುಗಾರಿಕೆ ಸಲ್ಲದು: ಜಯಪ್ರಕಾಶ್ ಹೆಗ್ಡೆ
Team Udayavani, Oct 22, 2019, 3:26 AM IST
ಬ್ರಹ್ಮಾವರ: ಈ ಹಿಂದೆ ಅವ್ಯಾಹತ ಮರಳುಗಾರಿಕೆ ನಡೆಸಿದ್ದರಿಂದಲೇ ಮರಳುಗಾರಿಕೆ ಸ್ಥಗಿತಗೊಂಡಿತು ಈಗ ಮತ್ತೆ ಸಿಆರ್ಝಡ್ ವ್ಯಾಪ್ತಿಯಲ್ಲಿ ನಿಯಮ ಮೀರಿ ಮರಳುಗಾರಿಕೆ ನಡೆಸುತ್ತಿರುವ ದೂರು ಬರುತ್ತಿದ್ದು, ಮುಂದೆ ಮರಳುಗಾರಿಕೆಗೆ ತೊಂದರೆಯಾದರೆ ಪರವಾನಿಗೆದಾರರೇ ಹೊಣೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯ ಪಟ್ಟರು. ಅವರು ಸೋಮ ವಾರ ಬ್ರಹ್ಮಾವರದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ದರು.
ಕೆಲವು ಮರಳು ಪರವಾನಿಗೆದಾರರ ದುರಾಸೆಯಿಂದ ಸಮಸ್ತ ನಾಗರಿಕರಿಗೆ ತೊಂದರೆಯಾಗುತ್ತದೆ. ಮರಳುಗಾರಿಕೆ ಅಕ್ರಮದಿಂದಾಗಿ ಮತ್ತೆ ನಿಂತರೆ ಉಡುಪಿ ಜಿಲ್ಲೆಯ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.
ಪರಿಸರ ಸೂಕ್ಷ್ಮ ವಲಯ ಘೋಷಣೆ ಪರಿಣಾಮ ಗಡಿಯಿಂದ 10 ಕಿ.ಮೀ. ವರೆಗೆ ಆಗುತ್ತದೆ. ಆ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತದೆ. ಕ್ರಷರ್ ಕೂಡ ಬಂದ್ ಮಾಡಬೇಕಾಗುತ್ತದೆ. ಇದರಿಂದ ಮುಂದೆ ಮರಳು ಸಿಕ್ಕರೂ ಜಲ್ಲಿ ಸಿಗುವುದಿಲ್ಲ. ಈ ಉದ್ದೇಶಕ್ಕಾಗಿ ಕೇಂದ್ರ ಸಚಿವರನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಕರಡು ಅಧಿ ಸೂಚನೆ ಪರಾಮರ್ಶೆ ಬಳಿಕ ಅ ಧಿಕೃತ ಅಧಿ ಸೂಚನೆ ಹೊರಡಲಿದೆ. ಆ ಬಳಿಕ ಪರಿಸರ ಸೂಕ್ಷ್ಮ ವಲಯದಿಂದ 1 ಕಿ.ಮೀ. ವರೆಗೆ ಮಾತ್ರ ನಿಷೇಧ ಇರುತ್ತದೆ ಎಂದರು.
ಕುಂದಾಪುರ ಫ್ಲೈ ಓವರ್ ವಿಳಂಬ ಕುರಿತು ನವಯುಗ ಕಂಪೆನಿಯನ್ನು ಸಂಪರ್ಕಿಸಿದ್ದು, ಶೀಘ್ರ ಕಾರ್ಯ ಆರಂಭಿಸುವುದಾಗಿ ತಿಳಿಸಿರುವುದಾಗಿ ಹೆಗ್ಡೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ