ಶಂಕರನಾರಾಯಣ: ರಿಕ್ಷಾ ಚಾಲಕರಿಗಿಲ್ಲ ಸೂರು

ಬಿಸಿಲು, ಮಳೆಗೆ ದೇಹದಂಡನೆ: ಕೇಳುವವರಿಲ್ಲ ಇವರ ಗೋಳು

Team Udayavani, Mar 2, 2020, 5:23 AM IST

Rickshaw-Stand

ಕುಂದಾಪುರ: ಶಂಕರನಾರಾಯಣ ಬಸ್‌ ನಿಲ್ದಾಣ ಸುಸಜ್ಜಿತವಾಗಿ ನಿರ್ಮಾಣ ಗೊಂಡಿದ್ದರೂ ರಿಕ್ಷಾ ಸ್ಟ್ಯಾಂಡ್‌ ನಿಲ್ದಾಣದ ಸಮೀಪ ಇಲ್ಲದೆ ಚಾಲಕರು ಹಾಗೂ ಪ್ರಯಾಣಿಕರು ಪರದಾಡುವಂತೆ ಆಗಿದೆ. ದೂರದ ಊರಿಂದ ಸಾಮಾನು ಸರಂಜಾಮುಗಳೊಂದಿಗೆ ಇಳಿವ ಪ್ರಯಾಣಿಕರು, ಅಶಕ್ತರನ್ನು ಬಸ್‌ ನಿಲ್ದಾಣದಿಂದ ಹೊರಗಡೆ ಕೈ ಹಿಡಿದು ಲಗೇಜುಗಳನ್ನು ತಾವೇ ಎತ್ತಿಕೊಂಡು ರಿಕ್ಷಾಕ್ಕೆ ಹಾಕಿ ಮುಂದಕ್ಕೆ ಹೋಗಬೇಕಾದ ಪ್ರಮೇಯ ಶಂಕರನಾರಾಯಣ ರಿಕ್ಷಾ ಚಾಲಕರದ್ದು. ಕಾರಣ ಬಸ್‌ ನಿಲ್ದಾಣದ ಒಳಗೆ ರಿಕ್ಷಾಗಳಿಗೆ ಪ್ರವೇಶ ನಿರ್ಬಂಧ.

ರಿಕ್ಷಾಗಳೇ ವರದಾನ
ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ತಮ್ಮ ಮನೆಮಠಗಳನ್ನು ಬಿಟ್ಟು ದುಡಿಮೆಯ ಜತೆಗೆ ಮಾನವೀಯ ಮೌಲ್ಯಗಳೊಂದಿಗೆ ಜನಸೇವೆಯಲ್ಲಿ ತೊಡಗಿರುವವರು ರಿಕ್ಷಾ ಚಾಲಕರು. ಹಳ್ಳಿ ಹಳ್ಳಿಗಳಲ್ಲೂ ತಮ್ಮ ದುಡಿಮೆ ಬಾಡಿಗೆ ಜತೆಗೆ ಸ್ನೇಹ ಹಸ್ತವನ್ನು ಚಾಚುತ್ತಾ ಆಬಾಲ ವೃದ್ಧರು, ಶಾಲಾ ಮಕ್ಕಳು, ರೋಗಿಗಳು, ಅಂಗವಿಕಲರು, ಮಧ್ಯಮ ವರ್ಗ ದವರಿಗೆ ಇಂದು ರಿಕ್ಷಾಗಳೇ ವರದಾನ.

ರಿಕ್ಷಾ ತಂಗುದಾಣ ಇಲ್ಲ
ಜಿಲ್ಲೆಯ ಎಲ್ಲಾ ಕಡೆಯೂ ಜನಪ್ರತಿನಿಧಿಗಳ ಅನುದಾನದೊಂದಿಗೆ ಸುಸಜ್ಜಿತ ರಿಕ್ಷಾ ನಿಲ್ದಾಣವನ್ನು ಅಲ್ಲಲ್ಲಿ ನೋಡಿದರೆ, ಶಂಕರನಾರಾಯಣ ರಿಕ್ಷಾ ಚಾಲಕರಿಗೆ ಇನ್ನೂ ರಿಕ್ಷಾ ನಿಲ್ದಾಣದ ಭಾಗ್ಯ ಸಿಕ್ಕಿಲ್ಲ. ಬಿಸಿಲು, ಮಳೆ, ಸಿಡಿಲು ಬಂದಾಗ ಎಲ್ಲಾದರೂ ಮರಗಳ ನೆರಳು, ಮರದ ಗೆಲ್ಲಿನ ಅಡಿಯಲ್ಲಿ ನಿಂತು ಅಪಾಯದೊಂದಿಗೆ ಜೀವ ಹಾಗೂ ರಿಕ್ಷಾದ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಪರಿಸ್ಥಿತಿಯಲ್ಲಿದ್ದಾರೆ.

ಶಂಕರನಾರಾಯಣದಲ್ಲಿ 32ಕ್ಕೂ ಹೆಚ್ಚು ಮಂದಿ ರಿಕ್ಷಾ ಚಾಲಕರಿದ್ದೇವೆ. ಇದರಲ್ಲಿ ಹೆಚ್ಚಿನವರು ಸಾಲ ಮಾಡಿ ಸ್ವಂತ ರಿಕ್ಷಾ ಹೊಂದಿದ್ದೇವೆ. ಇಲ್ಲಿಯವರೆಗೆ ನಮಗೆ ಯಾವುದೇ ಸೂರು (ನಿಲ್ದಾಣ) ಅನುದಾನ ಸರಕಾರದಿಂದ ಬಂದಿಲ್ಲ. ಪ್ರತಿ ರಿಕ್ಷಾದಿಂದ 15 ರೂ. ಶುಲ್ಕ ಗ್ರಾಮ ಪಂಚಾಯತ್‌ಗೆ ಸಲ್ಲಿಕೆ ಆಗು ತ್ತದೆ. ಚುನಾವಣೆ ಹತ್ತಿರ ಬಂದಾಗ ರಾಜಕೀಯ ಸೋಗಿನ ಕೆಲವು ಮಂದಿ ಮೀಟರ್‌ ಟೇಪ್‌ ತೆಗೆದು ಬಂದು ಅನು
ದಾನ ಬಂದಿದೆ, ಕೂಡಲೇ ರಿಕ್ಷಾನಿಲ್ದಾಣ ಆಗುತ್ತದೆ ಎಂದು ವಿವಿಧ ಕಡೆಗಳಲ್ಲಿ ಅಳತೆ ಮಾಡಿ ಮುಂದೆ ಮಾಯ ವಾಗುತ್ತಾರೆ ಎನ್ನುತ್ತಾರೆ ಇಲ್ಲಿನ ಚಾಲಕರು.

ಶಾಸಕರ ಗಮನಕ್ಕೆ ತರಲಾಗುವುದು
ಜಿಲ್ಲೆಯ ಎಲ್ಲ ಕಡೆ ಜನಪ್ರತಿನಿಧಿ ಗಳ ಅನುದಾನದೊಂದಿಗೆ ಜನಸೇವೆ ಮಾಡುವ “ಆಟೋ ರಾಜ’ ರಿಕ್ಷಾ ಚಾಲಕರಿಗೆ ನಿಲ್ದಾಣದ ಭಾಗ್ಯ ಇದೆ. ಶಂಕರನಾರಾಯಣಕ್ಕೆ ಅನುದಾನ ಯಾಕೆ ಬಂದಿಲ್ಲವೆಂದು ತಿಳಿದು ಬಂದಿಲ್ಲ. ಜಿಲ್ಲಾಡಳಿತ ಹಾಗೂ ಶಾಸಕರ ಗಮನಕ್ಕೆ ಶೀಘ್ರ ತರಲಾಗುವುದು ಎನ್ನುತ್ತಾರೆ ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಅವರು.

ನಮ್ಮ ಗೋಳು ಕೇಳುವವರಿಲ್ಲ
ಹಲವು ವರ್ಷಗಳಿಂದ 32 ಮಂದಿ ರಿಕ್ಷಾ ಚಾಲಕ – ಮಾಲಕರು ಶಂಕರನಾರಾಯಣ ಬಸ್‌ ನಿಲ್ದಾಣದ ಸಮೀಪ ಜೀವನೋಪಾಯಕ್ಕಾಗಿ ರಿಕ್ಷಾ ಇಟ್ಟು ಕೊಂಡಿದ್ದೇವೆ. ಪರ ಊರಿಗೆ ಹೋಗುವ , ಬರುವ ಪ್ರಯಾಣಿಕರ ಹಿತಾಸಕ್ತಿ ಎಷ್ಟೇ ರಾತ್ರಿಯಾದರೂ ಗಮನಿಸಲೇ ಬೇಕು. ಬಸ್‌ ನಿಲ್ದಾಣದ ಒಳಗೆ ನಮಗೆ ಪ್ರವೇಶವಿಲ್ಲ, ಹೊರಗಡೆ ಸೂಕ್ತ ಸೂರು ಇಲ್ಲ, ಬಸ್‌ ನಿಲ್ದಾಣದ ಹತ್ತಿರ ನಮಗೆ ಸೂರಿನ ವ್ಯವಸ್ಥೆ ಮಾಡಬೇಕು. ನಮ್ಮ ಗೋಳು ಕೇಳುವವರಿಲ್ಲವಾಗಿದೆ-ಶಂಕರ ಶೆಟ್ಟಿಗಾರ, ಅಧ್ಯಕ್ಷ, ರಿಕ್ಷಾ ಚಾಲಕ – ಮಾಲಕರ ಸಂಘ, ಶಂಕರನಾರಾಯಣ.

ನಿಲ್ದಾಣ ಕಲ್ಪಿಸಲಿ
ಬಿಸಿಲಿಗೆ ಮೈಯೊಡ್ಡಿ ಮಳೆಗಾಲದಲ್ಲಿ ಹಲವು ವರ್ಷಗಳಿಂದ ನೆನೆಯುತ್ತಿದ್ದೇವೆ. ಬಸ್‌ ನಿಲ್ದಾಣದ ಪಕ್ಕ ಶ್ರೀಕೃಷ್ಣ ಕಾಂಪ್ಲೆಕ್ಸ್‌ , ಸದಾಶಿವ ನಾಯಕ್‌ ಅಂಗಡಿ ಮಧ್ಯ 6 – 7 ರಿಕ್ಷಾ ನಿಲ್ಲಲು ಅನುಕೂಲವಿದೆ. ಸ್ಥಳೀಯ ಆಡಳಿತ ಪ್ರಯಾಣಿಕರ ಅನುಕೂಲ ಕೋಸ್ಕರ ನಮಗೆ ಸೂರು ಕಲ್ಪಿಸಿದರೆ ಬಸ್ಸಿನಿಂದ ಇಳಿಯುವ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ.ಈ ಬಗ್ಗೆ ಸ್ಥಳೀಯಾಡಳಿತ ಗಮನ ಹರಿಸಬೇಕು.
– ಮಹಾಬಲ ಕುಲಾಲ, ಗೌರವ ಅಧ್ಯಕ್ಷ
ರಿಕ್ಷಾ ಚಾಲಕ – ಮಾಲಕರ ಸಂಘ, ಶಂಕರನಾರಾಯಣ

ಜಿಲ್ಲೆಯ ಎಲ್ಲಾ ಕಡೆ ಜನಪ್ರತಿನಿಧಿಗಳ ಸಹಾಯದಿಂದ ಸುಸಜ್ಜಿತ ರಿಕ್ಷಾ ನಿಲ್ದಾಣ ಸ್ಥಾಪನೆಯಾಗಿದೆ. ಆದರೆ ಶಂಕರನಾರಾಯಣ ರಿಕ್ಷಾ ಚಾಲಕರಿಗೆ ಮಾತ್ರ ಈ ಭಾಗ್ಯವಿಲ್ಲ. ಇವರು ಮಳೆ, ಬಿಸಿಲಿಗೆ ಮರಗಳ ನೆರಳು, ಮರದ ಗೆಲ್ಲಿನ ಅಡಿಯಲ್ಲಿ ನಿಂತು ಅಪಾಯಕಾರಿಯಾಗಿ ತಮ್ಮ ಜೀವ ಮತ್ತು ರಿಕ್ಷಾವನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ಇಲ್ಲಿಯ ರಿಕ್ಷಾ ಚಾಲಕರಿಗೆ ಒಂದು ಸುಸಜ್ಜಿತ ರಿಕ್ಷಾ ನಿಲ್ದಾಣ ಕಲ್ಪಿಸಿಕೊಡುವುದು ಅಗತ್ಯ.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.