ಕಡಲಾಮೆ ರಕ್ಷಣೆ : ಕಾರ್ಯಾಗಾರ
Team Udayavani, Feb 12, 2019, 1:00 AM IST
ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಡಲಾಮೆ ರಕ್ಷಣೆ ಕುರಿತು ಮಾಹಿತಿ ಕಾರ್ಯಾಗಾರವು ಎನ್ನೆಸ್ಸೆಸ್, ರೆಡ್ಕ್ರಾಸ್ ಹಾಗೂ ರೋವರ್-ರೇಂಜರ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಎಫ್.ಎಸ್.ಎಲ್. ಇಂಡಿಯಾ ಸಂಸ್ಥೆಯ ಯೋಜನಾ ನಿರ್ದೇಶಕ ಮಂಜುನಾಥ, ವೆಂಕಟೇಶ್ ಮತ್ತು ಸ್ವಯಂಸೇವಕ ಸಂಶೋಧನಾ ವಿದ್ಯಾರ್ಥಿಗಳಾದ ಎಮಿಲ್, ಮಿಲಿನಾ ಹಾಗೂ ವಿಕ್ಟೋರಿಯಾ ವಿದ್ಯಾರ್ಥಿಗಳಿಗೆ, ಕಡಲಾಮೆ ಹುಟ್ಟು, ಬೆಳವಣಿಗೆ, ಸಂತಾನಾಭಿವೃದ್ಧಿ ಹಾಗೂ ಉಪಯೋಗಗಳು, ಆಹಾರ ಪದ್ದತಿ, ಇವು ಗಳ ನಾಶಕ್ಕೆ ಕಾರಣವಾಗಿರುವ ಅಂಶ, ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿದರು.
ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಧಿಕಾರಿ ನಾಗರಾಜ ವೈದ್ಯ ,ರೋವರ್ಸ್ ಲೀಡರ್ ಮಂಜುನಾಥ ಆಚಾರಿ ಹಾಗೂ ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ಕಚೇರಿ ಸಹಾಯಕ ಸುಜೀಂದ್ರ ಮುಂತಾದವರು ಉಪಸ್ಥಿತರಿದ್ದರು.ಸಂಚಾಲಕ ಪ್ರಶಾಂತ್ ನೀಲಾವರ ಪ್ರಾಸ್ತಾವಿಕವಾಗಿ ಮಾತನಾಡಿದರು, ಎನ್ನೆಸ್ಸೆಸ್ ಯೋಜನಾಧಿ ಕಾರಿ ರಾಜಣ್ಣ ಸ್ವಾಗತಿಸಿ, ಮುರುಳಿ ಎನ್. ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ