ಪಥ ಬದಲಿಸಿದ ನಕ್ಸಲರಿಗಾಗಿ ಪೊಲೀಸರಿಂದ ಶೋಧ


Team Udayavani, Mar 11, 2019, 1:00 AM IST

naxal.jpg

ಕುಂದಾಪುರ: ಒಂದಷ್ಟು ಕಾಲ ತಣ್ಣಗಿದ್ದ ನಕ್ಸಲ್‌ ಚಟುವಟಿಕೆ ಮತ್ತೆ ಗರಿಗೆದರಿದಂತಿದೆ. ಕೇರಳದ ವಯನಾಡಿನ ರೆಸಾರ್ಟ್‌ ಒಂದರಲ್ಲಿ ನಕ್ಸಲ್‌ ಮುಖಂಡ ಸಿ.ಪಿ. ಜಲೀಲ್‌ ಎಂಬಾತನನ್ನು ಎನ್‌ಕೌಂಟರ್‌ ಮೂಲಕ ಬುಧವಾರ ರಾತ್ರಿ ಕೊಲ್ಲಲಾಗಿದ್ದು, ಜತೆಗಿದ್ದ ನಕ್ಸಲರು ಕರ್ನಾಟಕದ ಕಡೆಗೆ ಬಂದಿರಬಹುದು ಎಂಬ ಶಂಕೆ ಮೂಡಿದೆ. ಜತೆಗಿದ್ದ‌
ವರು ಬೆಳ್ತಂಗಡಿಯವರೇ ಎಂಬ ಅನುಮಾನವೂ ಪೊಲೀಸ್‌ ಮೂಲಗಳಲ್ಲಿ ಮೂಡಿದೆ. 

ಚಟುವಟಿಕೆ 
ಆಂಧ್ರದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬೇರುಬಿಟ್ಟಿದ್ದ ನಕ್ಸಲ್‌ ಚಟುವಟಿಕೆ ಕೇರಳಕ್ಕೆ ಹಬ್ಬಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಒಕ್ಕಲೆಬ್ಬಿಸುತ್ತಾರೆ ಎಂಬ ನೆವದಿಂದ ಆದಿವಾಸಿಗಳ ವಿಶ್ವಾಸ ಗಿಟ್ಟಿಸಿ ಸರಕಾರದ ವಿರುದ್ಧ ಎತ್ತಿಕಟ್ಟಿ ನಕ್ಸಲ್‌ ಚಳವಳಿಗೆ ಸೇರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅವರ ಬಣ್ಣದ ಮಾತಿಗೆ ಮರುಳಾಗಿ ಬೆಳ್ತಂಗಡಿ ತಾಲೂಕಿನ ಕೆಲವರು ನಕ್ಸಲರಾಗಿ ಜೀವ ಕಳೆದುಕೊಂಡರು. ಉಳಿದವರು ತಲೆಮರೆಸಿ
ಕೊಂಡರು. ನಕ್ಸಲ್‌ ವಿರೋಧಿ ಪಡೆಯ ಕಾರ್ಯ ತೀವ್ರತೆಯಿಂದ ನಕ್ಸಲರ ಸಂಖ್ಯಾಬಲ ಕಡಿಮೆಯಾಯಿತು.

ನಾಡಿನ ಬೆಂಬಲವೂ ಕಡಿಮೆಯಾಯಿತು. ಹೊಸದಾಗಿ ಸಂಘಟನೆಗೆ ಸೇರುವವರೇ ಇಲ್ಲವೆಂದಾಗ ನಕ್ಸಲರಿಗೆ ವಲಸೆ ಅನಿವಾರ್ಯವಾಯಿತು. ಅವರು ಮಡಿಕೇರಿ ಮೂಲಕ ಕೇರಳ ಸೇರಿಕೊಂಡರು.

ಮುರಿದುಬಿದ್ದ ಮಾತುಕತೆ
ನಕ್ಸಲರ ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಈ ಹಿಂದಿನ ರಾಜ್ಯ ಸರಕಾರದ ಮೂಲಕ ನಡೆಸಲಾಗಿತ್ತು. ಅದರ ನೇತೃತ್ವ ವಹಿಸಿದ್ದ ಗೌರಿ ಲಂಕೇಶ್‌ ಹತ್ಯೆ ಬಳಿಕ ಆ ಪ್ರಯತ್ನವೂ ಹಿನ್ನಡೆಕಂಡಿದೆ. ಆದರೆ ಕೇರಳದಲ್ಲಿ ನಕ್ಸಲ್‌ ಬೇರು ಸಕ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಬಿರುಸುಗೊಂಡಿತ್ತು. ಒಂದು ತಿಂಗಳ ಹಿಂದೆ ರಾಷ್ಟ್ರೀಯ ತನಿಖಾ ದಳದವರು ಉಡುಪಿ -ಚಿಕ್ಕಮಗಳೂರು ಜಿಲ್ಲಾ ಗಡಿ, ಮೈಸೂರು ಜಿಲ್ಲಾ ಗಡಿ ಭಾಗದಲ್ಲಿ ತನಿಖೆ ನಡೆಸಿದ್ದರು. ಇದರಲ್ಲಿ ಪ್ರಮುಖವಾಗಿ ಬೆಳ್ತಂಗಡಿಯ ನಕ್ಸಲ್‌ ನಾಯಕಿ ಸುಂದರಿಯ ತಂಡದ ಹುಡುಕಾಟವೂ ನಡೆದಿತ್ತು. ಅದಾಗಿ ತಿಂಗಳಲ್ಲಿ ಎನ್‌ಕೌಂಟರ್‌ ನಡೆದಿದೆ. ಹಾಗಾಗಿ ನಕ್ಸಲರು ಕೇರಳ ಬಿಟ್ಟು ಕರ್ನಾಟಕ ತಲುಪಿರುವ ಕುರಿತು ಶೋಧ ನಡೆಸಲಾಗುತ್ತಿದೆ.

ಯಾರವರು?
ಜಲೀಲ್‌ ಮತ್ತು ತಂಡದವರು ರೆಸಾರ್ಟ್‌ ಒಂದಕ್ಕೆ ಹೋಗಿ ಆಹಾರ ಹಾಗೂ ಹಣಕ್ಕಾಗಿ ಒತ್ತಾಯಿಸಿದಾಗ ಅವರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಶೋಧ ಕಾರ್ಯ ನಿರತವಾಗಿದ್ದ ವಿಶೇಷ ದಳದವರು ಎನ್‌ಕೌಂಟರ್‌ ನಡೆಸಿದ್ದಾರೆ. ಆಗ ಆತನ ಜತೆಗೆ ನಾಲ್ವರು ಇದ್ದರು ಎನ್ನಲಾಗಿದೆ. ಅವರು ದಟ್ಟ ಕಾಡಿನಲ್ಲಿ ತಲೆಮರೆಸಿಕೊಂಡಿದ್ದು ಕರ್ನಾಟಕದವರೆಯೋ ಅಥವಾ ಕೇರಳ ಮೂಲದವರೋ ಎಂದು ತಿಳಿದಿಲ್ಲ. 2018ರಲ್ಲಿ ಶಿರಾಡಿಯಲ್ಲಿ ಶಸ್ತ್ರಧಾರಿಗಳು ಮನೆ ಮನೆಗೆ ಭೇಟಿ ನೀಡಿದ್ದರು. ಇದೇ ತಂಡ ಕೊಡಗು ಗಡಿಭಾಗದ ಕೇರಳದ ಕೊಯ್ನಾಡಿನಲ್ಲಿ ಇದ್ದುದು ಎನ್ನಲಾಗಿದೆ. 

ಶೋಧ ನಡೆಯುತ್ತಿದೆ
ನಕ್ಸಲರು ಕೇರಳದಿಂದ ಬೇರೆ ಕಡೆಗೆ ಹೋಗಿರುವ ಕುರಿತು ಮಾಹಿತಿ ಬಂದಿದೆ. ಅದಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಕಂಟ್ರೋಲ್‌ ರೂಂ ಮೂಲಕ ಮಾಹಿತಿ ಸಂಗ್ರಹ, ಚೆಕ್‌ಪೋಸ್ಟ್‌ ಮುಖಾಂತರ ವಾಹನ ತಪಾಸಣೆ ಮಾಡಲಾಗುತ್ತಿದೆ. ಶೋಧ ಕಾರ್ಯವೂ ಕೈಗೊಳ್ಳಲಾಗುತ್ತಿದೆ. ನಾಗರಿಕರು ಭಯಪಡುವ ಅಗತ್ಯವಿಲ್ಲ.
 - ನಿಶಾ ಜೇಮ್ಸ್‌, ಉಡುಪಿ ಎಸ್‌ಪಿ

ಶೋಧಕಾರ್ಯ
ಎರಡು ದಿನಗಳಿಂದ ಮಡಿಕೇರಿ, ಎಚ್‌ಡಿ ಕೋಟೆ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎಎನ್‌ಎಫ್ ತಂಡ ಬಿರುಸಿನ ಶೋಧಕಾರ್ಯದಲ್ಲಿ ತೊಡಗಿದೆ. ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸರು ಹೈ ಅಲರ್ಟ್‌ ಘೋಷಿಸಿದ್ದಾರೆ. ವಾಹನ ತಪಾಸಣೆ, ಚೆಕ್‌ಪೋಸ್ಟ್‌ ರಚನೆ, ಶೋಧ ನಡೆಸಲಾಗುತ್ತಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.