ಕೋಡಿ: ಅಲೆಗಳಬ್ಬರಕ್ಕೆ ವಿದ್ಯಾರ್ಥಿ ಸಮುದ್ರಪಾಲು
Team Udayavani, Oct 1, 2018, 10:08 AM IST
ಕುಂದಾಪುರ: ಸಮುದ್ರ ತೀರಕ್ಕೆ ತೆರಳಿದ್ದ ಕಾಲೇಜು ವಿದ್ಯಾರ್ಥಿಯೋರ್ವ ಕಾಲುಜಾರಿ, ಬೃಹತ್ ಗಾತ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಪಾಲಾದ ಘಟನೆ ರವಿವಾರ ಕೋಡಿ ಬೀಚ್ನಲ್ಲಿ ಸಂಭವಿಸಿದೆ. ಕೋಡಿಯ ಹಳೆ ಅಳಿವೆ ನಿವಾಸಿ ಮಂಜ ಪೂಜಾರಿ ಹಾಗೂ ದೇವಕಿ ಪೂಜಾರ್ತಿ ದಂಪತಿ ಪುತ್ರ ಮನೋಜ್ ಪೂಜಾರಿ (18) ಸಮುದ್ರ ಪಾಲಾದ ವಿದ್ಯಾರ್ಥಿ.
ಅವರು ಕೋಡಿಯಲ್ಲಿ ತಮ್ಮ ಮನೆಯ ಸಮೀಪವೇ ಇರುವ ಸಮುದ್ರಕ್ಕೆ ಮಧ್ಯಾಹ್ನ ತಂದೆಯ ಜತೆಗೆ ಮೀನುಗಾರಿಕೆಗೆಂದು ತೆರಳಿದ್ದಾಗ ದುರಂತ ಸಂಭವಿಸಿದೆ. ಸಂಜೆಯವರೆಗೂ ನೀರುಪಾಲಾದ ಯುವಕನ ಪತ್ತೆಯಾಗಿಲ್ಲ. ಕುಂದಾಪುರ ಎಸ್ಐ ಹರೀಶ್ ಆರ್. ನಾಯ್ಕ, ವೃತ್ತ ನಿರೀಕ್ಷಕ ಮಂಜಪ್ಪ, ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ.
ಅಗ್ನಿ ಶಾಮಕ ದಳದ ಸಿಬಂದಿ, ಸ್ಥಳೀಯ ಲೈಫ್ಗಾರ್ಡ್, ಪೊಲೀ ಸರು, ನಾಗರಿಕರು ಕಾರ್ಯಾ ಚರಣೆ ಯಲ್ಲಿ ಪಾಲ್ಗೊಂಡಿದ್ದರು. ಹತ್ತಾರು ದೋಣಿಗಳ ಮೂಲಕ ಸ್ಥಳೀಯರು ಮನೋಜ್ಗಾಗಿ ಹುಡುಕಾಟ ನಡೆಸಿದರು. ಬಳಿಕ ಕೈರಂಪಣಿ ಬಲೆ ಬಳಸಿ ನೂರಕ್ಕೂ ಅಧಿಕ ಮೀನುಗಾರರು ತಮ್ಮ ಜೀವದ ಹಂಗು ತೊರೆದು ಕಡಲಿಗಿಳಿದು ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.
ಒಬ್ಬನೇ ಪುತ್ರ
ಮನೋಜ್ ಕೋಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ತಂದೆ ಮಂಜ ಪೂಜಾರಿ ಅವರು ಮೀನುಗಾರರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಈ ದಂಪತಿಗೆ ಮನೋಜ್ ಒಬ್ಬನೇ ಪುತ್ರರಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ