ಮಕ್ಕಳ ವನ ನಿರ್ಮಾಣಕ್ಕೆ ಮುಂದಾದ ಗ್ರಾಮೀಣ ವಿದ್ಯಾಸಂಸ್ಥೆ

ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರ: 3 ಎಕರೆ ಜಾಗದಲ್ಲಿ 500 ಹಣ್ಣಿನ ಗಿಡ ನೆಟ್ಟ ಶಾಲಾ ವಿದ್ಯಾರ್ಥಿಗಳು

Team Udayavani, Aug 20, 2019, 5:07 AM IST

1708TKE2-2

ತೆಕ್ಕಟ್ಟೆ: ತಂತ್ರಜ್ಞಾನದ ಹಾದಿಯಲ್ಲಿ ದೂರವಾಗುತ್ತಿರುವ ನಿಸರ್ಗದ ನಡುವಿನ ಸಂಬಂಧ ಈ ನಡುವೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದ ಪರಿಸರದಲ್ಲಿ 500 ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಹಣ್ಣಿನ ಗಿಡ ನೆಟ್ಟು ನಿಸರ್ಗ ಜಾಗೃತಿ ಮೂಡಿಸಿದರು.

500ಕ್ಕೂ ಅಧಿಕ ಹಣ್ಣಿನ ಗಿಡ
ಈ ಹಿಂದೆ ಕೆಂಪು ಕಲ್ಲು ಕಡಿಯುತ್ತಿದ್ದ ಗಟ್ಟಿಯಾದ ಸುಮಾರು 3 ಎಕರೆ ವಿಸ್ತೀರ್ಣದ ಜಾಗದಲ್ಲಿ ವಿವಿಧ ಬಗೆಯ ದೇಶ ವಿದೇಶದ ಸುಮಾರು 500ಕ್ಕೂ ಅಧಿಕ ಗಿಡಗಳು ಶಾಲಾ ಆಡಳಿತ ಮಂಡಳಿಯ ಮಾರ್ಗದರ್ಶನದಂತೆ ಗ್ರಾಮೀಣ ಭಾಗದ ಕನ್ನಡ ಶಾಲೆಯಲ್ಲಿ ಅನಾವರಣಗೊಂಡಿದೆ.

ಸಾಕಾರಗೊಂಡ ಕನಸು
ಶಾಲಾ ಸಂಚಾಲಕ ಉದ್ಯಮಿ ರಮೇಶ್‌ ನಾಯಕ್‌ ತೆಕ್ಕಟ್ಟೆ ಅವರು ಹಲವು ಸಾಮಾಜಿಕ ಕಾರ್ಯದಲ್ಲಿಯೇ ತನ್ನನ್ನು ತಾನು ತೊಡಗಿಸಿಕೊಂಡವರು. ಈ ನಡುವೆ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾ ಕೇಂದ್ರದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಶಾಲಾ ಪರಿಸರವನ್ನು ಸಂಪೂರ್ಣ ಹಸಿರುಮಯಗೊಳಿಸಬೇಕು ಎನ್ನುವ ಹಂಬಲ. ಶಾಲಾ ಪರಿಸರದಲ್ಲಿನ ಕೆಂಪು ಕಲ್ಲು ಕಡಿಯುತ್ತಿದ್ದ ಗಟ್ಟಿಯಾದ ಖಾಲಿ ಇರುವ ಜಾಗದಲ್ಲಿ ಏನಾದರೂ ಹಣ್ಣಿನ ತೋಟ ಮಾಡಿ ಮುಂದಿನ ತಲೆಮಾರಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕು ಎನ್ನುವ ನಿಟ್ಟಿನಿಂದ ಸಂಬಂಧಪಟ್ಟ ತೋಟಗಾರಿಕೆ ಇಲಾಖೆಯಲ್ಲಿನ ತಜ್ಞ ವಿಜ್ಞಾನಿಗಳನ್ನು ಕರೆಸಿ, ಈ ಪರಿಸರದ ಮಣ್ಣಿಗೆ ಹೊಂದಿಕೊಳ್ಳುವ ಹಣ್ಣಿನ ಗಿಡ ಹಾಗೂ ಅದಕ್ಕೆ ಪೂರಕವಾಗಿ ಬೇಕಾದ ಗೊಬ್ಬರ ಮೂರು ಅಡಿ ಹೊಂಡ ತೆಗೆದು ಮಕ್ಕಳ ಹಣ್ಣಿನ ತೋಟದ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ.

ಇಂಗುಗುಂಡಿ ನಿರ್ಮಾಣ
ಎಪ್ರಿಲ್‌ ಮೇ ತಿಂಗಳಲ್ಲಿ ಈ ಭಾಗದಲ್ಲಿ ನೀರಿನ ಅಭಾವ ಹೆಚ್ಚಾಗುತ್ತದೆ. ಪರಿಣಾಮ ಮಳೆಗಾಲದ ಆರಂಭಕ್ಕೂ ಮುನ್ನ ಮಕ್ಕಳ ಹಣ್ಣಿನ ತೋಟ ನಿರ್ಮಿಸಲು ಮೀಸಲಿರಿಸಿದ ಜಾಗದಲ್ಲೇ ವೈಜ್ಞಾನಿಕವಾಗಿ ಹೊಂಡ ತೆಗೆಯಲಾಗಿದ್ದು, ಪರಿಸರ ಸ್ನೇಹಿ ಮಳೆ ನೀರು ಇಂಗಿಸುವ ಮಹತ್ವದ ಕಾರ್ಯಕ್ಕೂ ಮುಂದಾಗಿ ಮಾದರಿಯಾಗಿದ್ದಾರೆ.

ದೇಶಿ ಹಾಗೂ ವಿದೇಶಿ ತಳಿಗಳು
ಸಿಹಿ ಹುಣಸೆ, ಹನುಮಾನ್‌ ಫಲ, ಗೋಲ್ಡನ್‌ ಸೀತಾಫಲ, ಹಸಿರು ಜಂಬು ನೇರಳೆ, ಪಿಂಕ್‌ ಜಂಬು ನೇರಳೆ, ರೆಡ್‌ ಜಂಬು ನೇರಳೆ, ರೆಡ್‌ ಪೇರಳೆ, ಕೆ.ಜಿ.ಪೇರಳೆ, ವೆಂಗೇ ಟೆಡ್‌ ಪೇರಳೆ, ಶೇಡ್‌ ಚೆರ್ರಿ, ಬಾಬುìಡಾನ್‌ ಚೆರ್ರಿ, ಬೇಕರಿ ಚೆರ್ರಿ, ಬ್ರಿಟಿಷ್‌ ಚೆರ್ರಿ, ರೊಲಿನಾ, ಬರಾಬ, ಮೂಟಿ ಫ್ರುಟ್‌, ಮಲ್‌ ಬೆರ್ರಿ, ಬನಾನ ಚಿಕ್ಕು, ಜಂಬೂ ಫಲ, ರುದ್ರಾಕ್ಷಿ, ಕರ್ಪೂರ, ಲಾಂಗ್‌ ಲೆಮನ್‌, ಬಿಳಿ ನೇರಳೆ, ಮ್ಯಾಂಗೋಸ್ಟಿನ್‌, ಸಿಹಿ ಅಮಟೆ, ಲುವಿ ಲುವಿ, ಲಕೋಟೆ, ಜಮೈಕನ್‌ ಚೆರ್ರಿ, ವೆರಿಗೇ ಟೆಡ್‌ ಚಿಕ್ಕು, ಚೈನೀಸ್‌ ಮುಸುಂಬಿ, ಅಂಜೂರ, ಸಲಾಡ್‌ ಆರೆಂಜ್‌, ಐಸ್‌ಕ್ರೀಮ್‌ ಬೀನ್‌, ಮಾಪರಂಗ್‌, ಡ್ರಾಗನ್‌ ಫ್ರುಟ್‌, ಚೀಲ, ಖರ್ಜೂರ, ಅಪ್ರಿಕೋಟ್‌, ಗ್ಯಾಬೆ ಫ್ರುಟ್‌, ಮಿಲ್ಕಿ ಫ್ರುಟ್‌, ಲಾಂಗಾನ್‌, ಲಾಂಗ್‌ ಸಾಟ್‌, ಜಬೋಟಿಕಾಬ, ಕೆಪೆಲ್‌, ಅಭಿಯು, ಸಾಂಟಾಲ್‌, ಡುರಿಯನ್‌, ಸಲಾಕ, ಲಿಚಿ, ಎಲಿಫೆಂಟ್‌ ಆ್ಯಪಲ್‌, ಮಲಬಾಲ್‌ ಚೆಸ್ಟ್‌ನೆಟ್‌ ಟ್ರಿ, ಸ್ವೀಟ್‌ ಕೋಕಂ, ಅಚಾಚ, ಮಕಡಮಿಯಾ ನಟ್‌, ಬುದ್ಧಾಸ್‌ ಹ್ಯಾಂಡ್‌ ಲೈಮ್‌, ನಟಾಲ್‌ ಪ್ಲಮ್‌, ಸಿಹಿ ಕರಂಡೆ, ಲೈಮ್‌ ಬೆರ್ರಿ, ಸಿಹಿ ಅಕರೊಲು ಚೆರ್ರಿ, ಮುಡ್ರೋನೊ, ಬರ್ಮಿಸ್‌ ಟ್ರೀಗ್ರೇಪ್‌, ಕುಂಟಾಲ ಹಣ್ಣು, ಬ್ಲ್ಯಾಕ್‌ ಬೆರ್ರಿ, ಹೈಬ್ರಿಡ್‌ ಬಿಗ್ನಾಯ್‌, ಅಗರವುಡ್‌, ಪೊನ್ನೇರಳೆ, ವೈಟ್‌ ಸಪೋಟ, ಪ್ಲಮ್‌, ಪುಲಾಸನ್‌, ಚಂಪಡಕ, ವಾಂಟೆ ಹುಳಿ ಇತ್ಯಾದಿ ದೇಶಿ ಹಾಗೂ ವಿದೇಶಿ ತಳಿಗಳ ಹಣ್ಣಿನ ಗಿಡ ನೆಡಲಾಗಿದೆ.

ಜಾಗರತರಾಗಬೇಕು
ನಾವುಎಲ್ಲಿ ನಿಂತಿದ್ದೇವೆ ಎನ್ನುವ ವಿಚಾರವನ್ನು ಮೊದಲು ಯೋಚನೆ ಮಾಡುವುದಾದರೆ, ಕರಾವಳಿಯಲ್ಲಿ ಪ್ರತಿ ವರ್ಷ ಮೂರುವರೆ ಸಾವಿರದಿಂದ ಸುಮಾರು ನಾಲ್ಕೂವರೆ ಸಾವಿರ ಮಿ.ಲೀ ನಷ್ಟು ಮಳೆ ಬರುತ್ತಿರುವುದು ಶತಃಶುದ್ಧ. ಹಾಗೂ ಇದಕ್ಕೆ ದಾಖಲೆ ಇದೆ .ಆದರೆ ಬದಲಾದ ಕಾಲದಲ್ಲಿ ಕರಾವಳಿಯಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಗೆ ಬಂದು ತಲುಪಿರುವುದು ಆತಂಕಕಾರಿ ವಿಚಾರ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆ ನೀರು ಇಂಗಬೇಕಾದ ಕೆರೆಗಳು ಮಾಯವಾಗಿ ಅಪಾರ್ಟ್‌ಮೆಂಟ್‌ಗಳು ಬಂದು ನಿಂತಿವೆ .ಈ ನಿಟ್ಟಿನಲ್ಲಿ ನಮ್ಮ ಪರಿಸರದಲ್ಲಿರುವ ಮರಗಿಡಗಳನ್ನು ಉಳಿಸಿ ಬೆಳಸುವ ಬಗ್ಗೆ ಶಿಕ್ಷಣದ ಜತೆಗೆ ಮೊದಲು ನಾವು ಜಾಗೃತರಾಗಬೇಕಾಗಿದೆ.
-ಡಾ| ಎಚ್‌. ಲಕ್ಷ್ಮೀಕಾಂತ,
ಜಿಲ್ಲಾ ಪರಿಸರ ಅಧಿಕಾರಿಗಳು

ಪೈಪ್‌ಲೈನ್‌ ಅಳವಡಿಕೆ
ಕಳೆದ ಹಲವು ವರ್ಷಗಳಿಂದಲೂ ಶಾಲಾ ಪರಿಸರದ ಪ್ರಕೃತಿಯ ಮಡಿಲಲ್ಲಿ ಮಕ್ಕಳ ವನ ನಿರ್ಮಿಸಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲಕ್ಕೆ ಪೂರಕವಾಗಿ ಎಲ್ಲರ ಸಹಕಾರ ದೊರೆತಿದೆ. ಸುಮಾರು 3 ಎಕರೆ ವಿಸ್ತೀರ್ಣ ಜಾಗದಲ್ಲಿ 500 ಹಣ್ಣಿನ ಗಿಡ ನೆಡಲಾಗಿದ್ದು ಅದರಲ್ಲಿ 260 ಗಿಡಗಳು ಚಿಗುರಿದೆ. ಗಿಡಗಳ ಆರೈಕೆ ಮಾಡುವ ನಿಟ್ಟಿನಿಂದ ಪ್ರತಿ ಗಿಡಗಳಿಗೆ ದಿನಕ್ಕೆ 4 ಲೀಟರ್‌ ನೀರು ಪೂರೈಕೆ ಮಾಡುವ ಸಲುವಾಗಿ ಪೈಪ್‌ ಲೈನ್‌ ಅಳವಡಿಸಲಾಗಿದೆ.
– ಟಿ.ರಮೇಶ್‌ ನಾಯಕ್‌ ತೆಕ್ಕಟ್ಟೆ ,
ಸಂಚಾಲಕರು, ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್- ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.