ಶಂಕರಪುರ : ಆರೋಗ್ಯ ತಪಾಸಣೆಗೆ ಬಂದ ಮಹಿಳೆಯ ಮಾನಭಂಗಕ್ಕೆ ಯತ್ನ; ವೈದ್ಯರ ವಿರುದ್ಧ ದೂರು
Team Udayavani, Jun 14, 2022, 7:37 PM IST
ಶಿರ್ವ: ಆರೋಗ್ಯ ತಪಾಸಣೆಗೆಂದು ಪತಿಯೊಂದಿಗೆ ಕ್ಲಿನಿಕ್ಗೆ ಹೋಗಿದ್ದ ಮಹಿಳೆಯ ಮೇಲೆ ವೈದ್ಯರೊಬ್ಬರು ಮಾನಭಂಗಕ್ಕೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಆರೋಗ್ಯ ತಪಾಸಣೆಗಾಗಿ ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಸೋಮವಾರದಂದು ಶಂಕರಪುರದಲ್ಲಿರುವ ಶ್ರೀನಿವಾಸ ಆರೋಗ್ಯಾಲಯ ಕ್ಲಿನಿಕ್ಗೆ ಹೋಗಿದ್ದರು ಈ ವೇಳೆ ಅಲ್ಲಿನ ವೈದ್ಯರಾದ ಡಾ| ಮುರಳೀಕೃಷ್ಣ ಭಟ್ ಅವರು ತಪಾಸಣೆ ನೆಪದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.
ವೈದ್ಯರ ವಿರುದ್ಧ ಮಹಿಳೆಯೋರ್ವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : 15 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ ಕಾರು ಚಾಲಕನ ಬಂಧನ