ಶಂಕರಪುರ ಮಲ್ಲಿಗೆ ದರ ಇಳಿಕೆ
Team Udayavani, Nov 11, 2019, 5:16 AM IST
ಶಿರ್ವ: ಹಬ್ಬಗಳು, ಶುಭ ಸಮಾರಂಭಗಳ ಸೀಸನ್ ಕಾರಣದಿಂದ ಅ. 24ರ ಬಳಿಕ ಕಟ್ಟೆಯಲ್ಲಿ ಸರಾಸರಿ 1 ಸಾವಿರ ರೂ.ಗಳಲ್ಲಿದ್ದ ಶಂಕರಪುರ ಮಲ್ಲಿಗೆಯ ದರ ಉತ್ಥಾನದ್ವಾದಶಿ ಕಳೆಯುತ್ತಿದ್ದಂತೆಯೇ ರವಿವಾರ 630 ರೂ.ಗಳಿಗೆ ಇಳಿದಿದೆ. ಜಾಜಿ 220 ರೂ. ತಲುಪಿದೆ.
ನವರಾತ್ರಿಯ ಬಳಿಕ ಬೇಡಿಕೆ ಕಡಿಮೆಯಾಗಿ ಇಳಿಕೆಯಾಗಿದ್ದ ಶಂಕರಪುರ ಮಲ್ಲಿಗೆಯ ದರದಲ್ಲಿ ದೀಪಾವಳಿ ಹಬ್ಬದೊಂದಿಗೆ ಮದುವೆ ಇನ್ನಿತರ ಶುಭ ಸಮಾರಂಭಗಳು ಪ್ರಾರಂಭವಾಗಿ ಭಾರೀ ಏರಿಕೆ ಕಂಡಿತ್ತು. ಅ. 31ರಿಂದ ನ. 3ರ ವರೆಗೆ 1,250 ರೂ. ಇದ್ದ ದರ ಇಳಿಕೆಯಾಗಿ ನ. 5ರಂದು 630 ರೂ. ತಲುಪಿತ್ತು. ಬಳಿಕ ಏರಿಕೆ ಕಂಡು ನ.8 ಮತ್ತು 9ರಂದು 1,250 ರೂ. ದರವಿತ್ತು.
ಉತ್ತಮ ದರ ಕಾಯ್ದುಕೊಂಡ ಜಾಜಿ
ಸಾಮಾನ್ಯವಾಗಿ ಜಾಜಿ ಹೂವಿನ ದರ ನವರಾತ್ರಿಯ ಬಳಿಕ ಕಡಿಮೆಯಾಗಿ ದೀಪಾವಳಿ ಹಬ್ಬದ ಒಂದೆರಡು ದಿನ ಮಾತ್ರ ಉತ್ತಮವಿರುತ್ತದೆ. ಆದರೆ ಈ ಬಾರಿಯ ವಿಪರೀತ ಮಳೆಯಿಂದಾಗಿ ಮಲ್ಲಿಗೆಯ ಇಳುವರಿ ಕಡಿಮೆಯಾಗಿ ಜಾಜಿಯ ದರ ಏರಿಕೆ ಕಂಡಿತ್ತು. ಸೀಸನ್ನಲ್ಲಿ ಅ. 6 ಮತ್ತು ನ. 2ರಂದು ಜಾಜಿ ಅಟ್ಟೆಗೆ 850 ರೂ. ಬಂಪರ್ ದರವಿತ್ತು. ರವಿವಾರ 220 ರೂ.ಗೆ ತಲುಪಿದೆ.
ಮಳೆಯಿಂದ ಹಾಳಾಗಿ, ಬಿಸಿಲಿಗೆ ಚಿಗುರೊಡೆದ ಗಿಡಗಳು ಚಳಿಗೆ ಮತ್ತಷ್ಟು ಹಾಳಾಗಲಿದ್ದು, ಈ ಬಾರಿ ಮಲ್ಲಿಗೆ ದುಬಾರಿಯಾಗಬಹುದು ಎಂದು ಶಿರ್ವದ ಮಲ್ಲಿಗೆ ವ್ಯಾಪಾರಿ, ಕೃಷಿಕ ವಿಲಿಯಂ ಮಚಾದೋ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ