ಅಪಾರ ಕೃಷಿಭೂಮಿ ನೀರು ಪಾಲು
ಸಂಕಲಕರಿಯ ಶಾಂಭವಿ ಅಣೆಕಟ್ಟು ಬಳಿ ತಡೆಗೋಡೆ ಕುಸಿತ
Team Udayavani, May 21, 2020, 5:31 AM IST
ಬೆಳ್ಮಣ್: ನೂರಾರು ಎಕರೆ ಕೃಷಿಭೂಮಿಗೆ ನೀರುಣಿಸುತ್ತಿದ್ದ ಸಂಕಲ ಕರಿಯ ಶಾಂಭವಿ ನದಿ ಅಣೆಕಟ್ಟುವಿನ ಬಳಿಯ ಉಡುಪಿ ಜಿಲ್ಲಾ ಭಾಗದ ತಡೆಗೋಡೆ ಕುಸಿದು ಅಪಾರ ಕೃಷಿ ಭೂಮಿ ನೀರು ಪಾಲಾಗಿದೆ.
ಮಳೆಗಾಲದ ಸಂದರ್ಭ ಅಣೆಕಟ್ಟುವಿನ ಇಕ್ಕೆಲಗಳಲ್ಲಿ ತಡೆಗೋಡೆ ಕುಸಿದು ಅಕ್ಕ ಪಕ್ಕದ ಕೃಷಿಭೂಮಿಗಳು ನೀರು ಪಾಲಾಗಿದ್ದವು. ಇವುಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲಾ ಬಾಗದಲ್ಲಿ ಆ ಭಾಗದ ಜಿಲ್ಲಾಡಳಿತ ಹಾಗೂ ಇಲಾಖೆ ನೂತನ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದರೂ ಉಡುಪಿ ಭಾಗದಲ್ಲಿನ ಕುಸಿತದ ಬಗ್ಗೆ ಇಲ್ಲಿನ ಜಿಲ್ಲಾಡಳಿತ ಹಾಗೂ ಇಲಾಖೆ ತಲೆ ಕೆಡಿಸದಿರುವುದು ಈ ಭಾಗದ ಕೃಷಿಕರ ಬೇಸರಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತಕ್ಕೂ ದೂರು
ಸಂಕಲಕರಿಯ ಮೇರಿ ರೋಮನ್ ಸೆರಾವೋರವರ ಗದ್ದೆ ಅರ್ಧಕ್ಕೂ ಹೆಚ್ಚು ಕುಸಿದು ಅಣೆಕಟ್ಟುವಿನ ಪರಿಣಾಮ ಇದೀಗ ಆ ಕುಟುಂಬ ಪರಿತಪಿಸುವಂತಾಗಿದೆ.
ಈಗಾಗಲೇ ಪಂಚಾಯತ್ ಮಟ್ಟದಿಂದ ಹಿಡಿದು ಜಿಲ್ಲಾಡಳಿತಕ್ಕೂ ದೂರು ನೀಡಲಾಗಿದ್ದು ಯಾರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು