ಶೀರೂರು ಶ್ರೀ ಸಾವು: ಅಂತಿಮ ತನಿಖಾ ವರದಿ ಬಹಿರಂಗ


Team Udayavani, Jul 20, 2019, 5:15 AM IST

shiroor-swamiji-death

ಉಡುಪಿ: ಶೀರೂರು ಶ್ರೀಗಳ ಸಾವಿನ ತನಿಖೆಯ ಅಂತಿಮ ವರದಿಯನ್ನು ಉಪ್ಪೂರಿನ ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಶುಕ್ರವಾರ ನಡೆದ ಶ್ರೀ ಲಕ್ಷ್ಮೀವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ವಕೀಲರಾದ ರವಿಕಿರಣ್‌ ಮುಡೇìಶ್ವರ ಅವರು ಬಹಿರಂಗಪಡಿಸಿದರು.

ವರದಿಯಲ್ಲಿ 1,115 ಪುಟಗಳಿದ್ದು, ಇದರಲ್ಲಿ ಉಲ್ಲೇಖೀಸಿರುವಂತೆ ಪ್ರಕರಣದ ತನಿಖಾಧಿಕಾರಿಯಾಗಿರುವ ಕಾರ್ಕಳದ ಡಿವೈಎಸ್‌ಪಿ ಬೆಳ್ಳಿಯಪ್ಪ ಕೆ.ಯು. ತನ್ನ 54ನೇವಯಸ್ಸಿನಲ್ಲಿ ಮರಣ ಹೊಂದಿರುವ ಸ್ವಾಮೀಜಿಯದ್ದು ಸ್ವಾಭಾವಿಕ ಮರಣ ಎಂದು ಹೇಳಿ ಕಡತ ಮುಕ್ತಾಯಗೊಳಿಸಿದ್ದಾರೆ. ವಿಚಾರಣೆ, ವಿಧಿವಿಜ್ಞಾನ ತಜ್ಞರ ಹೇಳಿಕೆಗಳು, ಪೋಸ್ಟ್‌ಮಾರ್ಟಂ ವರದಿ, ವಿಷ ವಿಜ್ಞಾನಿಗಳ ವರದಿಗಳು ದಾಖಲಾಗಿವೆ.

ವೈದ್ಯರ ಪ್ರಕಾರ ದೇಹದಲ್ಲಿ ವಿಷ ಅಂಶ ಇತ್ತು
ಮಣಿಪಾಲ ಕೆಎಂಸಿಯ ಮೆಡಿಕಲ್‌ ಸುಪರಿಂಟೆಂಡೆಂಟ್‌ ಆಗಿರುವ ಡಾ| ಅವಿನಾಶ್‌ ಶೆಟ್ಟಿ ಅವರ ಪ್ರಕಾರ ಸ್ವಾಮೀಜಿಯ ದೇಹದಲ್ಲಿ ವಿಷದ ಅಂಶ ಇತ್ತು. ಡಾ| ಅವಿನಾಶ್‌ ಶೆಟ್ಟಿ ಮಾತ್ರವಲ್ಲದೆ ಟಾಕ್ಸಿಕಾಲಜಿ(ವಿಷವಿಜ್ಞಾನಿ) ವರದಿಯಲ್ಲೂ ಸ್ವಾಮೀಜಿಯವರ ರಕ್ತ, ಮೂತ್ರ ಮತ್ತು ಉದರದ ಅಂಶಗಳು ಪರಿಶೀಲನೆಗೆ ಒಳಪಟ್ಟಿದ್ದು, ಮೂರರಲ್ಲೂ ವಿಷವಿದೆ ಎಂದು ಟಾಕ್ಸಿಕಾಲಜಿಸ್ಟ್‌ ಕೆಎಂಸಿಯ ಅಸೋಸಿಯೇಟ್‌ ಪ್ರೊ| ಡಾ| ಅಶ್ವಿ‌ನಿ ಕುಮಾರ್‌ ಮತ್ತು ಡಾ| ಅನಿತಾ ಎಸ್‌. ತಿಳಿಸಿದ್ದಾರೆ. ಇನ್ನು ಮರಣೋತ್ತರ ವರದಿ ಪರೀಕ್ಷೆಯಲ್ಲೂ ಶ್ರೀಗಳ ರಕ್ತದಲ್ಲಿ ವಿಷದ ಅಂಶ ಇದೆ ಎನ್ನುವುದು ದೃಢವಾಗಿದೆ. ಈ ಬಗ್ಗೆ ಸ್ವಾಭಾವಿಕ ಮರಣ ದಾಖಲಾದುದು ಅಚ್ಚರಿ ತಂದಿದೆ ಎಂದು ರವಿಕಿರಣ್‌ ಮುಡೇìಶ್ವರ ಹೇಳಿದರು.

ಸುಪರಿಂಟೆಂಡೆಂಟ್‌ಗೆ ನೋಟಿಸ್‌
ಮಣಿಪಾಲದ ಕೆಎಂಸಿಯಲ್ಲಿ ಟಿಎಲ್‌ಸಿ ಟೆಸ್ಟ್‌ ಮಾಡಲಾಗಿ ವರದಿ ನೀಡಲಾಗಿದೆ. ಆದರೆ ತನಿಖಾಧಿಕಾರಿಯಾಗಿದ್ದ ಬೆಳ್ಳಿಯಪ್ಪ ಅವರು ಕೆಎಂಸಿಯ ಸುಪರಿಟೆಂಡೆಂಟ್‌ಗೆ ಯಾವ ಆಧಾರದಲ್ಲಿ ಹೇಳಿಕೆ ನೀಡಿದ್ದು ಎಂದು ನೋಟಿಸ್‌ ಜಾರಿ ಮಾಡಿದ್ದಾರೆ. ಇದಕ್ಕೆ ಡಾ| ಅವಿನಾಶ್‌ ಶೆಟ್ಟಿ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ. ಇಷ್ಟೆಲ್ಲ ವಿಚಾರಗಳಿರುವಾಗ ಯಾರೂ ಕೂಡ ಅಸಹಜ ಸಾವಿನ ಬಗ್ಗೆ ದೂರು ನೀಡಿಲ್ಲದ ಕಾರಣ ತನಿಖೆಗೆ ಹಿನ್ನಡೆಯಾಗಿದೆ ಎಂದರು.

ವಿಳಂಬ ಪರೀಕ್ಷೆಯೂ ಕಾರಣ
ಸ್ವಾಮೀಜಿಗಳು ಜು.19ಕ್ಕೆ ಮರಣ ಹೊಂದಿದ್ದು, ಜು.31ಕ್ಕೆ ಸಂಗ್ರಹಿಸಿದ ಉದರಾಂಗವನ್ನು ವಿಧಿವಿಜ್ಞಾನ ಪ್ರಯೋಗಕ್ಕೆ ಕಳುಹಿಸಿಲ್ಲ. ವಿಷದ ಪರೀಕ್ಷೆಯನ್ನು ವಿಳಂಬಮಾಡಿದ್ದೇ ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ. ಜು.31ಕ್ಕೆ ವಿಧಿ ವಿಜ್ಞಾನ ಪ್ರಯೋಗಕ್ಕೆ ಪತ್ರ ಬರೆಯಲಾಗಿದೆ. 11 ದಿನಗಳ ಕಾಲ ಉದರಾಂಗವನ್ನು ಶೇಖರಿಸಿಡಲಾಗಿತ್ತು. ಅವರು ಕೂಡ ವಿಳಂಬ ಮಾಡಿದರು. 20 ದಿನದ ಅನಂತರ ಪರೀಕ್ಷೆ ಮಾಡಲಾಯಿತು. ಇಲ್ಲಿ ವಿಷದ ಅಂಶ ಕಂಡುಬರುವುದಿಲ್ಲ. ಈ ವರದಿ ಅಲ್ಲಿಂದ ಬಂದಿದ್ದು, ಇವೆಲ್ಲವನ್ನು ಕ್ರೋಡೀಕರಿಸಿ ಸ್ವಾಭಾವಿಕ ಮರಣ ಎಂದು ವರದಿ ನೀಡಲಾಗಿದೆ ಎಂದರು.

ಸಾವು ಹೇಗಾಯಿತು?
ಗಾಯಗೊಂಡ ಕಿಡ್ನಿಯಿಂದ ಶ್ರೀಗಳು ಮೃತಪಟ್ಟಿದ್ದಾರೆ; ರೋಗಗ್ರಸ್ತ ಕಿಡ್ನಿಯಿಂದಲ್ಲ. ಶ್ರೀಗಳಿಗ ವಿಷಪ್ರಾಶನವಾಗಿದೆ. ನಾಳದಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ ಸ್ವಾಭಾವಿಕ ಮರಣ ಎಂಬುದಾಗಿ ತನಿಖಾಧಿಕಾರಿಗಳು ದಾಖಲಿಸಿದ್ದಾರೆ. ಆದರೆ ಕಡತ ಇನ್ನೂ ಜೀವಂತವಿದೆ. ಇದನ್ನು ಮುಂದುವರಿಸುವ ಅಗತ್ಯವಿದೆ ಎಂದರು. ಕೊಲೆ ಪ್ರಕರಣ, ಸಂಶಯದ ಸಾವಿಗೆ ಕಾಲ ಪರಿಮಿತಿ ಇಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್‌ನಲ್ಲಿ ರಿಟ್‌ ಕೂಡ ಸಲ್ಲಿಸಬಹುದು ಎಂದು ರವಿಕಿರಣ್‌ ಮುಡೇìಶ್ವರ ಹೇಳಿದ್ದಾರೆ.

ಆ. 7: ಶೀರೂರುಶ್ರೀ ಆರಾಧನೆ
ಉಡುಪಿ: ಕಳೆದ ವರ್ಷ ಅಸ್ತಂಗತರಾದ ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥರ ಆರಾಧನೋತ್ಸವ ಹಿರಿಯಡಕ ಸಮೀಪದ ಶೀರೂರು ಮೂಲ ಮಠದಲ್ಲಿ ಆ. 7ರಂದು ನಡೆಯಲಿದೆ. ಅಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ವೃಂದಾವನ ಸ್ಥಾಪನೆ ಮಾಡಲಾಗುವುದು.

ಕ್ಯಾಲೆಂಡರ್‌ ಪ್ರಕಾರದಂತೆ ಜು. 19ರಂದು ಉಪ್ಪೂರು ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಸ್ವಾಮೀಜಿಯವರ ಅಭಿಮಾನಿಗಳು ಸಂಸ್ಮರಣೆ ಮಾಡಿದರು. ತಿಥಿ, ನಕ್ಷತ್ರ ಕ್ರಮದಂತೆ ಮೂಲಮಠದಲ್ಲಿ ಆರಾಧನೆ ನಡೆಯಲಿದೆ.

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.