ಶೀರೂರು ಶ್ರೀ ಸಾವು : ಮೂರು ದಿನಗಳಲ್ಲಿ ವರದಿ ಬಹಿರಂಗ?
Team Udayavani, Aug 23, 2018, 2:10 AM IST
ಉಡುಪಿ: ಶೀರೂರು ಶ್ರೀಗಳ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯವು ಸಹಜ ಸಾವು ಎಂದು ಉಲ್ಲೇಖೀಸಿರುವ ಮಾಹಿತಿ ಲಭ್ಯವಾಗಿದೆ. ಪೊಲೀಸ್ ಇಲಾಖೆಯು ಈ ವರದಿಯನ್ನು ಮಣಿಪಾಲ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗಕ್ಕೆ ಕಳುಹಿಸಿದ್ದು ಅಲ್ಲಿಂದ ಅಂತಿಮ ವರದಿ ಬರಬೇಕಿದೆ. ಈ ಹಿಂದೆ 8 ಪುಟಗಳ ಪ್ರಾಥಮಿಕ ಮರಣೋತ್ತರ ವರದಿಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿದ್ದ ಮಣಿಪಾಲ ಆಸ್ಪತ್ರೆ, ಅಂತಿಮ ವರದಿಯನ್ನು ಎಫ್ಎಸ್ಎಲ್ ವರದಿ ಬಂದ ಬಳಿಕ ನೀಡುವುದಾಗಿ ತಿಳಿಸಿತ್ತು.
ಕಳೆದ ಶನಿವಾರವೇ ಎಫ್ಎಸ್ಎಲ್ ವರದಿ ಪೊಲೀಸರಿಗೆ ತಲುಪಿದೆ ಎನ್ನಲಾಗಿದ್ದು, ಮರಣೋತ್ತರ ಪರೀಕ್ಷೆಯ ಅಂತಿಮ ವರದಿಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ಆಸ್ಪತ್ರೆಯ ಫೊರೆನ್ಸಿಕ್ ವಿಭಾಗ ತನ್ನ ವರದಿಯನ್ನು ಎಫ್ಎಸ್ಎಲ್ ವರದಿಯೊಂದಿಗೆ ತಾಳೆ ಹಾಕಿ ಅಂತಿಮ ವರದಿಯನ್ನು ಸಲ್ಲಿಸಲ್ಲಿದೆ. ಇದೇ ಶನಿವಾರ ಅಥವಾ ಸೋಮವಾರ ವರದಿಯ ಅಂಶವನ್ನು ಪೊಲೀಸ್ ಇಲಾಖೆ ಬಹಿರಂಗಗೊಳಿಸುವ ಸಾಧ್ಯತೆ ಇದೆ.
ಶ್ರೀಗಳ ಸಾವು ಲಿವರ್ ಸಿರೋಸಿಸ್ನಿಂದ ಆಗಿದೆ ಎಂದು ಎಫ್ಎಸ್ಎಲ್ ವರದಿ ಹೇಳುತ್ತಿದೆ. ಇದು ಕೊನೆ ಹಂತದಲ್ಲಿದ್ದು, ಯಕೃತ್ನಲ್ಲಿ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಶ್ರೀಗಳ ಸಾವಿಗೆ ಸಂಬಂಧಿಸಿದಂತೆ, ಯಾವ ಕಾರಣಕ್ಕಾಗಿ ಅನುಮಾನಾಸ್ಪದ ಅಂಶ ಕಂಡು ಬಂದಿತು ಎಂದು ಪೊಲೀಸ್ ಇಲಾಖೆ ಮಣಿಪಾಲ ಆಸ್ಪತ್ರೆ ವೈದ್ಯರಿಗೆ ಪ್ರಶ್ನೆಗಳನ್ನು ಕೇಳಿದೆ ಎನ್ನಲಾಗಿದೆ.
ಮೂಲ ಮಠಕ್ಕೆ ಮುಕ್ತಿ?
ಪೊಲೀಸ್ ಸುಪರ್ದಿಯಲ್ಲಿರುವ ಶೀರೂರು ಮೂಲ ಮಠವನ್ನು ಶನಿವಾರದೊಳಗೆ ಶೀರೂರು ಮಠದ ದ್ವಂದ್ವ ಮಠ ಸೋದೆ ಮಠಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ನಿಗದಿಯಾದ ಆರಾಧನೆ ಕಾರ್ಯಕ್ರಮ ಪೊಲೀಸರ ಅನುಮತಿ ಸಿಗದಿದ್ದರೆ ಮುಂದೂಡುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್